10 ಜೂನ್ 2009

ಇದು ಸುದ್ದಿಯಾಗಿಲ್ಲ....

ಇಂದು ಹುಡುಗರೆಲ್ಲಾ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಅಂತ ಬೊಬ್ಬಿಡುವ ನಾವು ನಿಜಕ್ಕೂ ಕೃಷಿ ಬಗೆಗಿನ ಒಳ್ಳೆಯ ವಿಚಾರಗಳಿಗೆ ಏಕೆ ಪ್ರಚಾರ ಕೊಡುತ್ತಿಲ್ಲ ಎನ್ನುವ ಸಂಗತಿಯೊಂದು ಮೊನ್ನೆ ತಲೆಯಲ್ಲಿ ತಿರುಗಾಡುತ್ತಿತ್ತು. ಪ್ರತೀ ದಿನ ಭಾಷಣದಲ್ಲಿ , ಪತ್ರಿಕೆಗಳಲ್ಲಿ , ಮಾಧ್ಯಮಗಳಲ್ಲಿ ಹೇಳುವುದು ಮತ್ತು ಬರೆಯುವುದು ಒಂದೇ ವಿಚಾರ ಇಂದು ಕೃಷಿ ಬಡವಾಗುತ್ತಯಿದೆ. ಯುವಕರು ನಗರದ ಹಾದಿ ಹಿಡಿಯುತ್ತಿದ್ದಾರೆ. ... ಇದೇ ರೀತಿಯ ಹತ್ತು ಹಲವು ವಿಚಾರಗಳನ್ನು ಹೇಳುತ್ತಲೇ ಇರುವು ನಾವು ಯಾಕೆ ಈ ವಿಷಯಗಳಿಂದ ಹೊರಬಂದು ಇಲ್ಲಿರುವ ಕೃಷಿಕರಿಗೆ ಜೀವ ತುಂಬುವ ಮತ್ತು ಪ್ರೋತ್ಸಾಹ ಕೊಡುವ ಕೆಲಸ ಮಾಡಬಾರದು. ಆಗ ನಗರದ ಕೆಲಸದಿಂದ ಬೇಸತ್ತ ಒಂದಷ್ಟು ಯವಕರಾದರೂ ಹಳ್ಳಿಗೆ ಬರಬಹುದಲ್ವಾ ಅಂತ ಯೋಚನೆ ಮಾಡುತ್ತಿರಬೇಕಾದರೆ ಮೊನ್ನೆ ಅಂತಹುದ್ದೇ ಸಂಗತಿಯೊಂದು ನಡೆಯಿತು,.

ಅದು ವಿದೇಶದ ಕೃಷಿನೊಬ್ಬ ನಗರಕ್ಕೆ ಆಗಮಿಸಿ ಪರ್ಯಾಯ ಕೃಷಿಯತ್ತ ವಿವರ ನೀಡುತ್ತಿದ್ದ. ಅದಕ್ಕಾಗಿ ಭಾಷೆಯ ತರ್ಜುಮೆಯಯನ್ನೂ ವ್ಯವಸ್ಥೆ ಮಾಡಲಾಗಿತ್ತು. ಒಂದಷ್ಡು ಉತ್ಸಾಹಿ ಕೃಷಿಕರು ಬಂದಿದ್ದರು. ಅವರಲ್ಲಿ ತಲೆ ಹಣ್ಣಾದವರೇ ಜಾಸ್ತಿ ಅಂತ ನಾವು ಒಳಗೊಳಗೇ ಹೇಳುವ ಬದಲು ಅವರೆರೆಲ್ಲರೂ ಉತ್ಸಾಹೀ ಯುವಕರೇ ಅಂತ ಕರೆದು ಬಿಡೋಣ . ಆದರೆ ನಮ್ಮ ದುರಾದೃಷ್ಠ ಎಂಬಂತೆ ಈ ಕಾರ್ಯಕ್ರಮಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರಚಾರವೇ ಸಿಕ್ಕಿಲ್ಲ. ನಿಜವಾಗಲೂ ಇಂತಹ ಕಾರ್ಯಕ್ರಮಕ್ಕೆ ಪ್ರಚಾರ ಅವಶ್ಯಕತೆಯಿದೆ. ಅಲ್ಲಿ ವಿದೇಶಿ ಕೃಷಿಕನಿಗೆ ಅಲ್ಲ. ಅವನ ವಿಚಾರಕ್ಕೆ ಪ್ರಚಾರ ಬೇಕಿತ್ತು. ಹೇಗೆ ಅಲ್ಲಿನ ಕೃಷಿಕರು ಕಾಫಿ ಬೆಳೆಯಲ್ಲಿ ಸೋತು ಹೋಗಿದ್ದರೂ ಅವರು ಅದನ್ನು ಸರಿದೂಗಿಸಿ ಕೃಷಿಯಲ್ಲಿ ಬೆಳೆದು ಬಂದರು ಎಂಬುದು ಮುಖ್ಯವಾಗುತ್ತದೆ. ಆದರೆ ಅಂತಹ ಕಾರ್ಯಕ್ರಮದ ಒಂದು ತುಣುಕು ಕೂಡಾ ಲೀಡ್ ಆಗಲೇ ಇಲ್ಲ. ನಮ್ಮಲ್ಲೊಂದು ಪೂರ್ವಾಗ್ರಹವಿದೆ. ನಮಗೂ ಆತನಲ್ಲಿ ಆಗೋಲ್ಲ , ಆತನಿಗೂ ನಮ್ಮಲ್ಲಿ ಆಗೋಲ್ಲ ಎಂದರೆ ವಿಚಾರಗಳಿಗೆ ಬ್ರೇಕ್ ಹಾಕುವುದರ ಪರಿಣಾಮವಾಗಿ ಒಂದಷ್ಟು ಉತ್ಸಾಹಿತರಿಗೆ ವಿಚಾರವೇ ತಲಪುವುದಿಲ್ಲ. ಹಾಗಾಗಿ ಕೃಷಿ ಸಂಬಂಧಿ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಚಾರ ಬೇಕು. ಏಕೆಂದರೆ ಯುವಕರು ಕೃಷಿಯತ್ತ ಬರುತ್ತಿಲ್ಲ ಎನ್ನುವ ನಾವು , ಕೃಷಿ ಬೇಕು ಎನ್ನುವ ನಾವು ಅದಕ್ಕೆ ಸಂಬಂಧಿತ ಒಳ್ಳೆಯ ಕಾರ್ಯಕ್ರಮ , ಅಲ್ಲಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲದಿದ್ದರೆ ಹೇಗೆ..? ಅದು ಮಾತ್ರವಲ್ಲ ಇಂದು ಕೃಷಿಯಲ್ಲಿ ಹೊಸ ಆವಿಷ್ಕಾರಗಳು ಮತ್ತು ಬದಲಾವಣೆ ಬೇಕು. ತಂತ್ರಜ್ಞಾನಗಳು ಬೇಕು. ಹಾಗಿದ್ದರೆ ಒಂದಷ್ಡು ಹುಡುಗರು ಇಲ್ಲಿ ಉಳಿಯ ಬಲ್ಲರು. ಅದಲ್ಲದೇ ಹೋದರೆ ಅಜ್ಜ ನೆಟ್ಟ ಆಲದ ಮರವಾದರೆ ಸುತ್ತು ಬಂದು ಸುಸ್ತಾಗಿ ದೂರ ಹೋಗುವುದು ಖಂಡಿತಾ. ಆದ ಕಾರಣ ಇಂತಹ ಹೊಸ ಆವಿಷ್ಕಾರಗಳು , ಬದಲಾವಣೆಗೆಳು, ಚಿಂತನೆಗೆಳು ಜನಸಾಮಾನ್ಯರಿಗೂ ತಲುಪಬೆಕಾಗದ್ದು ಅಗತ್ಯವಾಗಿದೆ. ಏನೇ ಆಗಲಿ ಆ ಕಾರ್ಯಕ್ರಮ ಸಂಘಟನೆ ಚೆನ್ನಾಘಿತ್ತು. ಒಳ್ಳೆಯ ಕಾರ್ಯಕ್ರವೂ ಆಗಿತ್ತು.

ಅದೇ ಕೇರಳದಲ್ಲಿ ಈ ಸುದ್ದಿ ಎಲ್ಲಾ ಮಾದ್ಯಮಗಳಲ್ಲಿ ಕವರ್ ಸ್ಟೋರಿಯಾಗಿ ಬಂದಿತ್ತು ಅಂತ ನಿನ್ನೆ ಮಾತನಾಡುತ್ತಿದ್ದ ಮಿತ್ರರೊಬ್ಬರು ಹೇಳಿದರು.........

1 ಕಾಮೆಂಟ್‌:

ಸಂದೀಪ್ ಕಾಮತ್ ಹೇಳಿದರು...

ಈ ಮೊಬೈಲ್ ,ಸಾಫ್ಟ್ ವೇರು,ತಂತ್ರಜ್ಞಾನ ಯಾವುದೂ ಮನುಷ್ಯನ ಮೂಲಭೂತ ಅವಶ್ಕತೆಗಳಲ್ಲ.

ಒಬ್ಬ ಮನುಷ್ಯನಿಗೆ ಬೇಕಾಗಿರೋದು ಅನ್ನ ..ಆದರೆ ಅನ್ನದಾತನಿಗೆ ಸಿಗಬೇಕಾದ ಮರ್ಯಾದೆ,ಪ್ರಚಾರ ಸಿಗಲ್ಲ ಅನ್ನೋದು ದುರ್ದೈವದ ಸಂಗತಿ.