26 ಡಿಸೆಂಬರ್ 2010

ಬೆಲೆ ಬಿಸಿ . . ತಲೆ ಬಿಸಿ .

ಒಂದು ಕೇಜಿ ಈರುಳ್ಳಿ ಕೊಳ್ಳೋ ಹಾಗಿಲ್ಲ.ಏನು ರೇಟು. .?. ಈ ಕಡೆ ಬಂದು ಬೇಳೆ ರೇಟು ನೋಡಿದ್ರೆ ಅಬ್ಬಾ. . !. ಅದೆಲ್ಲಾ ಇರ್ಲಿ ಗಾಡಿಗೆ ಒಂದು ಲೀಟರ್ ಪೆಟ್ರೋಲ್ ಹಾಕೋಣವೆಂದ್ರೆ ಬರೋಬ್ಬರಿ 62 ರುಪಾಯಿ , ಡೀಸೆಲ್‌ಗೆ 42 ರುಪಾಯಿ . ಸದೂ ಅಲ್ಲ ಇನ್ನೂ ಏರುತ್ತಂತೆ ರೇಟು . . ಹೀಗೆ ರೋಡಿಗಿಳಿದ್ರೆ ಬೆಲೆ ಏರಿಕೆಯ ಮಾತು ಕೇಳಿಬರುತ್ತಲೇ ಇದೆ.

ಇದೆಲ್ಲಾ ಮೊನ್ನೆ ಮೊನ್ನೆ ಎಲ್ಲಾ ಮೀಡಿಯಾದಲ್ಲೂ , ಎಲ್ಲಾ ಜನರ ಬಾಯಲ್ಲೂ ಇಶ್ಯೂ ಆಗಿತ್ತು, ಆಗುತ್ತಲೇ ಇತ್ತು. ಇದೇ ವೇಳೆ ಅಲ್ಲಿ ಒಂದು ಕಡೆ ರೈತರು ಕೂಡಾ ಬೊಬ್ಬೆ ಹಾಕಿದ್ರು.ನಮ್ಗೆ ಬೆಲೆನೇ ಸಿಕ್ತಿಲ್ಲ , ಈರುಳ್ಳಿ ಎಲ್ಲಾ ನಾಶ ಆಯ್ತು , ಬೆಳೆನೇ ಇಲ್ಲಾ ಅಂತೆಲ್ಲಾ ಬೊಬ್ಬೆ ಹಾಕ್ತಿದ್ದಂತೇ ದೂರದ ಪಾಕಿಸ್ತಾನದಿಂದ ಈರುಳ್ಳಿ ಬಂತು. ನಮ್ಮಲ್ಲಿ ಈರುಳ್ಳಿ ಬೆಲೆ ಕೊಂಚ ಇಳೀತು. ಇಷ್ಟೆಲ್ಲಾ ಆಗುತ್ತಿರುವಾಗ ಅಲ್ಲಿ ರೈತರ ಕೂಗು ಕೇಳಿಸಲೇ ಇಲ್ಲ. ರೈತರು ಒಂದಿಷ್ಟು ಈರುಳ್ಳಿ ರಸ್ತೆಗೆ ಚೆಲ್ಲಿ ನಷ್ಠ ಮಾಡಿದ್ದು ಮಾತ್ರಾ ಬಂತು. ಬೆಲೆ ಏರಿಕೆಯ ಸುದ್ದಿಯಾದಷ್ಟು ದೊಡ್ಡ ಸುದ್ದಿಯೇ ಆಗಿಲ್ಲ , ಇಶ್ಯೂ ಕೂಡಾ ಆಗಿಲ್ಲ. ರೈತ ಬೆಳೆದ್ರೆ ಮಾತ್ರಾ ಅದು ನಗರದ ಗೂಡಂಗಡಿಯಲ್ಲೋ , ಮಾಲ್‌ಗಳಲ್ಲೋ ಸಿಗೋದು ಅಂತ ಗೊತ್ತಿಲ್ವೋ ಏನೋ. .?.ಇವತ್ತು ಸಮಸ್ಯೆ ಆಗಿರೋದೇ ಇಲ್ಲಿ.ಎಲ್ಲಿಯ ಸಮಸ್ಯೆ ಇಶ್ಯೂ ಆಗಬೇಕಿತ್ತೋ ಅದು ಆಗಿಲ್ಲ.ಅನಾವಶ್ಯಕವಾದ ಕೆಲ ಸಂಗತಿಗಳು ದೊಡ್ಡ ಸುದ್ದಿಯಾಗುತ್ತಿವೆ. ರೈತರ ಸಮಸ್ಯೆಗಳ ಬಗ್ಗೆ ಈ ಮೊದಲೇ ಸುದ್ದಿಯಾಗುತ್ತಿದ್ದರೆ ಈರುಳ್ಳಿ ಬೆಲೆ ಏರಿಕೆಯಂತಹ ಸಮಸ್ಯೆಗಳು ಆಗುತ್ತಿರಲಿಲ್ಲ. ಇಲ್ಲಿ ಆದದ್ದು ಅದೇ. ಈರುಳ್ಳಿ ಬೆಳೆದ ರೈತರು ಕಡಿಮೆ ಬೆಲೆಗೆ ಮಾರಾಟಮಾಡಿಯಾಗಿತ್ತು.ಆದರೆ ಅಲ್ಲಿ ಲಾಭ ಮಾಡಿಕೊಂಡದ್ದು ಮಧ್ಯವರ್ತಿಗಳು.ರೈತರಿಗೆ ಮಾತ್ರಾ ಪಂಗನಾಮ. ಇಂತಹ ಸಂಗತಿಗಳು ಹೊರಬರುವಾಗ ಬೆಲೆ ಗಗನಕ್ಕೇರಿತ್ತು.ಯಾರಿಂದಲೂ ಏನೂ ಮಾಡಲಾಗದ ಸ್ಥಿತಿ.

ಹೀಗೇ ಇಂದು ರೈತರೆಲ್ಲಾ ನಗರಕ್ಕೆ ವಲಸೆ ಹೋಗುತ್ತಿದ್ದಾರೆ ತಡೀಬೇಕು ನೀವು ಇಲ್ಲೇ ಇರಿ ಎಂದೆಲ್ಲಾ ಭಾಷಣ ಮಾಡೋ ಜನರಿದ್ದಾರೆ. ಆದರೆ ಹೇಗೆ ತಡೆಯೋದು , ಸಮಸ್ಯೆಗೆ ಪರಿಹಾರ ಹೇಗೆ?. ಉತ್ತರವಿಲ್ಲ. ಇಂತಹ ಭಾಷಣ ಮಾಡಿದ ವ್ಯಕ್ತಿಯೊಬ್ಬರು ಅಂದು ನನಗೊಮ್ಮೆ ಸಿಕ್ಕಿದ್ದರು. ಆಗ ಇದೇ ಬೆಲೆ ಏರಿಕೆ ಬಗ್ಗೆ ಸ
ಅವರು ಮಾತನಾಡಿದ್ದರು. ಭಾಷಣದಲ್ಲಿ ರೈತರ ಬೆಳೆಗಳಿಗೆ ಬೆಲೆ ಸಿಗಲೇಬೇಕು ಎಂದೆಲ್ಲಾ ಹೆಳಿದ್ದರು. ಆ ಬಳಿಕ ಖಾಸಗಿಯಾಗಿ ಮಾತನಾಡಿದ ಅವರು, ಕೊಳ್ಳೋ ಕೈಗಳು ಹೆಚ್ಚಿವೆ , ಬೆಳೆಯೋ ಕೈಗಳು ಕಡಿಮೆ ಇವೆ. ಕೊಳ್ಳೋರ ಓಟು ಹೆಚ್ಚಿದೆ , ಕೊಡೋರ ಓಟು ಕಡಿಮೆ ಇದೆ. ಹೀಗಾಗಿ ಬೆಳೆಯೋರ ನಡುವೆ ಮತ್ತು ಕೊಳ್ಳೋರ ನಡುವೆ ವ್ಯತ್ಯಾಸ ಕಂಡುಬರುತ್ತಿದೆ ಅಂತಾರೆ ಅವರು. ಉದಾಹರಣೆಗೆ , ಹಳ್ಳಿಗಳಲ್ಲಿ ಈಗ ಹೈನುಗಾರರ ಸಂಖ್ಯೆ ಕಡಿಮೆ ಇದೆ.ಅದಕ್ಕಾಗಿ ಹೈನುಗಾರರ ಸಂಖ್ಯೆ ಹೆಚ್ಚಾಗಬೇಕೆಂದು ಹಾಲಿನ ದರ ಏರಿಕೆ ಮಾಡಬೇಕು ಅಂತ ಸಲಹೆ ಕೊಡಬಹುದು.ಆದ್ರೆ ಅದು ಸಾಧ್ಯಾನಾ?.ಒಂದು ಲೀಟರ್‌ಗೆ ಹಾಲು ಖರೀದಿಗೆ ಒಂದು ರುಪಾಯಿ ಹೆಚ್ಚು ಮಾಡಿದ್ರೆ , ಮಾರಾಟದ ಬೆಲೆಯಲ್ಲಿ ಎರಡು ರುಪಾಯಿ ಏರಿಕೆಯಾಗುತ್ತೆ. ಹೈನುಗಾರರು ಇರೋದು ಒಂದು ಲಕ್ಷವಾದರೆ ಕೊಳ್ಳೋರು ಹತ್ತು ಲಕ್ಷ ಜನ ಇದ್ದಾರೆ. ಆಗ ಧ್ವನಿ ಯಾರದ್ದು ಕೇಳಿಸುತ್ತೆ?. ಹಾಲಿನ ದರ ಏರಿಕೆಯ ಬಿಸಿ . . , ಹಾಲು ದುಬಾರಿ . . , ನಿಮ್ಗೆ ಏನ್ಸತ್ತೆ . .? ಎಂದೆಲ್ಲಾ ನಾಳೆ ಬರುತ್ತೆ. ಅದೇ ಹೈನುಗಾರನಿಗೆ ಒಂದು ಲೀಟರ್ ಹಾಲಿನ ಖರ್ಚು ಎಷ್ಟು ಅಂತ ಎಲ್ಲಾದರೂ , ಯಾರಾದರೂ ಕೇಳಿದ್ದು. .?.

ಹಾಗಾಗಿ ಈಗ ಇದೇ ಸಮಸ್ಯೆ ಕೊಡೋನು ಯಾವತ್ತೂ ಕೋಡಂಗಿಯೇ. ಕೊಳ್ಳೋನು ಮಾತ್ರಾ ಜಾಣ.

ಇದು ಬದಲಾಗಿ ಕೊಳ್ಳೋನು ಕೊಡೋನು ಇಬ್ಬರೂ ಜಾಣರಾಗಬೇಕು ಅಷ್ಟಾದರೆ ಪುಣ್ಯ.

ಕಾಮೆಂಟ್‌ಗಳಿಲ್ಲ: