12 ಜನವರಿ 2009

ಧೋನಿಯ ಹಿಂದೆ. . .

ರಾತ್ರಿ ಗಂಟೆ 9 ಕಳೆದಿತ್ತು.ಮಾಹಿತಿಯೊಂದು ಬಂತು..

ನಾಳೆ ಸುಬ್ರಹ್ಮಣ್ಯಕ್ಕೆ ಮಹೇಂದ್ರ ಸಿಂಗ್ ಧೋನಿ ಬರ್ತಾರಂತೆ ... ಏನಾದರೂ ಗೊತ್ತಾ?.

ನನಗಂತೂ ಆ ಬಗ್ಗೆ ಗೊತ್ತಿರಲಿಲ್ಲ.

ವಿಚಾರಿಸಿ ಹೇಳುವೆ ಅಂದವನೆ ಕೆಲವು ಮಿತ್ರರಿಗೆ ವಿಚಾರಿಸಿದೆ, ಪೊಲೀಸರಲ್ಲಿ ಕೇಳಿದೆ, ನನ್ನೊಂದಿಗೆ ಇದ್ದ ಇನ್ನೊಬ್ಬ ಮಿತ್ರನೂ ಆತನ ಪರಿಚಿತರಲ್ಲಿ ದೂರವಾಣಿಯಲ್ಲಿ ವಿಚಾರಿಸಿದಾಗ ಹೌದು, ನಾಳೆ ಕುಕ್ಕೆ ಧೋನಿ, ಉತ್ತಪ್ಪ ಬರುತ್ತಾರೆ ಅಂದ. ನಮಗಂತೂ ಖುಷಿಯಾಯಿತು.ನಾಳೆ ಒಂದು ಒಳ್ಳೆಯ ಸುದ್ದಿ ಮಾಡಬಹುದು.ಹೇಗೆಲ್ಲಾ ಚಿತ್ರೀಕರಣ ಮಾಡಬಹುದು..?. ವಿವಾದಗಳಿಗೆ ಆಸ್ಪದ ಕೊಡದೆ ಹೀರೋಗಳ ಖಾಸಗೀ ಬದುಕಿಗೆ ಅಡ್ಡಿಯಾಗದೆ ಒಂದು ಉತ್ತಮ ಸುದ್ದಿ ನಮ್ಮದಾಗಬೇಕು ಎಂದು ರಾತ್ರಿಯೇ ಬೇರೆ ಕಾರ್ಯಕ್ರಮದಿಂದ ಬಂದು ನಮ್ಮ ಪ್ರೆಸ್ ಕ್ಲಬ್ ನಲ್ಲಿ ಮಲಗಿ, ಬೆಳಗ್ಗೆ ಬೇಗನೆ ಎದ್ದು ನನ್ನ ಮನೆಗೆ ಹೋಗಿ, ಕುಕ್ಕೆ ಗೆ ಹೋಗಿ ಕಾದು ಕುಳಿತದ್ದೇ ಕುಳಿತದ್ದು.... ಈ ನಡುವೆ ಆಗಾಗ ಅಲ್ಲಿಗೆ .. ಇಲ್ಲಿಗೆ... ಫೋನು... ಎಲ್ಲಿದ್ದಾರೆ.... ಹೊರಟರಾ... ಒಂದೆಡೆ ಪ್ರಶ್ನೆಯಾದರೆ ಇನ್ನೊಂದೆಡೆ ಪೊಲೀಸರ ಜೊತೆ ವಿಚಾರಣೆ , ದೇವಸ್ಥಾನದಲ್ಲಿ ವಿಚಾರಣೆ ಎಲ್ಲವೂ ನಡೆಯಿತು.ಯಾರಲ್ಲೂ ಖಚಿತವಾದ ಮಾಹಿತಿ ಇಲ್ಲ.ಬರುತ್ತೇನೆಂದು ಹೇಳಿದ್ದಾರ್‍ಎ ಎಂಬುದನ್ನು ಬಿಟ್ಟು. ಅಷ್ಟಾಗುವ ಹೊತ್ತಿಗೆ ಮಧ್ಯಾಹ್ನ ಆಗಿತ್ತು. ನಂತರ ನಮ್ಮ ತಾಳ್ಮೆಯ ಕಟ್ಟೆ ಒಡೆಯುವ ಹೊತ್ತು ಬರುತ್ತಿದ್ದಂತೆಯೇ ನೇರ್‍ಅವಾಗಿ ಉತ್ತಪ್ಪ ಮನೆಗೆ ದೂರವಾಣಿ ಮೂಲಕ ಮಾತನಾಡಿದಾಗ ವಿಚಾರ ತಿಳಿಯಿತು. ಕುಕ್ಕೆ ಬರುವ ಪ್ರೋಗ್ರಾಂ ಇದ್ದದ್ದು ನಿಜ.ಆದರೆ ಕಾರಣಾಂತರಗಳಿಂದ ಅದನ್ನು ರದ್ದು ಮಾಡಿದ್ದೇವೆ ಮುಂದಿನ ದಿನದಲ್ಲಿ ಬರುತ್ತೇವೆ ಅಂತ ಅಂದು ಬಿಟ್ಟರು. ನ್

ಸತ್ಯ ತಿಳಿಯಿತು.. ಹೊರಡಲು ಅನುವಾದೆವು. ಆದರೂ ನನಗೊಂದು ಅನುಮಾನ ಎಲ್ಲಾದರು ಬಂದರೆ..??. ಕೊನೆಗೂ ಅವರು ಬರಲಿಲ್ಲ. ಕಾದದ್ದೇ ಕಾದದ್ದು.. ಧೋನಿ ಬರುವನೆಂದು....

ಈ ನಡುವೆ ಕುಕ್ಕೆಯಲ್ಲಿ ಎಷ್ಟು ಪ್ರಚಾರವಾಗಿತ್ತೆಂದರೆ ಧೋನಿ ಬರುತ್ತಾನೆ ಎಂಬ ಮೊಬೈಲ್ ಸಂದೇಶ ಎಲ್ಲೆಡೆ ಹರಡಿತ್ತು. ಅಕಸ್ಮಾತ್ ಆತ ಬಂದಿದ್ದರೆ ಜನ ಜಾತ್ರೆಯೇ ಸೇರುತ್ತಿತ್ತು.ಅದಲ್ಲದೆ ಅಂದು ಕುಕ್ಕೆ ಪೊಲೀಸ್ ಠಾಣೆಯಲ್ಲಿದ್ದು ೩ ಜನ ಪೊಲೀಸರು..!!!

ಒಟ್ಟಿನಲ್ಲಿ ಧೋನಿಗಾಗಿ ಕಾದ ನಾವು ಪೆಚ್ಚು ಮುಖದಲ್ಲಿ ಹಿಂತಿರುಗಿದೆವು... ಆಶಾ ಗೋಪುರವು ಕುಸಿದಿತ್ತು....

ಕಾಮೆಂಟ್‌ಗಳಿಲ್ಲ: