07 ಏಪ್ರಿಲ್ 2010

ಕ್ಷೀರ ಸಾಗರದ ನಾಡಲ್ಲಿ ಹಾಲಿಗೆ ತತ್ತ್ವಾರ . . . . .

ಹಾಲಿನ ದರ ಏರಿಕೆ ಕಂಡಿದೆ. ಅದು ಅನಿವಾರ್ಯ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ.ಬೆಲೆ ಏರಿಕೆಯ ಹಣದಲ್ಲಿ ರೈತರಿಗೆ ಸಿಂಹಪಾಲು ಅಂತಲೂ ಹೇಳಿದ್ದಾರೆ.ಈಗ ಶುರುವಾಗಿದೆ ಚರ್ಚೆಯ ಮೇಲೆ ಚರ್ಚೆಗಳು.ಈ ಸಂದರ್ಭದಲ್ಲಿ ವಾಸ್ತವದ , ಹಳ್ಳಿಯಲ್ಲಿನ ಹೈನುಗಾರಿಕೆ ಕಡೆಗೆ ನೋಡಲೇ ಬೇಕು..

ಇತ್ತೀಚೆಗೆ ರೈತ ಹೋರಾಟಗಾರರೊಬ್ಬರು ರಾಜಧಾನಿಯಲ್ಲಿರೋ ರಾಜಕಾರಣಿ ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಾ ಹಾಲಿನ ದರ ಏರಿಕೆ ಮಾಡಿ ಅಂತ ಹೇಳುತ್ತಿದ್ದರಂತೆ.ಅವರ ಮಾತು ಪೂರ್ತಿಯಾದ ಬಳಿಕ ರೈತರಿಗೆ ಸಿಕ್ಕ ಉತ್ತರ ಅಚ್ಚರಿಯಾಗಿತ್ತು. ಸಾರ್ ನೀವ್ ರೈತರುಗಳೆಲ್ಲಾ ನಗರಕ್ಕೇ ಬಂದ್ಬುಡಿ.. ಇಲ್ಲಿ ಕಂಡ್ಲೆಕಾಯಿನಾದ್ರೂ ಮಾರಾಟ ಮಾಡಿ ಬದಕು ಸಾಗಿಸ್ಕೋಬಹುದು.ಅಲ್ಲಿ ಹೈನುಗಾರಿಕೇನ ಮಾಡಿ ಹೇಗ್ ಸ್ವಾಮಿ ಬದ್ಕೋತೀರಾ..?. ನೀವ್ ಹೇಳ್ತೀರಾ ಹಾಲಿನ ಬೆಲೆ ಏರಿಕೆ ಮಾಡಿ ನಮ್ಗೂ ಸರಿಯಾದ ರೇಟು ಕೊಡಿ ಅಂತ ಮನವಿ ಮೇಲೆ ಮನವಿ ಕೊಡ್ತೀರಾ.. ನಾವ್ ಏನ್ ಮಾಡ್ಲಿ ಸ್ವಾಮಿ.. ನೀವ್ ಹೈನುಗಾರರಿರೋದು 100 ಜನ ಆದ್ರೆ ಹಾಲು ಕೊಳ್ಳೋರು 10 ಸಾವಿರ ಜನ ಇದಾರೆ. ಒಂದು ಪೈಸೆ ಏರಿದ್ರೂ 10 ಸಾವಿರ ಜನ ಬೊಬ್ಬೆ ಹೊಡೀತಾರೆ, ಆ ಸದ್ದಿನ ನಡುವೆ ನಿಮ್ ಅಳಲು ಎಲ್ಲಿ ಕೇಳುತ್ತೆ ಹೇಳಿ ಸ್ವಾಮಿ??. ನಮ್ಗೆ ಆ 10 ಸಾವಿರ ಜನ್ರೂ ಮುಖ್ಯ ಅಲ್ವಾ ಅಂದ್ರಂತೆ. ಈ ಉತ್ತರ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತಾದರೂ ಇಂದಿನ ವಾಸ್ತವ ಸಂಗತಿ.ಇದ್ಯಾಕೆ ಹೀಗಾಯ್ತು.ಹಾಲು ಉತ್ಪಾದನೆಯಲ್ಲಿ ರಾಜ್ಯದ ಸಾಧನೆ ಇದ್ರೂ ಕೂಡಾ ಇತ್ತೀಚೆಗಿನ ಬೆಳವಣಿಗೆಯಲ್ಲಿ ವ್ಯತ್ಯಾಸವಾಗತೊಡಗಿದೆ.1 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದ್ದ ಡೈರಿಯಲ್ಲಿ 100 ಲೀಟರ್ ಸಂಗ್ರಹವಾಗುವ ಸ್ಥಿತಿಗೆ ಬಂದಿದೆ.ಹೈನುಗಾರಿಕೆ ರೈತರಿಗೆ ಸಾಕಾಗಿಹೋಗಿದೆ.ಕ್ಷೀರಸಾಗರ ಭಟ್ಟರ ಮನೆಯಲ್ಲಿ ಈಗ ಹಾಲಿಗೇ ತತ್ತ್ವಾರ ಉಂಟಾಗಿದೆ.

ಈ ಹಳ್ಳಿಹಳ್ಳಿಗಳಲ್ಲಿ ಹಾಲು ಸಂಗ್ರಹಕ್ಕೆಂದು ವ್ಯಾನ್ , ಒಮ್ನಿ , ರಿಕ್ಷಾ ಹೀಗೇ ವಿವಿದ ವಾಹನಗಳು ಬೆಳಗ್ಗೆ ಓಡಾಡುತ್ತದೆ.ಅದಕ್ಕೆ ರೈತರು ಹಾಲು ಕೊಡುತ್ತಿದ್ದರು.ಅಂತಹ ಚಿಕ್ಕ ವಾಹನಗಳಲ್ಲೇ ಸುಮಾರು 200 ಲೀಟರ್ ಹಾಲು ಇರುತ್ತಿತ್ತು.ಆದ್ರೆ ಇಂದು ನೋಡಿದ್ರೆ ಕೆಲವೆಡೆ ಹಾಲಿನ ರಿಕ್ಷಾವೇ ನಾಪತ್ತೆ.ಇದ್ರೂ 10 ಲೀಟರ್ 20 ಲೀಟರ್ ಹಾಲು.ಅಂದ್ರೆ ಹಳ್ಳಿಲೀ ಹಾಲು ಉತ್ಪಾದಕರು ಇಳಿಮುಖವಾಗಿದ್ದಾರೆ ಅಂತ ಸ್ಪಷ್ಠವಾಗಿದೆ. ನಿಜಕ್ಕೂ ಇದು ಸತ್ಯ.ಹೈನುಗಾರಿಕೆ ಹಳ್ಳಿಗರಿಗೆ ಬೇಡವಾಗಿದೆ.ಹಸುವಿದ್ದರೂ ಮನೆಗೆ ಬೇಕಾದಷ್ಟು ಮಾತ್ರಾ ಹಾಲು ಉತ್ಪಾದಿಸುತ್ತಾರೆ.

ಹೌದು ನನಗೆ ನೆನಪಿದೆ ನಮ್ಮಲ್ಲೂ 5-6 ದನಗಳು ಇದ್ದವು.ಒಂದೆರಡು ವರ್ಷದ ಹಿಂದೆ ಹಾಲು ಡೈರಿಗೆ ಹೋಗಲೆಂದು ಸ್ಕೂಟರ್ ತೆಗೆದು ನಾನೇ ಸ್ಕೂಟರ್‌ನಲ್ಲಿ ಹಾಲು ಡೈರಿಗೆ 8 ರಿಂದ 10 ಲೀಟರ್ ನೀಡುತ್ತಿದೆ.ಆದ್ರೆ ಈಗ ನಮ್ಮ ಮನೆ ಬಳಕೆಗೆ ಎಷು ಬೇಕು ಅಷ್ಟು ಮಾತ್ರಾ ಹಾಲು ಸಾಕು ಎನ್ನುವ ಕಾರಣಕ್ಕೆ ಒಂದೇ ದನ ಇದೆ. ಹಾಗೆಯೇ ಇಡೀ ನಮ್ಮ ಆಸುಪಾಸಿನಲ್ಲಿ ದನ ಸಾಕುವವರೇ ಕಡಿಮೆಯಾಗಿದ್ದಾರೆ.ಕೆಲವರು ಎಲ್ಲಾ ದನಗಳನ್ನು ಮಾರಾಟ ಮಾಡಿದ್ದಾರೆ.ಇನ್ನೂ ಕೆಲವರು ಗೋಶಾಲೆ ಹುಡುಕಿದ್ದಾರೆ.ಇದ್ಯಾಕೆ ಹೀಗಾಯ್ತು ನೋಡಿ... . ಮೊದಲನೆಯದಾಗಿ ಕಾರ್ಮಿಕರ ಕೊರತೆ.ಇನ್ನು ದರ ಏರಿಕೆ.ಒಂದು ಲೀಟರ್ ಹಾಲು ಮಾರಾಟ ಮಾಡಿದ್ರೆ ಸಿಗೋದು 12 ರುಪಾಯಿ 13 ರುಪಾಯಿ 15 ರುಪಾಯಿ.ಆದ್ರೆ ಒಂದು ಲೀಟರ್ ಹಾಲಿನ ಉತ್ಪಾದನಾ ವೆಚ್ಚಕ್ಕಿಂತ ಸಿಗೋದು ಕಡಿಮೆ.ಹಾಗಾಗಿ ರೈತ ಲಾಸ್‌ನಲ್ಲೇ ಹಾಲು ಉತ್ಪಾದಿಸುತ್ತಾನೆ. ಉಪ ಉತ್ಪನ್ನಗಳು ಸಿಗುತ್ತವಾದರೂ ಅದಕ್ಕಿಂತ ಕಡಿಮೆ ವೆಚ್ಚದಲ್ಲಿ ಇಂದು ಅದೇ ಉತ್ಪನ್ನಗಳು ಮಾರಿಕಟ್ಟೆಯಲ್ಲಿ ಸಿಗುವುದರಿಂದ ರೈತರು ಲಾಭ ನಷ್ಠದ ಲೆಕ್ಕ ಹಾಕಿ ಹೈನುಗಾರಿಕೆಗೆ ಟಾ ಟಾ ಹೇಳತೊಡಗಿದರು. ನಮ್ಮೂರಿನ ಒಂದು ಕಡೆ 18 ದನಗಳು ಇದ್ದವು.ಕ್ಷೀರ ಕ್ರಾಂತಿಯೇ ಅಲ್ಲಾಗಿತ್ತು.ಇಂದು ಅಲ್ಲಿ ನೋಡಿದ್ರೆ ಕೇವಲ 2 ದನಗಳು ಇವೆ.ಹಟ್ಟಿಗಳೆಲ್ಲಾ ರೂಮ್‌ಗಳಾಗಿವೆ. ಹೀಗೆಯೇ ಎಲ್ಲೆಡೆ ಹೈನುಗಾರಿಕೆಯಿಂದ ಹೊರಬರುತ್ತಿರಬೇಕಾದರೆ ಇನ್ನು ಏನು ಮಾಡಿದರೂ ರೈತರು ಮಾನಸಿಕವಾಗಿ ಹೈನುಗಾರಿಕೆಯಿಂದ ಹೊರಬರಲು ನಿರ್ಧರಿಸಿಯಾಗಿದೆ.ಒಂದಷ್ಟು ದಿನ ಹೀಗೆ ಬೆಲೆ ಏರಿಕೆಯಂತಹ ಗಿಮಿಕ್ ಮಾಡಿ ಉಳಿಸಿಕೊಳ್ಳಬಹುದೇ ವಿನ: ಇದುವೇ ಶಾಶ್ವತ ಪರಿಹಾರ ಅಲ್ಲ.ಇದೊಂದು ತಾತ್ಕಾಲಿಕ ಟಾನಿಕ್ ಅಷ್ಟೆ.ಯಾಕೆಂದ್ರೆ ರೈತರಿಗೆ ಸರಕಾರದ ಬಳಿ ದುಂಬಾಲು ಬಿದ್ದು ಸಾಕಾಗಿದೆ.ಹಾಗಾಗಿ ಇಂದು ಬೆಂಗಳೂರು ನಗರವೊಂದರಲ್ಲೇ ಸುಮಾರು ೨ ಲಕ್ಷ ಲೀಟರ್ ಹಾಲಿನ ಕೊರತೆ ಇದೆ.ಮುಂದೆ ಇದಕ್ಕೆ ಸೇರಿಕೊಂಡು ಹೋಗುತ್ತದೇ ವಿನ: ಕಡಿಮೆಯಾಗದು.ಇನ್ನಷ್ಟು ನಗರಕ್ಕೆ ಇದೇ ಸಮಸ್ಯೆ ವ್ಯಾಪಿಸುವ ದಿನಗಳು ದೂರವಿಲ್ಲ.ಹಾಗಾಗು ಗ್ರಾಹಕರು ಕೂಡಾ ಮಾನಸಿಕವಾಗಿ ಪರ್ಯಾಯ ಮಾರ್ಗದತ್ತ ಯೋಚಿಸುವುದು ನಿಜಕ್ಕೂ ಒಳ್ಳೆಯದು ಅಲ್ವಾ. . . ?.

ಅದಕ್ಕೂ ಮನಸ್ಸು ಒಪ್ಪೋದದಿಲ್ಲ.ಯಾಕ್ ಗೊತ್ತಾ.ಕೆಲ ಹಾಲುಗಳನ್ನು ದಿನನಿತ್ಯ ಕುಡಿದ್ರೆ ಓವರ್ ಹಾರ್ಮೊನ್‌ಗಳ ಸೆಕ್ರೀಶನ್ ಆಗುತ್ತೆ ಅಂತಾರೆ ಡಾಕ್ಟ್ರು.ಹಾಗಾಗಿ ಹುಡುಗಿಯರು ಬೇಗನೇ ಪ್ರಾಯಕ್ಕೆ ಬರೋದು , ಹುಡುಗ್ರು ತೀರಾ ದಪ್ಪ ಆಗೋದು ಇನ್ನಿತರ ಸಮಸ್ಯೆಗಳು ಕಾಡುತ್ತದೆ ಅಂತಾರೆ.ಹಾಗಾಗಿ ಅದೂ ಇಲ್ಲ . . ಇದೂ ಭಯ ಎಂಬ ಸ್ಥಿತಿಯಲ್ಲಿರೋರ ಸಂಖ್ಯೆ ಹೆಚ್ಚಾಗಿದೆ.ಅದಕ್ಕಾಗಿ ಈಗ್ಲೇ ಯೋಚ್ನೆ ಮಾಡ್ಬೇಕಾಗಿದೆ.

ಕಾಮೆಂಟ್‌ಗಳಿಲ್ಲ: