23 ಜೂನ್ 2009

ಸಿಡಿಲಿನ ಮಾಯೆ.. .



ಒಂದು ಪ್ರದೇಶಕ್ಕೆ ಒಂದೆರಡು ಬಾರಿ ಸಿಡಿಲು ಬೀಳುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಪ್ರದೇಶದಲ್ಲಿ ಕಳೆದ 10 ವರ್ಷಗಳಿಂದ ನಿರಂತರವಾಗಿ ಸಿಡಿಲು ಬೀಳುತ್ತಲೇ ಇದೆ.ಈಗಾಗಲೇ ಈ ಕೃಷಿ ಭೂಮಿಯಲ್ಲಿ 20 ಕ್ಕೂ ಅಧಿಕ ತೆಂಗಿನ ಮರಗಳು ಸಾವನ್ನಿಪ್ಪಿವೆ. ಮಾತ್ರವಲ್ಲ ಕಳೆದ ವರ್ಷ ಇಲ್ಲೇ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ ಕೂಡಾ. ಹಾಗಾದ್ರೆ ಇದೇ ಪ್ರದೇಶದಲ್ಲಿ ಏಕೆ ಸಿಡಿಲು ಬೀಳುತ್ತಿದೆ ಎನ್ನುವ ಕುತೂಹಲ ಇಲ್ಲಿನ ಗ್ರಾಮಸ್ಥರಲ್ಲಿದೆ.

ಕಳೆದ 10 ವರ್ಷಗಳಿಂದ ಒಂದೇ ಪ್ರದೇಶಕ್ಕೆ ಸಿಡಿಲು ಬೀಳುತ್ತಲೇ ಇದೆ ಕಾರಣವೇನು ಎಂಬ ಕುತೂಹಲದ ಪ್ರಶ್ನೆ ಇದೆ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದಲ್ಲಿ ಮೂಡಿಬಂದಿರುವ ಪ್ರಶ್ನೆ ಇದು.ಇಲ್ಲಿನ ಉಳಿಯಬೈಲಿನ ಅಜಿತ್ ಕುಮಾರ್ ಎಂಬವರಿಗೆ ಸೇರಿದ ಗದ್ದೆ ಹಾಗೂ ಅಡಿಕೆ ತೋಟದ ಪ್ರದೇಶದಲ್ಲಿ ನಿರಂತರವಾಗಿ ಸಿಡಿಲು ಬಡಿಯುತ್ತಿದೆ. ಹೀಗೆ ಸಿಡಿಲು ಬಡಿದ ಪರಿಣಾಮವಾಗಿ ವರ್ಷ ಕನಿಷ್ಠ ಒಂದು ತೆಂಗಿನಮರ ಸಾಯುತ್ತಿದೆ.ಇದುವರೆಗೆ 20 ಕ್ಕೂ ಅಧಿಕ ತೆಂಗಿನ ಮರ ಸತ್ತಿದೆ.ಹೀಗೆ ಸಿಡಿಲು ಬಡಿಯಲು ಕಾರಣವೇನು ಎಂಬ ಪ್ರಶ್ನೆಗೆ ಇದುವರೆಗೆ ಉತ್ತರ ಸಿಕ್ಕಿಲ್ಲ.

ಕೆಲವರು ಈ ಪ್ರದೇಶದಲ್ಲಿ ಖನಿಜಾಂಶ ಇರಬಹುದು ಎಂದರೆ ಇನ್ನೂ ಕೆಲವರು ಇಲ್ಲಿ ನೀರಿನ ಓಳಹರಿವು ಹೆಚ್ಚಿರಬೇಕು ಎನ್ನುತ್ತಾರೆ.

ಕಳೆದ ವರ್ಷ ಇದೇ ಪ್ರದೇಶದಲ್ಲಿ ಜೊತೆಯಾಗಿ 5 ಜನ ಕೆಲಸ ಮಾಡುತ್ತಿರುವಾಗ ಜೋರಾಗಿ ಗುಡುಗು , ಸಿಡಿಲು, ಮಳೆ ಬಂದಾಗ ಆಶ್ರಯಕ್ಕಾಗಿ ಸಮೀಪದ ತೆಂಗಿನ ಮರದ ಬುಡದಲ್ಲಿ ನಿಂತಿರುವಾಗ ಹಠಾತ್ ಆಗಿ ಸಿಡಿಲು ಬಡಿದು 2 ಜನ ಮೃತ ಪಟ್ಟರೆ ಇತರ ೩ ಜನರಿಗೆ ಗಾಯವಾಗಿತ್ತು.

ಒಟ್ಟಿನಲ್ಲಿ ಇದೊಂದು ಕೌತುಕವೋ ಅಥವಾ ಪ್ರಕೃತಿಯ ಮುನಿಸೋ ಅಥವಾ ಖನಿಜಾಂಶದ ಪರಿಣಾವೋ ಎಂಬುದು ಇನ್ನಷ್ಠೇ ಪತ್ತೆಯಾಗಬೇಕಿದೆ.ಅದುವರೆಗೆ ಈ ತೋಟದ ಮಾಲಿಕರಿಗೆ ಪ್ರತೀ ವರ್ಷದ ಮಳೆಗಾಲವೆಂದರೆ ಆತಂಕವೇ ಆಗಿದೆ.

ಕಾಮೆಂಟ್‌ಗಳಿಲ್ಲ: