06 ಅಕ್ಟೋಬರ್ 2010

ಮಾನವಿಲ್ಲದವರು . !

ಇವರಿಗೆ ಬಳಸಬೇಕಾದ ಶಬ್ದಗಳು ಯಾವುದು ಅಂತಾನೇ ತಿಳೀತಿಲ್ಲ. ಛೀ . ಥೂ . . , ಅಂತ ಬೈದರೂ ಅವರಿಗೆ ಮಾನವಿಲ್ಲ , ಮರ್ಯಾದೆ ಮೊದಲೇ ಇಲ್ಲ. ಈ ಮಾತು ಅನ್ವಯಿಸೋದು ಯಾರಿಗೆ ಗೊತ್ತಾ ?. ನಮ್ಮ ರಾಜ್ಯದ ಕೆಟ್ಟ ರಾಜಕಾರಣಿಗಳಿಗೆ.ನಮ್ಮ ದುಡ್ಡಲ್ಲಿ ಇವರದ್ದೇನು ರೆಸಾರ್ಟ್ ರಾಜಕೀಯ, ಮಾನವಿಲ್ಲದವರು. ಇವರೇನು ನಮ್ಮ ರಾಜ್ಯವನ್ನು , ನಮ್ಮ ರೈತರನ್ನು , ನಮ್ಮ ಬಡ ಜನರನ್ನು , ನಮ್ಮ ರಾಜ್ಯದ ಮೂಲಭೂತ ಸೌಕರ್ಯವನ್ನು ಅಭಿವೃದ್ದಿ ಪಡಿಸೋರಾ?, ದರಿದ್ರರು. ಅಷ್ಟಕ್ಕೂ ಅವರಿಗೆ ಆಡಳಿತ ಕೊಟ್ಟೋರು ಯಾರು ?. ನಮಗೆ ನಾವೇ ಹೊಡೆದಂತಾಗಿದೆ ಈಗ. ಹಾಗಂತ ಎಲ್ಲರನ್ನೂ ದೂಷಿಸೋದಕ್ಕೂ ಆಗಲ್ಲ. ಕೆಲವರು ಅದರಲ್ಲಿ ಒಳ್ಳೆವರು, ಕಾಳಜಿ ಇರೋರು ಇದ್ದಾರೆ.

ಮೊನ್ನೆ ಈ ರೆಸಾರ್ಟ್ ರಾಜಕೀಯ ಶುರುವಾಗಿತ್ತು.ಭಿನ್ನಮತದ ಸದ್ದು ಮೊಳಗಿತ್ತು , ಟಿವಿಯಲ್ಲಿ ನಮ್ಮ ಮಿತ್ರರು ವಿಷುವಲ್ ಶೂಟ್ ಮಾಡಿ ಏರ್ ಮಾಡುತ್ತಿದ್ದರು. ನೋಡುತ್ತಿದ್ದಾಗ ನಮ್ಮದೇ ಸರಕಾರದ ಮಂತ್ರಿ ,ಸರಕಾರದ ಕಾರಿನಲ್ಲಿ ಕೆ‌ಎ 01 ಜಿ . .. . ನಂಬ್ರದ ಕೆಂಪು ಗೂಟದ ಕಾರು ಚೆನ್ನೈನ ರೆಸಾರ್ಟ್‌ನ ಒಳಗೆ ಹೋಗುತ್ತದೆ ಸರಕಾರದ ಕಾರು. ಆ ಬಳಿಕ ಒಂದೊಂದೇ ಸರಕಾರದ ಕಾರು ಅದರೊಳಗೆ ಹೋಗುತ್ತದೆ. ಅಲ್ಲಿಂದ ಶುರುಬಾಗುತ್ತದೆ ರಾಜಕೀಯದ , ಲಾಭದ , ಅಧಿಕಾರದ ಆಸೆಯ ಆಟಗಳು. ಇವರನ್ನೆಲ್ಲಾ ಆ ಕ್ಷೇತ್ರದ ಜನ ಗೆಲ್ಲಿಸಿ ಕಳುಹಿಸಿದ್ದು ಈ ರೀತಿ ರೆಸಾರ್ಟ್ ಕಾಯೋದಿಕ್ಕಾ, ಹೊಸಲು ರಾಜಕೀಯ ಮಾಡೋದಿಕ್ಕಾ?.

ನಮ್ಮ ದುಡ್ಡಿನ ಕಾರು ಅದು. ಹೋಗಲಿ ಬೇರೆಲ್ಲಾದರೂ ಹೋಗಲಿ, ರಾಜ್ಯದ ಹಿತಕ್ಕಾಗಿ , ಜನರ ಹಿತಕ್ಕಗಿ ಸರಕಾರದ ಕಾರು ಬಳಸಿ ಎಲ್ಲಿಗೆ ಬೇಕಾದರೂ ಹೋಗಲಿ.ಅದೆಷ್ಟೇ ಖರ್ಚಾದರೂ ಅಡ್ಡಿಯಿಲ್ಲ.ರಾಜ್ಯದ ಜನರ ಹಿತಕ್ಕಾಗಿ ಎಷ್ಟು ಬೇಕದರೂ ಆ ಕಾರನ್ನು ಓಡಿಸಲಿ.ಅದು ಬಿಟ್ಟು ಈ ಅಧಿಕಾರ ಆಸೆಗಾಗಿ , ರೆಸಾರ್ಟ್ ರಾಜಕೀಯ ಮಾಡಲು ಇವರಿಗೆ ಸರಕಾರದ ಕಾರು ಬೇಕಾ..?. ಯಾರದ್ದು ದುಡ್ಡು . .?. ನಾವೇನು ರಾಜ್ಯದ ಜನ ಪೆದ್ದರಾ.?. ಅಲ್ಲಿ ಮಾಡೋದನ್ನೆಲ್ಲಾ ಸುಮ್ಮನೆ ಕುಳಿತು ನೋಡುತ್ತೇವೆ ಅಂತ ಈ ರೀತಿಯ ವರ್ತನೆಯಾ..?. ಏನಿದು..?.ಇನ್ನು ಹಾಗಲ್ಲ ಯಾವ ಕ್ಷೇತ್ರದ ಶಾಸಕ ಈ ರೀತಿಯಾಗಿ ಮಾಡುತ್ತಾನೋ ಅವನನ್ನು ಮತ್ತೆ ಸ್ವ ಕೇತ್ರಕ್ಕೆ ಬರೋದಿಕ್ಕೆ ಜನಾನೇ ಬಿಡಬಾರದು. ಇದೂ ಅಲ್ಲ ಇನ್ನೊಂದು ಕಾನೂನು ಬರಬೇಕು ಹೀಗೆಲ್ಲಾ ರಾಜಕೀಯ ಮಾಡೋ ಶಾಸಕರನ್ನು ಅವರ ಕ್ಷೇತ್ರ ಜನರೇ ಇಳಿಸುವ ಹೊಸದಾದ ಯಾವುದಾದರೂ ಕಾನೂನು ಬೇಕು. ಒಮ್ಮೆ ಗೆಲ್ಲಿಸಿದ ಮೇಲೆ ಅವರನ್ನು ಇಳಿಸೋ ಯಾವೊಂದು ಸೂತ್ರವೂ ಆ ಕ್ಷೇತ್ರದ ಮತದಾರನಲ್ಲಿಲ್ಲ.ಹಾಗಾಗಿ ಐದು ವರ್ಷ ಆಡಿದ್ದೇ ಆಟ.ಮಾಡಿದ್ದೇ ಕೆಲಸ.ಇದಕ್ಕೆ ಎದ್ದೇಳ ಬೇಕಾದದ್ದು ಮತದಾರರೇ.

ಮೊನ್ನೆ ಮೊನ್ನೆ ಒಂದು ಇಂತಹದ್ದೇ ರೆಸಾರ್ಟ್ ರಾಜಕೀಯ ಮುಗಿದು ಅಬ್ಬ ಇನ್ನಾದರೂ ರಾಜ್ಯ ಅಭಿವೃದ್ದಿಯಾದೀತು , ರೈತರ ಬದುಕು ಹಸನಾದೀತು , ಬಡವರ ಕೆಲಸಗಳೆಲ್ಲಾ ನಡೆದೀತು ಅಂತ ಭಾವಿಸಿದ್ರೆ ಮತ್ತೆ ಶುರುವಾಯ್ತು ನೋಡಿ ಮತ್ತೆ ಅಧಿಕಾರಕ್ಕಾಗಿ ಲಾಬಿ. ಅದಕ್ಕೆ ಇಡೀ ಅಲ್ಲೋಲ ಕಲ್ಲೋಲ ಮಾಡಲು ಇವೆ ವಿಪಕ್ಷಗಳು.ಯಾರಿಗೂ ಇಲ್ಲಿ ಜನರ ಬಗ್ಗೆ ಕಾಳಜಿ ಇಲ್ಲ.ಎಲ್ಲರಿಗೂ ಅಧಿಕಾರ ಪಡೆಯೋದು , ಹಣ ಮಾಡೋದು ಬಿಟ್ಟರೆ ಇನ್ಯಾವುದೂ ಗೊತ್ತಿಲ್ಲ.ಮೊನ್ನೆ ಮೊನ್ನೆ ಕಚ್ಚಾಡಿಕೊಳ್ಳುತ್ತಿದ್ದವರು ಇಂದು ಹಸ್ತಲಾಘವ ಮಾಡುತ್ತಾರೆ. ಏನಿದು ಹೊಲಸು. ಅಧಿಕಾರ ಪಡೆದ ಮೇಲೆ ಮತ್ತೆ ಕಚ್ಚಾಡುತ್ತಾರೆ , ಜನರ ಬಳಿಗೆ ಹೋಗುತ್ತಾರೆ. ಮುಖದಲ್ಲಿ ಸಿಪ್ಪೆ ಇಲ್ಲದವರು . . ಛೀ . . ಇದೊಂದು ಉದ್ಯಮ ಅಂತ ತಿಳ್ಕೊಂಡಿದ್ದಾರೆ ಅವ್ರು. . ಥೂ . . ., ಇದೆಲ್ಲಾ ಮಾಡಿ ಮತ್ತೆ ಚುನಾವಣೆ ಆದ್ರೆ , ಅದ್ಕೆ ಖರ್ಚಾಗೋದು ಯಾರ ದುಡ್ಡು.. ?. ನಮ್ಮದೇ ಅಲ್ಲವೇ.?. ಅವರಿಗೇನು ಇಂತಹ ರಾಜಕೀಯ ಮಾಡೋದು , ಮತ್ತೆ ಚುನಾವಣೆ ನಡೆಯೋದು , ಮತ್ತೆ ಅಧಿಕಾರ ಪಡೆಯೋದು , ಅದೇ ಉದ್ಯೋಗ. ಆದ್ರೆ ಜನರ ಕತೆ. . ?. ಇದೆಲ್ಲಕ್ಕಿಂತ ಹಿಂದಿನಂತೆ ರಾಜಾಡಳಿತವೇ ಒಳ್ಳೇದು , ಅದಿಲ್ಲಾಂದ್ರೆ ರಾಜ್ಯಪಾಲರ ಆಡಳಿತವೇ ಬೆಸ್ಟ್.

ಹಾಗಂತ ಇದರಲ್ಲಿರೋರೊ ಎಲ್ಲರೂ ಕೆಟ್ಟವರು ಅಂತಲ್ಲ.ಇದ್ದಾರೆ ಒಂದು ಚೂರಾದರೂ ಜನಸೇವೆ ಮಾಡಬೇಕು ಅನ್ನೋ ತುಡಿತ ಇರೋರು , ಬಡವರ ಪರ ಕೆಲಸ ಮಾಡೋರು ಇದ್ದಾರೆ. ಆದರೆ ಅಂತಹವರ ಮಾತಿಗೆ ಬೆಲೆಯೇ ಇಲ್ಲ.ಅವರನ್ಯಾರು ಕ್ಯಾರೇ ಮಾಡಲ್ಲ.ಇದು ನಮ್ಮ ದುರಂತ.ಹಾಗಾಗೇ ಮೊನ್ನೆ ನಡೆದ ಇಲೆಕ್ಷನ್‌ನಲ್ಲಿ ಕಡಿಮೆ ಓಟಿಂಗ್ ಆಗಿದೆ.ಮುಂದೆ ಹಾಗಲ್ಲ ಇನ್ನೊಂದು ಕ್ರಾಂತಿಯಾಗಬೇಕು.

2 ಕಾಮೆಂಟ್‌ಗಳು:

Nanda Kishor B ಹೇಳಿದರು...

what kind of kraanti you expect sir...

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಒಂದೇ ಮಾತಲ್ಲಿ ಹೇಳುವುದಾದರೆ , ದೇವಸ್ಥಾನಕ್ಕೆ ಹೋಗೋವಾಗ ಹೊರಗೆ ಇಟ್ಟು ಹೋಗ್ತೇವಲ್ಲಾ ಅದ್ರಲ್ಲಿ ಸೇವೆ ನಡೀಬೇಕು , ಅಷ್ಟೆ.