03 ಮೇ 2009

ಹೃದಯ ತೆರೆದಾಗ. . . .




ಅನೇಕ ದಿನಗಳಿಂದ ನಾಳೆಯ ಬಗ್ಗೆ ಮನಸ್ಸಿನೊಳಗೇ ಸುತ್ತಾಡುತ್ತಿದ್ದ ಹಲವು ಯೋಚನೆಗಳು , ಯೋಜನೆಗಳನ್ನು, ಕೇವಲ 15 ನಿಮಿಷದಲ್ಲಿ ನಿರ್ಭಯವಾಗಿ ,ನಿಸ್ಸಂಕೋಚವಾಗಿ ,ಯಾವುದೇ ಮುಜುಗರವಿಲ್ಲದೇ ಹೇಳಿಕೊಂಡಾಗ ಮನಸೆಷ್ಟು ಹಗುರವಾಗಿ ಬಿಡುತ್ತದೆ...!! ಆ ಬಳಿಕ ಮನಸ್ಸಿಗೆ ಏನೋ ಉಲ್ಲಾಸ .... ಅದರೆ ಅದು ಕೇವಲ 15 ನಿಮಿಷದಲ್ಲಿ ಮುಗಿದು ಹೋಗುವಂತದ್ದಲ್ಲ.. ಅದರ ಪ್ರೋಸೆಸ್ ದೀರ್ಘ ಕಾಲ... ಏಕೆಂದರೆ ಈ ಬದುಕು 3 ದಿನವಾದರೂ ಅದರೊಂದಿಗಿರುವ ಸಮಯ ಹೆಚ್ಚಿದೆಯಲ್ಲಾ.. ಆದರೂ ಮತ್ತೆ ಮನಸ್ಸಿನೊಳಗೆ ಒಮ್ಮೆ ಕಾಡಿತ್ತು.. ಬದುಕಿನ ಪುಟಗಳನ್ನು ತೆರೆದಿಡಬೇಕಿತ್ತಾ..? ಮನಸ್ಸು ಮತ್ತೆ ಹೇಳಿತ್ತು... ಆ ಪುಟಗಳು ಮುಂದಿನ ದಾರಿಗೆ ರಹದಾರಿಯಾಗಬಲ್ಲದು... ಹಾಗಾಗಿ
ಅದು ಅನಿವಾರ್ಯ ಮತ್ತು ಆ ಪುಟಗಳು ಮುಂದಿನ ದಾರಿಯನ್ನು ನಿರ್ಧರಿಸಬಲ್ಲುದು , ನಾಳೆ ಮನಸ್ಸು ಇನ್ನಷ್ಟು ಹಗುರವಾಗಲು ಕಾರಣವಾಗಬಹುದು ಎಂಬ ಯೋಚನೆ ನಂದು. ಹಾಗಾಗಿ ಬದುಕಿನ ಹಿಂದಿನ ಪುಟಗಳು ಎಳೆ ಎಳೆಯಾಗಿ ತೆರೆಯುತ್ತಾ ಸಾಗಿದಂತೆ ಮನಸ್ಸಿಗೆ ಖುಶಿಯಾಯಿತು. ಆ ಪುಟಗಳು ಮಾಸಿರಲಿಲ್ಲ.. ಒಂದೊಂದು ಪುಟವೂ ನನಗೆ ಮತ್ತೆ ಉತ್ಸಾಹವನ್ನು ನೀಡುವಂತಿತ್ತು.. ಮತ್ತೆ ಬಾಲ್ಯವನ್ನು ನೆನಪಿಸಿ, ಈಗಿನ ವರೆಗಿನ ಬದುಕನ್ನು ನೆನಪಿಸಿ ಬಿಟ್ಟಿತು. ಹಾಗಾಗಿ ಮನಸ್ಸು ಕೂಡಾ ಹಗುರವಾಗಿತ್ತು.

ಈ ಹೃದಯವನ್ನು ಮತ್ತು ಅದರೊಳಗಿನ ಪುಟವನ್ನು ತೆರೆಯಲೂ ಕಾರಣವಿತ್ತು..ಕಾರಣವಿಲ್ಲದೆ ಅದೆಲ್ಲವನ್ನೂ ನೆನಪಿಸಿಕೊಂಡಿರಲಿಲ್ಲ. ಬದುಕಿನ ಒಂದು ಹಂತದ ಗಡಿಯನ್ನು ದಾಟಿ ಇನ್ನಷ್ಟು "ಜವಾವ್ದಾರಿ"ಯ ಕಾಲ ಘಟ್ಟಕ್ಕೆ ಬಂದಾಗ ಹಿಂದಿನ ದಾರಿ ಮತ್ತು ಮುಂದಿನ ಗುರಿ ಮತ್ತು ಅದೆರೆಡೆಗಿನ ದಾರಿಯನ್ನು ಯೋಚಿಸಬೇಕು ಎಂಬ ಕಾರಣಕ್ಕೆ ಬದುಕಿನ ಪುಟವನ್ನು ತೆರೆಯಬೇಕಾಯಿತು.

ಆದರೆ ಆ ಪುಟಗಳಲ್ಲಿರುವ ವಿಚಾರವು ಮತ್ತು ಹೃದಯದ ಒಳಗಿನ ಸಂಗತಿಯು "ಸ್ವಗತ"ವಾಗಿಲ್ಲ... ಕೇಳುವ ಹತ್ತು ಮನಸ್ಸಿತ್ತು..... ಹಾಗಾಗಿ "ನನಗಂತೂ ಖುಷಿ"ಯಾಗಿತ್ತು.. ಮನಸ್ಸು ಹಗುರವಾಗಿತ್ತು.... ನನ್ನ ದೈನಂದಿನ ಕೆಲಸಕ್ಕೆ ಇನ್ನಷ್ಟು ಹುರುಪು ಬಂದಿದೆ... ಏಕೆಂದರೆ ತೊಳಲಾಟವಿಲ್ಲ......

3 ಕಾಮೆಂಟ್‌ಗಳು:

Hari ಹೇಳಿದರು...

Dear Mahesh,

I could not able to understand the fauda of your article. I guess there was a immense reason behind this. Anyway I wish you all the best.
Warm regards,
Hari

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

Hari,

behind every word there was a reason.. .. what you guess thats right...
Thamk you

ಹರೀಶ ಮಾಂಬಾಡಿ ಹೇಳಿದರು...

ಬದುಕು 3 ದಿನವಾದರೂ ಅದರೊಂದಿಗಿರುವ ಸಮಯ ಹೆಚ್ಚಿದೆಯಲ್ಲಾ..
ಮನಸ್ಸು ಹಗುರವಾಗಿಸಿ ಮುಂದಿನ ಹೆಜ್ಜೆಯಿಡಿ..
ಆಲ್ ದಿ ಬೆಸ್ಟ್