01 ಮಾರ್ಚ್ 2011

ಇದೇನು ಹಗರಣವಾ ?

ಸುಳ್ಯದಲ್ಲಿ ಮೊನ್ನೆ ಇದ್ದಕ್ಕಿದ್ದಂತೆಯೇ ಇ ಸ್ಟಾಂಪ್ ಪಡೆಯಲು ತೀರಾ ರಶ್. ಇಂದು ಕೊಟ್ಟರೆ ನಾಳೆಯೋ ನಾಡಿದ್ದೋ ಸಿಗುತ್ತಿತ್ತು.ಇದ್ಯಾಕೆ ಅಂತ ಯಾರಿಗೂ ಗೊತ್ತಿಲ್ಲ.ಇದರ ಬೆನ್ನಿಗೇ ಒಂದೊಂದು ಸಂಗತಿ ಬಿಚ್ಚತೊಡಗಿತು. ಸ್ವಲ್ಪ ಹುಡುಕಾಡಿದಾಗ ಸಿಕ್ಕಿದ್ದು ಹೀಗೆ . .


ತೆಲಗಿ ಹಗರಣದ ನಂತರ ಛಾಪಾ ಕಾಗದ ವಿತರಣೆಯಲ್ಲಿ ಭಾರೀ ಎಚ್ಚರಿಕೆಯನ್ನು ಸರಕಾರ ವಹಿಸಿತ್ತು. ಅದಕ್ಕಾಗಿ ವಿವಿದ ರೀತಿಯ ಕ್ರಮ ಕೈಗೊಂಡಿತ್ತು. ಈಗ ಇ ಸ್ಟಾಂಪಿಗ್ ವ್ಯವಸ್ಥೆ ಮಾಡಿದೆ.ಅದರೊಂದಿಗೆ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಂಬ್ರೋಸಿಂಗ್ ಮತ್ತು ಪ್ರಾಂಕ್ಲಿನ್ ವ್ಯವಸ್ಥೆಯನ್ನು ಜನಸಾಮಾನ್ಯರಿಗೆ ಮಾಡಿಕೊಟ್ಟಿದೆ.

ಸುಳ್ಯದಲ್ಲಿ ಮೊನ್ನೆ ಇದ್ದಕ್ಕಿದ್ದಂತೆಯೇ ಇ ಸ್ಟಾಂಪ್ ಪೇಪರ್ ಪಡೆಯಲು ತೀರಾ ರಶ್. ಇಂದು ಕೊಟ್ಟರೆ ನಾಳೆಯೋ ನಾಡಿದ್ದೋ ಇ ಸ್ಟಾಂಪ್ ಸಿಗುತ್ತಿತ್ತು. ಎಂಬ್ರೋಸಿಂಗ್ , ಪ್ರಾಂಕ್ಲಿನ್ ವ್ಯವಸ್ಥೆ ಸುಳ್ಯದಲ್ಲಿ ಈಗ ಇಲ್ಲವೆಂದು ಜನ ಹೇಳುತ್ತಿದ್ದರು. ಆದರೆ ಇದು ಯಾಕೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಈ ವಿಚಾರದ ಬೆನ್ನ ಹಿಂದೆ ಹೋದರೆ ಕಳೆದ ಎರಡು ಮೂರು ವರ್ಷದಿಂದ ನಡೆಯುತ್ತಿದ್ದ ದೊಡ್ಡ ವಂಚನೆ ಬೆಳಕಿಗೆ ಬರುತ್ತದೆ. ಸರಕಾರಕ್ಕೆ ಸಾವಿರಾರು ರುಪಾಯಿ ವಂಚಿಸಿದ ಸಂಗತಿ ಹೊರಬರುತ್ತದೆ.ಆದರೆ ಈಗ ಇದೆಲ್ಲವೂ ಮುಚ್ಚಿ ಹೋಗುವ ಹಂತದಲ್ಲಿದೆ.

ಏನಿದು ?

ಛಾಪಾ ಕಾಗದದ ಬದಲಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಂಬ್ರೋಸಿಂಗ್ ಮಾಡುವ ಪದ್ದತಿಯನ್ನು ಸರಕಾರ ಜಾರಿಗೊಳಿಸಿತ್ತು. ಇದರ ಪ್ರಕಾರ ನಾವು ಖಾಲಿ ಹಾಳೆ ಅಥವಾ ಹಳೆಯ ಸ್ಟಾಂಪ್ ಪೇಪರನ್ನು ತೆಗೆದುಕೊಂಡು ಹೋದರೆ ಅಲ್ಲಿ ಒಂದು ಸೀಲ್ ಹಾಕಿ ಸರಕಾರಕ್ಕೆ ನೂರು ರುಪಾಯಿ ಕಟ್ಟಬೇಕು. ಅಂದರೆ ಆ ಎಂಬ್ರೋಸಿಂಗ್ ಮಾಡಿದ ಹಾಳೆಯಲ್ಲಿ ಒಂದು ಸೀರಿಯಲ್ ನಂಬರನ್ನು ಬರೆಯಬೇಕು.ಇದೇ ಸಂಖ್ಯೆಯನ್ನು ನಮೂದಿಸಿ , ರಿಜಿಸ್ಟ್ರಾರ್ ಕಚೇರಿಯಲ್ಲಿ ರೆಕಾರ್ಡ್ ಮೈಂಟೈನ್ ಮಾಡಬೇಕು. ಇದರ ಪ್ರಕಾರ ಸರಕಾರಕ್ಕೆ ಹಣ ಸಂದಾಯ ಮಾಡಬೇಕು. ಆದರೆ ಇಲ್ಲಿ ಆಗಿರುವುದೇ ಬೇರೆ. ಆ ಸೀರಿಯಲ್ ನಂಬರೇ ಇಲ್ಲ. ಈ ನಂಬರೇ ಇಲ್ಲದ ಮೇಲೆ ಸರಕಾರಕ್ಕೆ ಹಣ ಕೊಡುವುದು ಹೇಗೆ ಮತ್ತು ಯಾರು. ಹಾಗಂತ ಸಾರ್ವಜನಿಕರಿಂದ ಹಣ ವಸೂಲು ಮಾಡಲಾಗುತ್ತದೆ. ಇಂತಹ ಅದೆಷ್ಟೋ ಛಾಪಾ ಕಾಗದ 2 ವರ್ಷದಿಂದ ಬಳಕೆಯಾಗುತ್ತಾ ಇದೆ. ಎಂಗ್ರಿಮೆಂಟ್‌ಗಳು ನಡೆಯುತ್ತಾ ಇದೆ.




ಇತ್ತೀಚೆಗೆ ಕೃಷಿಕರೊಬ್ಬರು ಬ್ಯಾಂಕೊಂದಕ್ಕೆ ವಿವಿದ ದಾಖಲೆಗಳನ್ನು ನೀಡಿದರಂತೆ , ಆಗ ಬೆಳಕಿಗೆ ಬಂದದ್ದು ಈ ನಕಲಿ ಸ್ಟ್ಯಾಂಪ್ ಪೇಪರ್. ಈ ಬಗ್ಗೆ ರಿಜಿಸ್ಟ್ರಾರ್ ಕಚೇರಿಯಲ್ಲೂ ವಿಚಾರಿಸದಾಗ ಎಲ್ಲಾ ಪ್ರಮಾದಗಳು ಬೆಳಕಿಗೆ ಬಂದಿದೆ. ಅದಾದ ಬಳಿಕ ಕೆಲ ದಿನದ ನಂತರ ಮರಳು ಸಾಗಾಟ ಪ್ರಕರಣವನ್ನು ಕೇರಳ ಪೊಲೀಸರು ಬೇಧಿಸಿದಾಗ ಅದರಲ್ಲಿ ಕಂಡು ಬಂದದ್ದೂ ಇಂತಹದ್ದೇ ನಕಲಿ ಸ್ಟ್ಯಾಂಪ್ ಪೇಪರ್. ಆದರೆ ಎರಡೂ ಪ್ರಕರಣದಲ್ಲಿ ಈ ಬಗ್ಗೆ ದೂರುಗಳು ದಾಖಲಾಗಿಲ್ಲ. ಎಲ್ಲವೂ ಅಲ್ಲಿಗೇ ಮುಚ್ಚಿಹೋಗಿದೆ.

ಇದೆಲ್ಲಾ ಬೆಳಕಿಗೆ ಬಂದಾಗುವ ವೇಳೆ ಕೂಡಲೇ ಎಂಬ್ರೋಸಿಂಗ್ ಪದ್ದತಿಯನ್ನು ನಿಲ್ಲಿಸಿ , ಕೇವಲ ಇ ಸ್ಟ್ಯಾಂಪಿಂಗ್ ವ್ಯವಸ್ಥೆ ಮಾತ್ರಾ ಬಳಕೆಯಾಗಬೇಕು ಎಂಬ ಸುಳ್ಯದಲ್ಲಿ ರೂಲ್ ಬಂತು. ಹೀಗಾಗಿ ಈಗ ಜನರಿಗೆ ಸಂಕಷ್ಠ.

ಅಷ್ಟಕ್ಕೂ ಈ ಹಗರಣ ಮಾಡಿದವರು ಯಾರು ?. ಹೇಗೆ ಆಯಿತು ? ಇಲಾಖೆಗಳು ಈ ಬಗ್ಗೆ ಯಾಕೆ ತನಿಖೆ ಮಾಡುತ್ತಿಲ್ಲ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.ಕಳೆದ 2 ವರ್ಷದಿಂದ ನಡೆದ ಈ ಅವ್ಯಹಾರ ಎಷ್ಟಾಗಿದೆ ಎಂಬುದೂ ಗೊತ್ತಾಗಿಲ್ಲ.ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿದೆ.

ಕಾಮೆಂಟ್‌ಗಳಿಲ್ಲ: