23 ಆಗಸ್ಟ್ 2015

ಮನಸ್ಸೇ ಬೀಗ ತೆಗೆ. . .


ಅನೇಕ ದಿನಗಳಿಂದ ಈ ಕಡೆಗೆ ಬರಲು ಸಾದ್ಯವೇ ಆಗಿರಲಿಲ್ಲ.ಮನಸ್ಸು ಸದಾ ಇತ್ತ ಹೊರಳುತ್ತಲೇ ಇತ್ತು.ಆದರೆ ಸಾಧ್ಯವಾಗುತ್ತಿರಲಿಲ್ಲ, ಅದಕ್ಕೊಂದು ಬೀಗ ಇತ್ತು.ಈಗಂತೂ ಆ ಬೀಗ ಕಳಚಿ ಬಂದಿದ್ದೇನೆ. .

ಅಂದು ಒಂದು ದಿನ ನಾನು ಮನಸ್ಸಿನ ಸಂಗತಿಗಳನ್ನು  ಮೌನವಾಗಿ ಹೇಳುತ್ತಿದೆ, ಇದೆಲ್ಲವೂ ಇಲ್ಲಿ ದಾಖಲಿಸುತ್ತಲೇ ಇದ್ದೆ.ಅನೇಕ ರೀತಿಯಿಂದ ಸ್ಪೂರ್ತಿ, ಪ್ರೋತ್ಸಾಹ ಇತ್ತು. ಒಂದು ದಿನ ಇದ್ದಕ್ಕಿದ್ದಂತೆ ನನಗೆ ಒತ್ತಡ ಬಂದಿತ್ತು, ಹಿತವಚನ, ಸಲಹೆ ಬಂತು. ಕೊನೆಗೆ ಈ ವೇಗಕ್ಕೆ ಕಡಿವಾಣ ಹಾಕಿದೆ.ಮನಸ್ಸಿನ ಮಾತಿಗೆ ಬೀಗ ಜಡಿದೆ. ಆದರೆ ನನಗೆ ಈಗಲೂ ನೆನಪಿದೆ, ಅಂದು ನನ್ನ ಮನಸ್ಸಿನ ಮೂಲಕ ಬಂದ ಮೌನದ ಮಾತುಗಳು ಇಂದು ದೊಡ್ಡ ಸುದ್ದಿಯಾಗಿದೆ. ಚರ್ಚೆಯಾಗುತ್ತಲೇ ಇದೆ. ಇರಲಿ ನನಗೆ ಅದು ಸಂಬಂಧಪಟ್ಟದ್ದಲ್ಲ. ನನಗೆ ಯಾರ ಬಳಿಯೂ ಬೇಸರವಿಲ್ಲ, ನೋವುಗಳೂ ಇಲ್ಲ. ಯಾರ ವಿರೋಧಿಯಂತೂ ಅಲ್ಲವೇ ಅಲ್ಲ. ಎಲ್ಲರೂ ನನ್ನವರೇ, ನಮ್ಮವರೇ. ಅಂದು ಮನಸ್ಸು ಕೊಂಚ ಮೌನವಾಗಿತ್ತು, ಮೌನಿಯಾಗಿತ್ತು. ಆದರೆ ಈಗ ಹಾಗಿಲ್ಲ. ಎಲ್ಲವೂ ರೈಟ್, ಎಲ್ಲದಕ್ಕೂ ರೈಟ್. ಹಾಗಿದ್ದರೂ ಈ ಬೀಗ ತೆರವು ಮಾಡಲು ಆಗಿರಲಿಲ್ಲ. ಈಗ ತೆರೆದಿದ್ದೇನೆ.
ಇಂದಿನಿಂದಲೇ ಇಲ್ಲಿ  ಶುರು.  ..

ಕಾಮೆಂಟ್‌ಗಳಿಲ್ಲ: