01 ಮಾರ್ಚ್ 2009

ಅಡಿಕೆ ಪತ್ರಿಕೆಗೆಧನ್ಯವಾದ...



ನನ್ನ ಬ್ಲಾಗ್ ಬಗ್ಗೆ ಮತ್ತು ಬ್ಲಾಗ್ ಬಗೆಗಿನ ನನ್ನ ಅಭಿಪ್ರಾಯವನ್ನು ಈ ತಿಂಗಳ ಅಡಿಕೆ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಈ ಬಗ್ಗೆ ಅಡಿಕೆ ಪತ್ರಿಕೆ ಬಳಗಕ್ಕೆ ಧನ್ಯವಾದಗಳು.ಬ್ಲಾಗ್ ಲೋಕದಲ್ಲಿ ನಾನು ಒಂದು ವರ್ಷದಿಂದ ವಿಹರಿಸುತ್ತಿದ್ದೇನೆ. ಇತ್ತೀಚೆಗೆ ಇದಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.ಅಡಿಕೆ ಪತ್ರಿಕೆಯಲ್ಲಿ ಈ ಬಗ್ಗೆ ಬಂದ ಬಳಿಕ ಅನೇಕರು ಮಾಹಿತಿಯನ್ನು ಕೇಳುತ್ತಿದ್ದಾರೆ.ಬ್ಲಾಗ್ ಅಂದರೇನು ಎಂಬುದರಿಂದ ಹಿಡಿದು ವಿಷಯವನ್ನು ಪೋಸ್ಟ್ ಮಾಡುವುದರವರೆಗೆ ಕೇಳುತ್ತಾರೆ. ನಾನು ಕೂಡಾ ಆರಂಭದಲ್ಲಿ ಹೀಗೆಯೇ ಕೇಳಿ ತಿಳಿದಿದ್ದೆ. ಆಗ ನನಗೆ ದಾರಿ ಹೇಳಿದವರು ಕುಂಟಿನಿಯವರು.

ನನಗೆ ಈಗ ಖುಷಿಯಾಗಿದೆ. ಕಾರಣ ಗೊತ್ತಾ ?. ನಾನು ಮೂಲತ: ಕೃಷಿ ಕುಟುಂಬದವನು.ಮುಂದೆಯೂ ಇದೇ ನನ್ನ ಜೀವನ.ಸದ್ಯ ಮಾಧ್ಯಮದ ಕ್ಷೇತ್ರದಲ್ಲಿ ಕೆಲಸ ಮಾಡಿತ್ತಿದ್ದೇನಾದರೂ ನನ್ನ ಮನಸ್ಸು ಕೃಷಿಯನ್ನು ಬಿಡಲಿಲ್ಲ. ಕೃಷಿ ಕ್ಷೇತ್ರದಲ್ಲಿ ಸಮಸ್ಯೆಗಳಿವೆ ಹುಡುಗರು ಇಲ್ಲಿ ಉಳಿಯುತ್ತಿಲ್ಲ , ಕೃಷಿಕ ಕೆಲಸವೆಂದರೆ ನಿಶ್ಪ್ರಯೋಜಕ ಎನ್ನುವ ಈ ಸಂದರ್ಭದಲ್ಲಿಯೂ ನಾನು ಕೃಷಿ ಕಡೆಗೆ ಮುಂದೆ ತೆರಳುವುದು ನಿಶ್ಚಿತ. ಆದರೆ ಕೆಲ ಕಾಲ ಮಾದ್ಯಮ ಕ್ಷೇತ್ರದಲ್ಲಿ ದುಡಿಯುವ ನಿರ್ಧಾರ.

ನನ್ನ ಈ ನಿರ್ಧಾರದಕ್ಕೆ ಇನ್ನಷ್ಟು ಉತೇಜನ ನೀಡಿದ್ದು ಕೃಷಿಕರ ಕೈಗೆ ಲೇಖನಿ ಎನ್ನುವ ಕಲ್ಪನೆಯಿಂದ ಪ್ರಕಟವಾಗುತ್ತಿರುವ ಅಡಿಕೆ ಪತ್ರಿಕೆಯಲ್ಲಿ ನನ್ನ ಅಭಿಪ್ರಾಯ ಪ್ರಕಟಿಸಿದ್ದಕ್ಕೆ ಮತ್ತು ನನ್ನ ಬ್ಲಾಗ್ ಬಗ್ಗೆ ತಿಳಿಸಿರುವುದು. ಇದು ನನಗೆ ತೀರಾ ಖುಷಿಯಾಗಿದೆ. ಹಾಗಗಿ ಈ ಬರಹವು ನನ್ನ ಮುಂದಿನ ಬದುಕಿಗೆ ಸ್ಫೂರ್ತಿ ನೀಡಲಿದೆ ಅಂತ ನಾನು ಅಂದುಕೊಂಡಿದ್ದೇನೆ. ಯಾಕೆಂದರೆ ಅದು ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾಗಿದೆ.ಕೃಷಿಕರ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಹಾಗಾಗಿ ನನಗೆ ಖುಷಿ. ಈ ಮೊದಲು ಇನ್ನೊಂದು ಪತ್ರಿಕೆಯಲ್ಲೂ ನನ್ನ ಬ್ಲಾಗ್ ಬಗ್ಗೆ ಒಬ್ಬರು ಪ್ರಸ್ತಾಪಿಸಿದ್ದನ್ನು ಈಗ ನೆನಪಿಸಿಕೊಳ್ಳುತ್ತೇನೆ.

ಅಡಿಕೆ ಪತ್ರಿಕೆಯ ಮುಖಪುಟದ ಚಿತ್ರ ನಾ.ಕಾರಂತರ ಬ್ಲಾಗ್ ನಿಂದ ಪಡೆದದ್ದು. ಅವರ ಬ್ಲಾಗ್ ಹಸಿರುಮಾತು.