19 ಏಪ್ರಿಲ್ 2009

ಇದು ಬದುಕಿನ ಶಿಬಿರ. . .



ಯಾವತ್ತೂ ಭಾವನಾತ್ಮಕ ವಿಚಾರ ಬಂದಾಗ ಅದರಲ್ಲೂ ಮನಸ್ಸಿಗೆ ಸಂಬಂಧಿಸಿದ ವಿಚಾರಗಳು ಬಂದಾಗ ನಾನು ಸಂಪೂರ್ಣವಾಗಿ ಸಣ್ಣವನಾಗಿ ಬಿಡುತ್ತೇನೆ. ಆದರೆ ಇವತ್ತು ನಾನು ದಾಖಲಿಸುವ ವಿಚಾರದಲ್ಲಿ ಸಂಪೂರ್ಣವಾಗಿ ಸೋತು ಹೊಗಿದ್ದೆ ಮನಸ್ಸು ಮತ್ತೆ ಮತ್ತೆ ಅದೇ ವಿಚಾರವನ್ನು ನೆನಪಿಸುತ್ತಿದೆ... ನಾನೂ ಕೂಡಾ ಹಾಗಾಗಬೇಕು ಅಂತ ಹೇಳುತ್ತದೆ.. ಆದರೆ ಆ ಕಾಲ ಮಿಂಚಿದೆ ಎನ್ನುವ ಸತ್ಯವೂ ನನಗೆ ತಿಳಿದಿದೆ..

ಮಧ್ಯಾಹ್ನದ ಸಮಯ.... ಸುಳ್ಯದ ಕಡೆಗೆ ಹೋಗಿದ್ದವನು ರಂಗ ನಿರ್ದೇಶಕ ಜೀವನ್ ರಾಂ ನೇತೃತ್ವದಲ್ಲಿ ನಡೆಯುವ ಮಕ್ಕಳ ಶಿಬಿರ ಅಂದರೆ ಸಮ್ಮರ್ ಕ್ಯಾಂಪ್‌ಗೆ ಹೋಗಿದ್ದೆ. ಜೀವನ್ ಹಾಗೂ ಮಿತ್ರ ಗಂಗಾಧರ ಶಿಬಿರದ ಬಗ್ಗೆ ಒಂದು ವಾರದಿಂದ ಹೇಳುತ್ತಿದ್ದರು .. ಒಂದು ದಿನ ಬನ್ನಿ ಸ್ಟೋರಿಗಾಗಿ ಅಲ್ಲ.. ಹೀಗೇ ಸುಮ್ಮನೆ ಬನ್ನಿ ಅಂತ ಹೇಳಿದ್ದರು.. ಇತರ ಕೆಲಸಗಳ ಮಧ್ಯೆ ಶಿಬಿರಕ್ಕೆ ಹೋಗಲು ಆಗಿರಲಿಲ್ಲ. ಹಾಗಾಗಿ ಕೊನೆಯ ದಿನ ಶಿಬಿರಕ್ಕೆ ಹೋದಾಗ ಅಲ್ಲಿ ಮಕ್ಕಳೆಲ್ಲಾ ಹಾಡಿ ಕುಣಿಯುತ್ತಿದ್ದರು.. ಅವರನ್ನು ನೋಡಿದಾಗ ಇದೇನು ಅಂತ ಅನ್ನಿಸಿತ್ತು.. ಆದರೆ ಜೀವನ್‌ರ ರಂಗಮನೆಯೊಳಗೆ ಹೋದ ಬಳಿಕ ಅಲ್ಲಿ ಜೀವನ್‌ರೊಂದಿಗೆ ಮಕ್ಕಳು ಹೆಜ್ಜೆ ಹಾಕಲು ಆರಂಭಿಸಿದಾಗ ನಿಜಕ್ಕೂ ನನ್ನ ಮನಸ್ಸು ಪುಳಕಿತಗೊಂಡಿತು... ಯಾಕೆಂದರೆ ನಾನು ಹಲವು ಶಿಬಿರಗಳಿಗೆ ಹೋಗಿದ್ದೆ ಅಲ್ಲೆಲ್ಲಾ ಕಾಣದ ಸಂಗತಿಗಳು ಕಂಡಿದೆ .. ಮತ್ತೂ ಸ್ವಲ್ಪ ಹೊತ್ತು ಕಳೆದಾಗ ಮಕ್ಕಳ ಕ್ರಿಯಾಶೀಲತೆಯನ್ನು ನೋಡಿ ನನ್ನ ಮನಸ್ಸು ನಿಜಕ್ಕೂ ಸೋತಿತು.. ನನ್ನ ಕಲ್ಪನೆಗೂ ಮೀರಿದ ಸಂತೋಷವನ್ನು ಆ ಶಿಬಿರದಲ್ಲಿ ಕಂಡಿದ್ದೆವು... ಒಟ್ಟು ೧೦೦ ಕ್ಕೂ ಅಧಿಕ ಮಕ್ಕಳ ಕೇಕೆ .. ಹಾಡು.. ವಿವಿಧ ಮುಖವರ್ಣಿಕೆಗಳ ತಯಾರಿ.. ನಾಟಕ .. ಹೀಗೆ ಎಲ್ಲದರಲ್ಲೂ ಅವರು ಎತ್ತಿದ ಕೈ..

ಇಲ್ಲಿ ನಾನು ಗಮನಿಸಿದಂತೆ , ಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಿದೆ.. ಹಾಗಾಗಿ ಅವರೊಳಗಿರುವ ಕಲ್ಪನೆಗೆ , ಚಿಂತನೆಗೆ ರೂಪ ಸಿಕ್ಕಿದೆ.. ಆ ಕಾರಣದಿಂದಾಗಿಯೇ ಮಕ್ಕಳು ಅಷ್ಟೊಂದು ಕ್ರಿಯಾಶೀಲರಾಗಲು ಕಾರಣ.. ಅಸೂಯೆಯಾಗಬೇಕು ಅಂತಹ ಅಧ್ಘುತವಾದ ಪ್ರತಿಭೆ ಆ ಮಕ್ಕಳಲ್ಲಿದೆ.. ಯಾರನ್ನೇ ಅಲ್ಲಿ ಕೇಳಿದರೆ.. ಹೇಗೆ ಬೇಕಾದರೂ ಮಾತನಾಡಬಲ್ಲರು.. ವೇದಿಕೆಯಲ್ಲಿ ಪಟ ಪಟನೆ ಮಾತನಾಡುತ್ತಾರೆ.. ನಿಜಕ್ಕೂ ನಮಗೆ ನಾಚಿಕೆಯಾಗಬೇಕು.. ಇಂದಿಗೂ ವೇದಿಕೆಯಲ್ಲಿ ಮಾತನಾಡುವಾಗ ಹಿಂದೆ ಮುಂದೆ ನೋಡಬೇಕಾಗುತ್ತದೆ.. ಆದರೆ ಆ ಮಕ್ಕಳು..!!
ಜೀವನ್ ಅಲ್ಲೊಂದು ಸ್ಲೋಗನ್ ಹಾಕಿದ್ದರು “ ಯಾವ ಮಗು ಕೂಡಾ ದಡ್ಡನಲ್ಲ.. ಎಲ್ಲಾ ಮಗುವಿನಲ್ಲೂ ಪ್ರತಿಭೆಯಿದೆ..” ಬಹುಶ: ಅಲ್ಲಿ ಸೇರಿದ್ದ ಎಲ್ಲಾ ಮಕ್ಕಳ ಮನಸ್ಸಿಗೆ ಈ ಮಾತು ಚೈತನ್ಯ ತುಂಬಿರಬೇಕು... ಇಲ್ಲಿ ಜೀವನ್ ಉಚಿತವಾಗಿ ಈ ಶಿಬಿರವನ್ನು ಮಾಡುತ್ತಿಲ್ಲ . ಏಕೆಂದರೆ ಶಿಬಿರ ಎಂದಾಕ್ಷಣ ಖರ್ಚು ಇದ್ದೇ ಇದೆ.ಹಾಗಾಗಿ ಹೊರೆಯಾಗದಂತೆ ಶುಲ್ಕವನ್ನೂ ಇರಿಸಿದ್ದಾರೆ.ಇಲ್ಲಿ ಹಣವಲ್ಲ ಆ ಮಕ್ಕಳ ಮನಸ್ಸಿನೊಳಗೊಂದು ಪರಿವರ್ತನೆ, ಆತ್ಮವಿಶ್ವಾಸ ತುಂಬುತ್ತಲ್ಲಾ ಅದಕ್ಕೆ ಏನು ಬೆಲೆ ಕಟ್ಟೋಣ ಹೇಳಿ..? ಹಾಗಾಗಿ ಶುಲ್ಕದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.. ಅದರ ಔಟ್‌ಪುಟ್ ಬಗ್ಗೆ ಮಾತ್ರಾ ಆಲೋಚಿಸಬೇಕಾಗಿದೆ.

ಯಾವತ್ತೂ ನನಗೆ ಮಕ್ಳಳ ಮನಸ್ಸು ಇಷ್ಟ. ಅಂತಹ ಮನಸ್ಸು ನಮಗೇಕೆ ಇಲ್ಲ.. ಎನ್ನುವ ಪ್ರಶ್ನೆ ನನ್ನನ್ನು ಯಾವಾಗಲೂ ಕಾಡುತ್ತಲೇ ಇದೆ. ಆ ಮುಗ್ದ ಮಕ್ಕಳ ಮಾತುಗಳು.. ಅವರ ಪ್ರಶ್ನೆಗಳು.. ಮಾತನಾಡಿದ ತಕ್ಷಣದಿಂದ ನಾವು “ ಮಾಮ” ನಾಗುವುದು.. ಛೇ..!! ಅದನ್ನೆಲ್ಲಾ ಹೇಗೆ ವಿವರಿಸುವುದು ..?. ನಾನು ನಿಜಕ್ಕೂ ತಡಮಾಡಿದ್ದೆ ಯಾಕೆಂದರೆ ಒಂದು ದಿನವಿಡೀ ಆ ಮಕ್ಕಳ ಜೊತೆ ಕಳೆಯಬೇಕಿತ್ತು.. ಯಾಕೆಂದರೆ ಅವರಿಂದ ಕಲಿಯುವುದು ಸಾಕಷ್ಠಿದೆ.. ಆ ಮಕ್ಕಳ ಮುಂದೆ ನಾವೇನೂ ಅಲ್ಲ... ನನ್ನ ಮನಸ್ಸು ಕೂಡಾ ಮಕ್ಕಳ ಮನಸ್ಸಿನಂತೆ ಒಂದು ದಿನ ಇರುತ್ತಿತ್ತು.. ಮುಂದಿನ ಬಾರಿ ಜೀವನ್‌ಗೆ ನೆನಪಿಸಬೇಕು.. ನಾನೂ ಒಬ್ಬ ಶಿಬಿರಾರ್ಥಿ...!!!....

ಕಲಿಯುವ ಹುಡುಗ.. ಮನಸ್ಸು ಬದಲಾಗಲಿ..

ಕಾಮೆಂಟ್‌ಗಳಿಲ್ಲ: