03 ಆಗಸ್ಟ್ 2009

ಹರಳು ಕಲ್ಲೆಂಬ ಕುಲ ನಾಶಕ . . . .

ಮನುಷ್ಯನ ಅತಿಯಾಸೆಗೆ ಬಲಿಯಾಗದ್ದು ಯಾವುದು ಹೇಳಿ. ಹೆಣ್ಣಿನಿಂದ ಹಿಡಿದು ಮಣ್ಣಿನವರೆಗೆ ಎಲ್ಲವೂ ಅದರೊಳಗೆ ಬೀಳುತ್ತದೆ.ಇಲ್ಲೊಂದು ಅಂತಹುದೇ ಘಟನೆ ಇದೆ. ನೂರಾರು ಎಕ್ರೆ ಪ್ರದೇಶದ ಅರಣ್ಯ ಬರಿದಾಗುವ ಎಲ್ಲಾ ಸೂಚನೆಗಳು ಇವೆ. ಆದರೂ ಕೂಡಾ ಇಲಾಖೆ , ಸರಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದರೆ ಇದರ ಅರ್ಥ ಎಲ್ಲರಿಗೂ ಆಗೇ ಆಗುತ್ತದೆ. ಅಲ್ಲಿ ಮಾಮೂಲು ನಡೆಯುತ್ತೆ ಅಂತ. ಆಧರೂ ನಾವು ನಿಸ್ಸಾಹಕರು ಎಂದರೆ ಏನಿದರ ಅರ್ಥ...???

ಅದು ಸುಳ್ಯ ತಾಲೂಕಿನ ಗಡಿಭಾಗ. ಕೊಲ್ಲಮೊಗ್ರ ಪ್ರದೇಶ. ಇಲ್ಲಿ ಬೆಲೆಬಾಳುವ ಹರಳು ಇದೆ ಎನ್ನುವ ಸಂಗತಿ ಇಂದು ನಿನ್ನೆಯಲ್ಲ ಸರಿಸುಮಾರು 20 ವರ್ಷಗಳಿಂದ ಪ್ರಚಲಿತದಲ್ಲಿದೆ. ಆ ಹರಳು ಕಲ್ಲಿಗೆ ಬೆಲೆಯೂ ಇದೆ ಅಂತ ಊರ ಮಂದಿಯೆಲ್ಲಾ ಹೇಳುತ್ತಾರೆ. ಹಾಗಾಗಿ ಅದರ ಉತ್ಖನನಕ್ಕೂ ತಂಡೋಪ ತಂಡವಾಗಿ ಜನ ಹೋಗುತ್ತಾರೆ. ಎಲ್ಲಿಗೆ ಹೋಗುತ್ತಾರೆ..? ಅದೇ ಮೀಸಲು ಅರಣ್ಯಕ್ಕೆ. ಅಲ್ಲಿನ ಒಂದು ಹುಲ್ಲು ಕಡ್ಡಿ ಅಲುಗಾಡುವುದಕ್ಕೂ ಅರಣ್ಯು ಇಲಾಖೆಯ ಪರ್ಮೀಶನ್ ಬೇಕು ಎನ್ನುವಾಗ ಇಲಿನ ಜನ ಅದ್ಹೇಗೆ ಅದರೊಳಗೆ ಗಂಟೆ ಗಟ್ಟಲೆ ಅಲ್ಲಿ ಹರಳು ಕಲ್ಲಿಗಾಗಿ ಅಗೆಯುತ್ತಾರೆ.? ಅದರಲ್ಲೇ ಇರುವುದು ಕುತೂಹಲ. ನನಗೆ ಆ ಪ್ರದೇಶಕ್ಕೆ ಹೋದಾಗ ಅಲ್ಲಿನ ಗಾಳೀ ಸುದ್ದಿಯ ಮೂಲಕ ತಿಳಿದ ವಿಷಯವೆಂದರೆ ಈ ಹರಳು ಕಲ್ಲಿನ ಪ್ರಮುಖ ದಂಧೆಕೋರರು ಇಲಾಖೆಗೆ ಮತ್ತು ಅಧಿಕಾರಿ ವರ್ಗಕ್ಕೆ 17 ಲಕ್ಷ ರುಪಾಯಿಯನ್ನು ನೀಡಿದ್ದರಂತೆ. ಹಾಗಗಿ ಅಧಿಕಾರಿಗಳು ಕಣ್ಣು ಈಗ ಕುರುಡಾಗಿದೆ ಅಂತ ಸುದ್ದಿಯ ಮೇಲೆ ಸುದ್ದಿ ಬರುತ್ತಿತ್ತು. ವಿಷಯದ ಒಳಹೊಕ್ಕಾಗ ಆ ಗಾಳಿ ಸುದ್ದಿಗೆ ಜೀವ ಬಂದದ್ದಂತೂ ಸತ್ಯ. ಹೀಗೆ ಹರಳು ಕಲ್ಲು ದಂದೆ ನಡೆಯುತ್ತಿರುವುದು ಸರಿ ಸುಮಾರು 20 ವರ್ಷಗಳಾಗಬಹುದು. ಆದರೂ ಇದುವರೆಗಿನ ಸರಕಾರ ಯಾವುದೇ ರೀತಿಯಲ್ಲಿ ಅದನ್ನು ಉಳಿಸಿಕೊಳ್ಲುವ ಪ್ರಯತ್ನ ಮಾಡಿಲ್ಲ. ಅದಕ್ಕೂ ಕಾರಣವಿದೆ.ಸರಕಾರದ ಪ್ರಕಾರ ಅದು ಬೆಲೆಬಾಳುವ ಕಲ್ಲು ಅಲ್ಲವಂತೆ. ಹಾಗಾಗಿ ಈ ಪ್ರದೇಶದತ್ತ ಗಮನ ಹರಿಸಿಲಲ್ಲ. ದುರಂತವೆಂದರೆ ಈಗ ಇಲ್ಲಿ ಕಲ್ಲು ಅಗೆಯುವ ಜನಕ್ಕೆ ಪ್ರತೀ ಕೆಜಿಗೆ 2 ರಿಂದ 3 ಸಾವಿರ ಸಿಗುತ್ತಂತೆ. ಅದರಾಚೆಗೆ ಈ ಕಲ್ಲು ತಲುಪಿದರೆ 15 ಸಾವಿರದವರೆಗೆ ಸಿಗುತ್ತಂತೆ.

ಈಗಾಗಲೇ ಕಲ್ಲು ಅಗೆತದಿಂದ ನೂರಾರು ಎಕ್ರೆ ಅರಣ್ಯ ಪ್ರದೇಶಕ್ಕೆ ಹಾನಿಯಾಗಿದೆ.ಕಾಡಿನ ನಡುವೆ ಅಲ್ಲಲ್ಲಿ ಹೊಂಡಗಳು ಇದೆ.ಆ ಹೊಂಡಗಳು ಮಳೆಗಾಲದಲ್ಲಿ ಕುಸಿತಗೊಂಡು ಮರಗಳೂ ನಾಶವಾಗುತ್ತದೆ.ಇದು ಹೀಗೆ ಇನ್ನು ಒಂದು ೫ ವರ್ಷ ನಡೆದರೆ ಇಡೀ ಕಾಡು ನಾಶವಾದರೆ ಅಚ್ಚರಿಯಿಲ್ಲ. ಆದರೂ ನಮ್ಮ ಸರಕಾರಗಳು ಇತ್ತ ಗಮನಹರಿಸಿಲ್ಲ ಎನ್ನುವುದೇ ದುರಂತದ ಸಂಗತಿಯಾಗಿದೆ.

ಇಲ್ಲಿನ ಪತ್ರಿಕೆಗಳು ಅದೆಷ್ಟೋ ಬಾರಿ ಈ ಕರ್ಮಕಾಂಡಗಳ ಬಗ್ಗೆ ವರದಿ ಪ್ರಕಟಿಸಿದೆ. ಆದರೂ ಕೂಡಾ ಎಲುಬಿಲ್ಲದೆ ಇಲಾಖೆಗಳು ಒಂದೇ ಒಂದು ಬಾರಿ ಕೂಡಾ ಈ ದಂಧೆಯನ್ನು ನಿಲ್ಲಿಸಲು ಪ್ರಯತ್ನ ಪಟ್ಟಿಲ್ಲ. ಇನ್ನೂ ಒಂದು ಅಂಶವೆಂದರೆ ಇಲ್ಲಿರುವ ಅಧಿಕಾರಿಗಳೆಲ್ಲರೂ ನಿವೃತ್ತಿ ಅಂಚಿನಲ್ಲಿರುವವರು. ಸರಿಯಾದ , ದಕ್ಷ ಅಧಿಕಾರಿಯೂ ಇಲ್ಲಿಗೆ ವರ್ಗ ಮಾಡದೇ ಇರುವುದು ಕೂಡಾ ಇಲಾಖೆಯ ಇನ್ನೊಂದು ಗಟ್ಟಿನತ. ಆದುದರಿಂದ ಈ ಕಲ್ಲಿನ ದಂದೆ ಹೇಗೆ ತಡೆಯಲು ಸಾಧ್ಯವಾದೀತು..?.

2 ಕಾಮೆಂಟ್‌ಗಳು:

ಹರೀಶ ಮಾಂಬಾಡಿ ಹೇಳಿದರು...

ಹರಳು ಕಲ್ಲಿನ ಜಾಗ ನೋಡಿದ ಬಳಿಕ ನಿಮಗೆ ‘ಬೆದರಿಕೆ’ ಬಂದಿತ್ತಂತೆ. ಹೇಳಲೇ ಇಲ್ಲ.? :)

ಹರೀಶ್ ಕೇರ ಹೇಳಿದರು...

ಹರಳು ಕಲ್ಲು ಅಗೆದ ಜಾಗಗಳ ಫೋಟೋ ಹಾಗೂ ನುಡಿಚಿತ್ರಣ ಸಮೇತ ಸ್ವಲ್ಪ ವಿವರವಾಗಿ ಬರೆಯಪ್ಪಾ ಮಹಾರಾಯ.
- ಹರೀಶ್ ಕೇರ