23 ಆಗಸ್ಟ್ 2009

ಇಲ್ಲಿ ಕಾಲೆಳೆಯುವುದೇ ಸರಿಯಂತೆ...!!



ಮೊನ್ನೆ ಹಾಗೇ ಸುಮ್ಮನೆ ಯೋಚಿಸುತ್ತಿದೆ. ನಿನ್ನೆಯವರೆಗೆ ಅದಾವ ರೀತಿಯಲ್ಲಿ ಮಾತನಾಡುತ್ತಿದ್ದವ ಇಂದು ಬದಲಾಗಿದ್ದಾನೆ. ಆತ ಅದೇನೋ "ದೊಡ್ಡ " ಹುದ್ದೆಯಲಿದ್ದ. ಆದರೆ ನಾನು ಅಷ್ಟರ ಮಟ್ಟಿಗೆ ಇರಲಿಲ್ಲ ಎಂಬುದೂ ನನಗೆ ತಿಳಿದಿತ್ತು. ಒಂದಂತೂ ಸತ್ಯವಾಗಿತ್ತು. ನನ್ನ ಹುದ್ದೆ "ದೊಡ್ಡ"ದಲ್ಲದಿದ್ದರೂ ವ್ಯಾಪ್ತಿ ದೊಡ್ಡದಾಗಿತ್ತು ಹೀಗಾಗಿ ಅನೇಕ ಕೆಲಸಗಳು ಕೆಲವೊಮ್ಮೆ ಸಲೀಸಾಗಿ ಬಿಡುತ್ತಿತ್ತು. ಈ ಕಾರಣಕ್ಕಾಗಿ ಅನೇಕರು ನನ್ನ ಸಹಾಯ ಪಡೆಯುತ್ತಿದ್ದರು. ಅಲ್ಲೂ ಹಾಗೆತೇ ಆಯಿತು. ಆತ ದಿನಂಪ್ರತಿ ನನಗೆ ಫೋನಾಯಿಸುತ್ತಿದ್ದ . ಅದೇನಾಯಿತು.. ಅದು ಹೀಗೆ.. ಇದು ಹೀಗೆ ಅಂತ ವಿವಿದ ಲೋಕಾಭಿರಾಮ ಬಿಡುತ್ತಲಿದ್ದ. ಹಾಗೇ ಆತನ ಕೆಲಸವೂ ಮುಗಿಯಿತು. ಕೆಲ ಸಮಯದ ಬಳಿಕ ನನಗೂ ಆತನಿರುವಲ್ಲಿ ಕೆಲವೊಂದು ಆಗಬೇಕಿತ್ತು. ಆತ ಫೋನೇ ತೇಗೀಲಿಲ್ಲ. ಒಂದಷ್ಟು ಸಮಯದ ಬಳಿಕ ಆತ ಫೋನು ಮಾಡಿವನೇ ಹೇಳಿದ ನಾನು ಸ್ವಲ್ಪ ಬ್ಯುಸಿ...!!. ಕೆಲಸದ ಬಗ್ಗೆ ಹೇಳಿದಾಗ ಇಲ್ಲ ನನಗೆ ಅವರನ್ನು ಪರಿಚಯವೇ ಇಲ್ಲ. ಅಂದ...!! ಅದು ಬಿಡಿ ಕೆಲಸ ಆಗುತ್ತಾ ಎಂದಾಗ ಇಲ್ಲ ಆಗಲ್ಲ ಎಂದು ಹೇಳಿಯೇ ಬಿಟ್ಟ.....!! ಇಲ್ಲೂ ಒಂದು ವಿಷಯ ಇತ್ತು. ಏನೆಂದರೆ ಆತ ಅನೇಕ ಬಾರಿ ಇಲ್ಲಿ ಆತನ ಕೆಲಸಕ್ಕಾಗಿ ಓಡಾಡಿದ್ದ. ಆದರೆ ಕೆಲಸ ಆಗಿರಲಿಲ್ಲ. ಆದರೆ ನಾನು ಮಾತನಾಡಿದ ಆ ಕೆಲಸ ತಕ್ಷಣವೇ ಆಗಿತ್ತು. ಹಾಗಾಗಿ ಆತನಲ್ಲಿ ಒಳಗಿನ ಮತ್ಸರ ಹೆಚ್ಚುತ್ತಿತ್ತು ಎಂದು ಆತನ ಮಾತುಗಳೇ ಹೇಳುತ್ತಿತ್ತು. ಅದರ ಪ್ರತೀಕಾರ ನನಗೆ ಸಿಕ್ಕಿದ್ದು ಇಲ್ಲಿ.ಸರಿ ಯಾಕೆಂದರೆ ನಾವು ಯಾವ ಕೆಲಸವನ್ನೂ ಸ್ವಾರ್ಥದ ದೃಷ್ಠಿಯಿಂದ ಮಾಡಬಾರದು ಮತ್ತು ಪ್ರತಿಫಲಾಪೇಕ್ಷೆಯಿಲ್ಲದೇ ಮಾಡಬೇಕು ಎಂಬ ಮಾತನ್ನು ನಂಬಿದವರು. ಮತ್ತು ಆ ವಾಕ್ಯವನ್ನು ಆವಾಗ‌ಆವಾಗ ನೆನಪಿಸಿಕೊಳ್ಳುತ್ತಲೇ ಇರುವವರು. ಮತ್ತು ಓದುತ್ತಲೂ ಇರುವವರು. ಹಾಗಾಗಿ ತಲೆಕೆಡಿಸಿಕೊಂಡಿಲ್ಲ. ಮತ್ತು ಬೇರೆ ದಾರಿ ಹಿಡಿಯುವುದು ಅನಿವಾರ್ಯವೂ ಆಗಿತ್ತು. ಕೆಲಸವೂ ಆಗಿತ್ತು. ಅದಲ್ಲ ನಾನು ಯೋಚಿಸುತ್ತ ಸಾಗಿದ್ದು ಮತ್ತು ಈ ಸಮಾಜದ ಅನೇಕ ಸಂಗತಿಗಳನ್ನು ನೋಡಿದಾಗ ಮತ್ತು ಪುಸ್ತಕ ಓದಿದಾಗ ತಿಳಿಯುವುದು ಏನೆಂದರೆ ಏಕೆ ಮನುಷ್ಯ ಹೀಗೆ.. ಮತ್ಸರದಲ್ಲೇ ಮತ್ತು ಕಾಲೆಳೆಯುವದರಲ್ಲೇ ಕಾಲ ಕಳೆಯುವುದೇತಕ್ಕೆ...???

ಇದು ನನ್ನ ಒಬ್ಬನ ಮಾತಲ್ಲ.ಇತ್ತೀಚೆಗೆ ಪತ್ರಿಕೆಯೊಂದರ ಸಂಪಾದಕೀಯದಲ್ಲಿ ಮಿತ್ರರೊಬ್ಬರು ಈ ಮಾತನ್ನು ಉಲ್ಲೇಖಿಸಿದ್ದರು. ಮನುಷ್ಯನ ಗುಣ ಹುಟ್ಟಿನಿಂದಲೇ ಬರುತ್ತದೆ. ಮೊನ್ನೆ ಬಬ್ರು ಹೇಳುತ್ತಲಿದ್ದರು. ಮಗು ಬೆಳೆಯುತ್ತಾ ಅದಕ್ಕೆ ಜೇಬು ಇರುವ ಅಂಗಿ ಹಾಕುತ್ತಲೇ ಅದಕ್ಕೆ ಮತ್ಸರಗಳು ಆರಂಭಗೊಳ್ಳುತ್ತದೆ. ಆ ಜೇಬಿನಲ್ಲಿ ಏನೆಲ್ಲ ಆ ಹಾಕಿಕೊಳ್ಳಬಹುದು ಮತ್ತು ಇನ್ನೊಂದು ಮಗು ಏನನ್ನೆಲ್ಲಾ ಹಾಕಿಕೊಳ್ಳುತ್ತದೆ ಎನ್ನುವುದನ್ನು ಅದು ನೋಡುತ್ತಲೇ ಇರುತ್ತದೆ. ಮತ್ತು ಅದಕ್ಕಿಂತ ಹೆಚ್ಚಿನದನು ಆ ಜೇಬಲ್ಲಿ ಹಾಕಿಕೊಳ್ಳುವುದಕ್ಕೆ ಪ್ರಯತ್ನಿಸುತ್ತದೆ. ಹಾಗಾಗಿ ಆ ಜೇಬಿನ ಬದಲಾವಣೆಗೆ ಸಾಧ್ಯವಿಲ್ಲ. ಏಕೆಂದರೆ ಜೂಬು ಬೇಕಲ್ಲ... ಅದು ತಿಳಿದಿದ್ದರೂ ಇಲ್ಲಿ ದಾಖಲಿಸುವುದು ನನ್ನ ಸಮಾಧಾನಕ್ಕಾಗಿ ಮಾತ್ರವೇ..

ನಾವು ಮಾಡುವ ಎಲ್ಲಾ ಹೆಲ್ಪ್‌ಗಳು ಮತ್ತೆ ಸಿಗುತ್ತವೆ ಎಂದಲ್ಲ. ಅದು ಮಿತ್ರತ್ವದ ಕಾರಣಕ್ಕಾಗಿ ಮತ್ತು ಸಂಬಂಧವನ್ನು ಗಟ್ಟಿಗೊಳಿಸುವುದಕ್ಕಾಗಿ. ಆದರೆ ಇಂದು ಅದೇನೋ ದೊಡ್ಡ ಹುದ್ದೆ ಸಿಕ್ಕ ತಕ್ಷಣ ತನಗೆ ಎಲ್ಲವೂ ಆಯಿತು ಎನ್ನುವ ಹುಂಬತನಕ್ಕೆ ಯಾರು ಏನೂ ಹೇಳಲಾಗದು. ಮತ್ತು ಅಂತಹವರು ಕೇವಲ ಸ್ವಂತ ಲಾಭಕ್ಕಾಗಿ ನಮ್ಮನ್ನು ದುಡಿಸಿಕೊಳ್ಳುತ್ತಾರೆಯೇ ಹೊರತು ಸಂಬಂಧಗಳು ಅವರಿಗೆ ಬೇಕಾಗಿಲ್ಲ. ನಾವಾದರೂ ನಮ್ಮ ಕೆಲಸ ಬಿಟ್ಟು ಆ ಮಿತ್ರತ್ವಕ್ಕಾಗಿ ಸಂಬಂದಕ್ಕಾಗಿ ಏನಾದರೂ ಮಾಡಿ ಬಿಡುತ್ತವೆ. ಆದರೆ ಅದರ ನೆನಪಾದರೂ ಇರಬೇಕಿತ್ತು ಅಂತ ನಾವು ಯೋಚಿಸುತ್ತೇವೆ. ಹಾಗೆಂದು ಆತ ನಮ್ಮ ಗುಲಾಮನಾಗಿರ ಬೇಕು ಎಂಬುದೂ ಅಲ್ಲ.

ಅದಕ್ಕಿಂಲೂ ಇನ್ನೊಂದು ನೋವಿನ ಸಂಗತಿ ಎಂದರೆ ನಮ್ಮಿಂದ ಪ್ರಯೋಜನ ಪಡೆದ ಮಂದಿಯೇ ಮತ್ತೆ ನಮ್ಮನ್ನು ಅಪಹಾಸ್ಯ ಮಾಡುವುದು.. ನಮ್ಮ ಬಗ್ಗೆ ಇನ್ನಿಲ್ಲದ ಪ್ರಚಾರ ಹಬ್ಬಿಸಿಬಿಡುವುದು ಮತ್ತು ಹಾಸ್ಯ ವಸ್ತುವಾಗಿ ಕಾಣುವುದು. ನಿಜಕ್ಕೂ ಇಂತಹವರ್‍ನ ಕಂಡಾಗ ಮೈಯಿಡೀ ಉರಿಯುತ್ತದೆ. ಇನ್ನೂ ಕೆಲವರು ಬೇರೊಬ್ಬರ ಮೂಲಕ ನಮ್ಮ ದಾರಿಗೆ ಅಡ್ಡಗಾಲು ಹಾಕುವುದು.. ಇನ್ನೊಂದರ್ಥದಲ್ಲಿ ಕಾಲೆಳೆಯುವುದು...!!
ಬೇಕಿತ್ತಾ ಮನಗೆ ವಿಷ ಸರ್ಪಗಳೆಗೆ ಹಾಲೆರೆಯುವ ಕೆಲಸ ಅಂತ ನನಗೂ ಒಂದೊಂದು ಸಾರಿ ಅನಿಸಿದ್ದಿದೆ... ಆದೆರೆ ಅವುಗಳೆಲ್ಲಾ ಮೊದಲು ಇಲಿಯಾಗಿ ಬಂದು ಹಾವಿನ ರೂಪ ಪಡೆಯುವುದೇ ಒಂದು ವಿಚಿತ್ರ. ಈ ಸಮಾಜವೇ ಹಾಗೆ. ನಮ್ಮಲ್ಲೂ ಒಂದು ಶಕ್ತಿಯಿದೆ, ನಮ್ಮ ಸಾಧನೆಯಲ್ಲೂ ಶಕ್ತಿಯಿದೆ ಎಂದು ಅರಿಯುವುದೇ ತಡ ಅಲ್ಲಿಗೆ ಜನ ಬರಲು ಆರಂಭಿಸುತ್ತಾರೆ.. ಕೊನೆಗೆ ನಮ್ಮದೇ ಕಾಲೆಳೆಯಲು ಪ್ರಯತ್ನಿಸುತ್ತಾರೆ. ಕೆಲವರು ಅದರಲ್ಲಿ ಸಫಲರಾಗುತ್ತಾರೆ. ಖುಷಿ ಪಡುತ್ತಾರೆ..ಇದಕ್ಕೆ ಉದಾಹರಣೆಗಳು ಒಂದಲ್ಲ. ನೂರಾರು ಇದೆ ಈ ಸಮಾದಲ್ಲಿ.. ಹಾಗಾಗಿ ಮೊನ್ನೆ ಒಬ್ರು ಹೇಳುತ್ತಿದ್ದರು.. ಮನುಷ್ಯರೆಂದರೆ ಉಣ್ಣಿಯ ಹಾಗೆ ..ಏಕೆ ಗೊತ್ತಾ..? ದನದ ಅಥವಾ ಒಂದು ಪ್ರಾಣಿ ಜೀವಂತವಿದ್ದಾಗ ಅದರ ದೇಹದಲ್ಲಿರುವ ರಕ್ತ ಹೀರಲು ಸಾಲು ಸಾಲಗಿ ಬರುತ್ತವೆ.. ಒಂದು ವೇಳೆ ಆ ಪ್ರಾಣಿ ಸತ್ತರೆ ಎಲ್ಲವೂ ಹಾಗೇ ಸಾಲು ಸಾಲಾಗಿ ಇಳಿದು ಹೋಗುತ್ತದೆ....!!! ಇನ್ನೊಂದು ಪ್ರಾಣಿಯ ಅರಸಿಕೊಂಡು....!! ಮನುಷ್ಯನೂ ಹಾಗಂತೆ...!!.

ಇದು ವಿಷಾದವಲ್ಲ...ಇಲ್ಲಿ ಕಾಲ್ಪನಿಕ ...ಆದರೆ ಸತ್ಯ ಘಟನೆ....!!!

2 ಕಾಮೆಂಟ್‌ಗಳು:

Govinda Nelyaru ಹೇಳಿದರು...

ಬರವಣಿಗೆ ಚೆನ್ನಾಗಿದೆ. ಇಂತಹ ಅನುಭವಗಳು ನನಗೂ ಸಾಕಷ್ಟು ಆಗಿದೆ. ಎಲ್ಲರೂ ಸಮಯಸಾಧಕರು ಎಂದರೂ ತಪ್ಪಲ್ಲ.

Harisha - ಹರೀಶ ಹೇಳಿದರು...

ಪ್ರತಿಯೊಂದು ಅನುಭವವೂ ಜೀವನದಲ್ಲಿ ಅಮೂಲ್ಯ ಪಾಠವಾಗಿರುತ್ತದೆ.. ನಿಮ್ಮದೇ ರೀತಿಯ ಅನುಭವ ನನಗೂ ಕೆಲ ಸಲ ಆಗಿದೆ.