16 ಏಪ್ರಿಲ್ 2009

ಸುಳ್ಯದಿಂದ ಕನ್ಯಾಕುಮಾರಿವರೆಗೆ...



ಅನೇಕ ದಿನಗಳ ಬಳಿಕ ನೆನಪಾಯಿತು.....

ಮೊನ್ನೆ ಇದ್ದಕ್ಕಿದ್ದಂತೆ ನಾನು ಮತ್ತು ನನ್ನ ಮಿತ್ರರ ತಂಡ ಕನ್ಯಾಕುಮಾರಿಗೆ ತೆರಳಿತ್ತು... ಕಾರಣ ಏನಿಲ್ಲಾ ಸುಮ್ಮನೆ ಟ್ರಿಪ್... ನಾನು ಮಿತ್ರರಿಗೆ ಮೊದಲೇ ಹೇಳಿದ್ದೆ ಬಿಡುವಿಲ್ಲ ಅಂತ... ತುರ್ತು ಕೆಲಸದ ಬೇರೆ... ಆದರೂ ಮಿತ್ರರು ರೈಲು ಟಿಕೆಟ್ ಮಾಡಿದ್ದರು... ಹಾಗಾಗಿ ನನಗೆ ಮಿತ್ರರ ನಂಟನ್ನು ಬಿಡಲಾಗಲಿಲ್ಲ... ಸರಿ ಸಂಜೆ 6.30ಕ್ಕೆ ಮಂಗಳೂರಿನಿಂದ ತಿರುವನಂತಪುರಂಗೆ ಹೋಗುವ "ಮಾವೇಲಿ ಎಕ್ಸ್‌ಪ್ರೆಸ್" ರೈಲಿಗೆ ಕಾಸರಗೋಡಿನಲ್ಲಿ ನಾವು 15 ಜನ ಮಿತ್ರರು ಜೊತೆಯಾದೆವು.

ಮುಂಜಾನೆ ತಿರುವನಂತಪುರಂ ಇಳಿದ ನಾವು ಅಲ್ಲೇ ಇದ್ದ ಪೇ ಬಾತ್ ರೂಂನೊಳಗೆ ಹೊಕ್ಕು ಫ್ರಶ್ ಆಗಿ ಗೆಳೆಯನೊಬ್ಬನ ಮೂಲಕ ವಾಹನವೊಂದನ್ನು ಗೊತ್ತು ಮಾಡಿ ಮುಂದಕ್ಕೆ ಹೋದದ್ದು ತಿರುವನಂತಪುರದ ಪ್ರಸಿದ್ದ ದೇವಸ್ಥಾನ ಪದ್ಮಣಾಭನ ಗುಡಿಗೆ.ನಂತರ ಅಲ್ಲೇ ಇರುವ ರಾಜ ರಾಮವರ್ಮನ ಪ್ಯಾಲೇಸ್‌ಗೆ. ಆಗಲೇ ಸೂರ್ಯ ನೆತ್ತಿಗೇರುವ ಹೊತ್ತು ಸನ್ನಿಹಿತವಾಗಿತ್ತು.ನಡೆ ಮುಂದಕ್ಕೆ.. ಎಂದು ಹೊರಟದ್ದು ಭಗವತೀ ದೇವಸ್ಥಾನಕ್ಕೆ... ಇದು ಕೇರಳದ ಮಹಿಳೆಯರ ಶಬರಿಮಲೆ ಎಂಬ ಪ್ರಸಿದ್ದಿಗೆ ಪಾತ್ರವಾಗಿದೆ. ಈ ದೇಗುಲವ ನೋಡಿದಾಗಲೇ ಸೂರ್ಯ ನೆತ್ತಿಗೇರಿದ್ದ... ಇಲ್ಲಿ ಚಿಕ್ಕ ಮಕ್ಕಳು ಅದು ಇದು ಅಂತ ಮಾರಾಟ ಮಾಡಿಕೊಂಡು ಬರುತ್ತಿದ್ದರು ಸಾರ್.. ಇದು ಎಡ್ಕಿ.. ಅದು ಎಡ್ಕಿ.. ಅಂತ ಮಲೆಯಾಳದಲ್ಲಿ ಹೇಳುತ್ತಾ ನಮ್ಮನ್ನು ಹಿಂಬಾಲಿಸುತ್ತಿದ್ದರೆ ನಾವು ಫೋಟೋ ತೆಗೆಯಲು ಮುಂದಾದಾಗ ಎಂದೆ ಸಾರ್ ಅಂತ ಮುಖ ಮುಚ್ಚಿಕೊಳ್ಳುತ್ತಿದ್ದರು ಈ ಬಾಲಕ/ಬಾಲಕಿಯರು...

ಸರಿ ನಮ್ಮ ತಂಡ ಮುಂದೆ ಸಾಗಿತು.... ನಂತರ ನೇರವಾಗಿ ಸಾಗಿದ್ದೇ ಕನ್ಯಾಕುಮಾರಿಯ ಕಡೆಗೆ... ಅಲ್ಲಿ ತಲಪುವಾಗ ಸಂಜೆಯಾಗಿತ್ತು..ಅದಾಗಲೇ ಸೂರ್ಯ ಸಮುದ್ರದಲ್ಲಿ ಲೀನವಾಗುವ ಹೊತ್ತು ಸನ್ನಿಹಿತವಾಗಿತ್ತು...ಅಬ್ಬಾ ಏನು ಆನಂದ.... ಅತ್ತ ಕಡೆ ಅರಬ್ಬೀ ಸಮುದ್ರ... ಇತ್ತ ಬಂಗಾಳಕೊಲ್ಲಿ.. ಅದೋ ಅಲ್ಲಿ ಹಿಂದೂಮಹಾಸಾಗರ... ಈ ಎಲ್ಲದರ ನಡುವೆ ಲೀನವಾಗುತ್ತಿರುವ ನೇಸರ... ಏನು ಆನಂದ.... .. ಅಬ್ಬಾ ದಿನ ಮುಗಿಯಿತೇ ಎನ್ನುವ ಸಂದೇಹ...!!

ಮುಂಜಾನೆ 5 ಗಂಟೆಯ ಹೊತ್ತು ಪಕ್ಕದ ಕೊಣೆಯಿಂದ ಗೆಳೆಯರು ಬಂದು ಬಾಗಿಲು ಬಡಿದು ಎಬ್ಬಸಿದರು ಬನ್ರೀ ಸನ್‌ರೈಸ್ ನೋಡೋಣ.. ಆದ್ರೆ ನಮ್ಮ ಕೋಣೆಯಲ್ಲಿದ್ದವರೆಲ್ಲಾ "ಸೂರ್ಯ ವಂಶ"ದವರಾದ್ದರಿಂದ ಆಗ ಸೂರ್ಯ ಉದಯವಾಗಿಲ್ಲದ ಕಾರಣ ಮಿತ್ರರಿಗೆ ಅರಿವಾಯಿತು...ಅವರು ಮುಂದೆ ಹೋದರು... ಸಂಜೆ ಸಮುದ್ರದಲ್ಲಿ ಲೀನವಾಗಿದ್ದ ನೇಸರನ ಉದಯದ ಸವಿಯನ್ನುಂಡರು... ಅದಾದ ಬಳಿಕ ನಾವು ಹೊರಟದ್ದು ದೇಶದ ನಿಜವಾದ ನಾಯಕ ಯುವಕರ ಸ್ಫೂರ್ತಿ "ವಿವೇಕಾನಂದ"ರ ಸ್ಮಾರಕಕ್ಕೆ. ಅಲ್ಲಿಗೆ ತೆರಳಲು ಬೋಟ್ ಮೂಲಕ ಪಯಣಿಸಬೇಕು.. ಈ ಅನುಭವ ಅವಿಸ್ಮರಣೀಯ.. ಅಬ್ಬಾ ..!! ಸ್ಮಾರಕದ ಬಳಿ ಬೋಟ್‌ನಿಂದ ಇಳಿದಾಗಲೇ ಒಂದು ರೋಮಾಂಚನ.. ಅದರೊಳಗೆ ನಡೆಯುತ್ತಾ ಸಾಗುವಾಗ ಏನೋ ಒಂದು ಅವ್ಯಕ್ತವಾದ ಸಂತಸ... ಹಾಗೇ ನಡೆದಾಡುತ್ತಾ ಅಲ್ಲಿರುವ ಧ್ಯಾನ ಮಂದಿರದೊಳಗೆ ಕುಳಿತು ಒಂದು ಕ್ಷಣ ಧ್ಯಾನಿಸಿದರೆ ಅಲ್ಲಿಂದ ಹೊರಡಲು ಮನಸ್ಸೇ ಬರುವುದಿಲ್ಲ.... ಆದರೆ ಸಮಯದ ಕೊರತೆಯಿದೆ... ಅಲ್ಲಿಂದ ನೆನಪಿನ ಬುತ್ತಿಯನ್ನು ಕಟ್ಟಿಕೊಂಡು ಮುಂದೆ ಬಂದದ್ದು ಸುಚೀಂದ್ರ ದೇವಸ್ಥಾನಕ್ಕೆ ಅದು ತಿರುವನಂತಪುರಂನ ಸನಿಹದಲ್ಲೇ ಇದೆ. ಈ ನಡುವೆ ದಣಿವಾರಿಸಲು ಕುಡಿಯುವ ಎಳನೀರು.. ನೀರು... ಕಾಫಿ, ... ಇತ್ಯಾದಿಗಳಿಗೆ ಲೆಕ್ಕವೇ ಇಲ್ಲ.. ಅಂತೂ ನಾವು ತಿರುವಂತಪುರಂಗೆ ತಲಪಿದೆವು.. ಅಲ್ಲಿಂದ ಮುಂದೆ ಹೋದದ್ದು ಕೋವಳಂ ಬೀಚ್‌ಗೆ .. ಬೀಚ್ ಸನಿಹಕ್ಕೆ ಹೋದಾಗಲೇ ಅಲ್ಲಿ ವಿದೇಶಿಯರೂ ಸುತ್ತಾಡುವುದು ಕಂಡಿತು.. ಇನ್ನು ಮುಂದೆ ವಿವರಿಸುವ ಅಗತ್ಯವಿಲ್ಲ ಎಂದು ಅಂದುಕೊಂಡಿದ್ದೇನೆ.. ನಮ್ಮಂತ ಪಡ್ಡೇ ಹುಡುಗರಿಗೆ ಮಜಾವೇ ಮಜ..!!..ಹಾಗೆ ಅಲ್ಲೆಲ್ಲಾ ಸುತ್ತಾಡಿದ ನಾವು ಊಟ ಮುಗಿಸಿ ಮತ್ತೆ "ಮಾವೇಲಿ ರೈಲು " ಹತ್ತಿದೆವು.. ಹೊರಡುವ ವೇಳೆ ತಿರುವನಂತಪುರಂನಲ್ಲಿ ಮಳೆರಾಯನ ಧೋ.. ಎಂದು ಸುರಿಯುತ್ತಿದ್ದ .. ದೂರದಲ್ಲಿದ್ದ ಸಿಡಿಲು ಹತ್ತಿರದಲ್ಲೇ ಕಾಣುತ್ತಿತ್ತು..... ರೈಲು.. ಸದ್ದು ಕೇಳುತ್ತಲಿತ್ತು.. ಒಂದು ಕ್ಷಣ ಗೆಳೆಯರೆಲ್ಲಾ ಒಂದಾಗಿ ಕುಳಿತು ನೆನಪುಗಳನ್ನು ಮರುಕಳಿಸಿಕೊಂಡೆವು.. ಹಾಗೇ ರೈಲು ಮುಂದೆ ಸಾಗುತ್ತಿತ್ತು.. ಒಬ್ಬೊಬ್ಬರೇ ಕಂಪಾರ್ಟ್ ಮೆಂಟ್ ಏರಿದರು.. ಮರುದಿನ ಬೆಳಗ್ಗೆ ಕಾಸರಗೋಡಿನಲಿ ಮತ್ತೆ ಬೇರೆ ಬೇರೆಯಾದ ಗೆಳೆಯರಿಗೆಲ್ಲಾ ಇಂದು ಅದೆಲ್ಲವೂ ನೆನಪು.. ಸವಿ ನೆನಪು.. ಮತ್ತೆ ಮುಂದಿನ ವರ್ಷ ಒಂದಾಗುವ ಹಂಬಲ...




ಇದೇ ಅಲ್ಲವೇ , ಗೆಳೆತನವೆಂಬ ಹೊಳೆಯಲ್ಲಿ ಪಯಣ...ಅದರೊಳಗಿದ್ದರೆ ಈ ಹನಿಯೂ ಕಡಲು ಸೇರಬಲ್ಲುದು ಇಲ್ಲದಿದ್ದಲ್ಲಿ ಆ ಹನಿ ಭುವಿಯೊಳಗೆ ಲೀನವಾಗಬಲ್ಲುದಲ್ಲವೇ...

ಇವಿಷ್ಟು 2 ದಿನದ ವಿಹಾರದ ನೆನಪುಗಳಾದರೆ ಇನ್ನೊಂದು ವಿಚಾರದ ಬಗ್ಗೆ ನನಗೆ ಆಗಾಗ ಕಾಡುತ್ತಲೇ ಇದೆ.. ಅದನ್ನು ನಾನು ಇಲ್ಲಿ ದಾಖಲಿಸಿಡಲೇ ಬೇಕು.. ಯಾಕೆಂದರೆ ನನ್ನನ್ನು ಹಲವು ಮಂದಿ ಆ ವಿಚಾರದಲ್ಲಿ ಪ್ರಶ್ನಿಸಿದ್ದರು.. ಅದಕ್ಕೆ ಕಾರಣ ಹೇಳಿದ್ದೆ..

ಯಾವತ್ತೂ ಒಂದು ವಿಷಯದ ಬಗ್ಗೆ .. "ಒಂದು ವಿಚಾರ"ದ ಬಗ್ಗೆ.... ಒಬ್ಬ ವ್ಯಕ್ತಿಯ ಬಗ್ಗೆ ನನಗೆ.. ನನಗೆ ಪೂರ್ವಾಗ್ರಹವಿಲ್ಲ.. ಹಾಗೆ ಇಟ್ಟುಕೊಂಡೇ ಬದುಕುವುದೂ ಇಲ್ಲ. ಇದನ್ನು ಹೇಳಲು....ಇಲ್ಲಿ ದಾಖಲಿಸಲು ಕಾರಣವಿದೆ.. ಇತ್ತೀಚೆಗೆ ನಾನು ಒಂದು ವಿಚಾರದ ಬಗ್ಗೆ ಮಾತನಾಡಿದ್ದೆ ಅದು ಸತ್ಯದ ಸಂಗತಿ.. ಮುಜುಗರದ ಸಂಗತಿ.. ಯಾಕೆಂದರೆ ಇಡೀ ಸಮಾಜ ಆ ವಿಚಾರವನ್ನು ನೋಡುತ್ತಿತ್ತು .. ಕೇಳುತ್ತಿತ್ತು.. ಹಾಗಾಗಿ ಆ ವಿಚಾರದ ಬಗ್ಗೆ ನನ್ನ ಮಿತ್ರ ಮಾತೊಂದನ್ನು ಹೇಳಿದ್ದ .. ನಾನು ಅದಕ್ಕೆ ಸಾಥ್ ನೀಡಿದ್ದೆ.... ಆ ಬಗ್ಗೆ ಭಾರೀ ಚರ್ಚೆ ನಡೆದಿತ್ತು.. ಆದರೆ ಆ ಸತ್ಯದ ವಿಚಾರವು ಅನೇಕರಿಗೆ ಕಹಿಯಾಗಿತ್ತು.. ಆದರೆ ನಾನು ಆ ವಿಚಾರದಲ್ಲಿ ಸ್ಫಷ್ಠವಾಗಿದ್ದೇನೆ.. ಅದು "ಆ " ವಿಚಾರಕ್ಕೆ ಮಾತ್ರವಲ್ಲ ಸತ್ಯದ ಎಲ್ಲಾ ವಿಚಾರದಲ್ಲೂ ನನ್ನ ನಿರ್ಧಾರ ಯಾವಾಗಲೂ ಅಚಲ.. ಯಾಕೆಂದರೆ ನಾನು ಸತ್ಯಕ್ಕೆ ಹತ್ತಿರವಾಗೇ ಇರಲು ಹೆಚ್ಚು ಇಚ್ಚಿಸುತ್ತೇನೆ....

1 ಕಾಮೆಂಟ್‌:

Unknown ಹೇಳಿದರು...

hai mahesh i just seen your photo with ur friends.durga kumar nayarkere,gangadhara kallapalli are very nice guys.
nice trip.so you had enjoyed very much.keep it up.
vinayak gangolli
tv9 correspondent
bangalore