09 ಮೇ 2016

ನಿಮ್ಮ ಊರು ಹಳ್ಳಿಯಲ್ಲಿದೆ ಎನ್ನುವುದೂ ತಾಂತ್ರಿಕತೆಯ ಮೂಲಕ. . .!



ನಿಮ್ಮ  ಊರು ಹಳ್ಳಿಯಲ್ಲಿದೆ.  . ನಿಮಗೆ ಸೌಲಭ್ಯ ನೀಡಲು ಸಾಧ್ಯವಿಲ್ಲ.  .!. ಹೀಗೆಂದು  ಎಸಿ ಕಚೇರಿಯಲ್ಲಿ ತಣ್ಣಗೆ ಕುಳಿತು ಹೇಳಿರುವುದು. . . ಹೇಳುವುದು . .  ಹೇಳುತ್ತಲೇ ಇರುವುದು ಅಧಿಕಾರಿಗಳು . ..!.
ಇದೆಲ್ಲಾ ತಾಂತ್ರಿಕತೆ ಮೂಲಕ ನಗರದಲ್ಲಿ  ಕೂತು ಸಾಧ್ಯವಿದೆ.ಆದರೆ ಹಳ್ಳಿಯ ಮಂದಿ ಇದನ್ನೆಲ್ಲಾ ಅಚ್ಚರಿ ಎಂಬಂತೆ ಕಣ್ ಕಣ್ ಬಿಟ್ಟು ನೋಡುತ್ತಲೇ ಇಂದಿಗೂ ಕೂರಬೇಕಿದೆ ಎಂದರೆ, ಇದು  ಬದಲಾಗುತ್ತಿರುವ ಕಾಲ. . !

ನಮ್ಮ ಊರಿಗೆ ಮೊಬೈಲ್ ಟವರ್ ರಚನೆಯಾಗಬೇಕು ಎಂದು ಮನವಿ-ಅಹವಾಲು ಶುರುವಾಯಿತು.ಬರೋಬ್ಬರಿ  6 ವರ್ಷಗಳ ಕಾಲ ಸತತ ಪ್ರಯತ್ನ ನಡೆಯಿತು.ಕೊನೆಗೊಂದು ದಿನ ಇಲಾಖೆಯಿಂದ ಲೆಟರ್ ಬಂತು, "ನಿಮ್ಮ ಊರು ತೀರಾ ಹಳ್ಳಿ. . ನಿಮಗೆ ಮೊಬೈಲ್ ಟವರ್ ನೀಡಲು ಆಗುವುದಿಲ್ಲ. ಇನ್ನೊಂದು ಊರಿನಲ್ಲಿ  ಹೊಸ ಟವರ್ ಆಗುತ್ತಿದೆ, ಅಲ್ಲಿಂದ ನಿಮಗೆ ಸಿಗ್ನಲ್ ಸಿಗುತ್ತದೆ"ಎಂದರು.
ಜನರು ಸುಮ್ಮನೆ ಇರಲಿಲ್ಲ, ಮತ್ತೆ ಜೋರಾದರು. ಇಲಾಖೆ ಮುಂದೆ ಹೋದರು ,ಇಲಾಖೆಯ ಪ್ರಮುಖರನ್ನು  ತಣ್ಣನೆಯ ಕೊಠಡಿಯಲ್ಲಿ  ಕುಂತು ಮಾತನಾಡಿದರು.
ಇಲಾಖೆಯ ಆ ಹಿರಿಯ ಅಧಿಕಾರಿ ಮುಂದೆ ,ತಮ್ಮೂರಿನ ಸಮಸ್ಯೆ ಎಳೆಎಳೆಯಾಗಿ ಹೇಳುತ್ತಾರೆ.ರಾತ್ರಿ ವೇಳೆ ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾದರೆ 108 ಕ್ಕೂ ಕರೆ ಮಾಡಲು ವ್ಯವಸ್ಥೆ ಇಲ್ಲ ಎನ್ನುತ್ತಾರೆ. .!,
ಆಗ, ಆ ಅಧಿಕಾರಿ ಹೇಳುತ್ತಾರೆ, ನಿಮ್ಮೂರಿನಲ್ಲಿ  ಟವರ್ ಹಾಕಿದರೆ "ನಮಗೆ ಲಾಭವಾಗಲ್ಲ". . !. ಒಂದು ಟವರ್‍ಗೆ 50 ರಿಂದ 60 ಲಕ್ಷ ರೂಪಾಯಿ ಬೇಕು, ಇಷ್ಟು ಖರ್ಚು ಮಾಡಿದರೆ ನಮಗೆ ಆದಾಯ ಹೇಗೆ? ಎಂದೂ ಕೇಳುತ್ತಾರೆ.
ನಮ್ಮೂರಿನ ಜನ ಇದೆಲ್ಲಾ ಯೋಚನೆ ಮಾಡೋಲ್ಲ, ಲಾಭವೋ ನಷ್ಟವೋ ಎಂದೂ ಯೋಚಿಸದರೆ ಉಪಕಾರ ಮಾಡೋರು."ನಮಗೆ ಲಾಭ ಆಗುತ್ತೆ" ಎಂದು ಯೋಚಿದೋರೇ ಅಲ್ಲ.
ಆದರೆ ಈಗ ಕುಳಿತಿರೋದು  ನಗರದ ತಣ್ಣನೆಯ ಕೊಠಡಿಯಲ್ಲಿ. .!. ನಿಜ, "ನಮಗೆ ಲಾಭ"ದ ಬಗ್ಗೆ ಇದುವರೆಗೆ ಯೋಚಿಸಿಲ್ಲ, ಈಗ ಅದೊಂದು ಯೋಚನೆಯೂ ಬಂತು. .!., ಆಗ ಹೇಳಿದ್ದು, ಈಗ ಮೊಬೈಲ್ ಅನ್ನೋದು  ಅತೀ ಅಗತ್ಯ ಸೇವೆಯಾಗಿದೆ. ಒಂದೇ ಟವರ್‍ನಿಂದ ಲಾಭ-ನಷ್ಟದ ಪ್ರಶ್ನೆ ಬೇಡ, ಇಡೀ ತಾಲೂಕಿನ ಪ್ರಶ್ನೆ ಬರಲಿ ಎಂದೂ ಒತ್ತಾಯಿಸಿದರು. ಮತ್ತೆ ಮೌನವಾದ ಅಧಿಕಾರಿ. . ಮೊಬೈಲ್ ಮೇಲೆ ತೆಗೆದರು,
ಅಂತೂ ಕೊನೆಗೆ ಅದೆಲ್ಲಾ ಮಾತುಕತೆಯಾಗಿ,ನೇರವಾಗಿ ರಾಜಧಾನಿಯಾಗಿ ಇನ್ನಷ್ಟು ತಣ್ಣನೆಯ ಕೊಠಡಿಯಲ್ಲಿ  ಕುಳಿತಿದ್ದ ಮತ್ತೊಬ್ಬರಿಗೆ ಕುಂತಲ್ಲಿಂದಲೇ ಕರೆ ಮಾಡಿದರು.ಅಲ್ಲೊಂದು ಮೊಬೈಲ್ ಅವರ್ ಆಗಬೇಕು ಎಂದರು..
ಬಳಿಕ ಇರೋದೇ ತಾಂತ್ರಿಕತೆಯ ಮೂಲಕ  ದಾರಿತಪ್ಪಿಸಿ-ದಾರಿ ಹುಡಕುವ ಪ್ರಯತ್ನ. .!.
ರಾಜಧಾನಿಯಲ್ಲಿದ್ದವರು  ನಮ್ಮೊಂದಿಗೆ ದೂರವಾಣಿಯಲ್ಲಿ  ಮಾತನಾಡುತ್ತಾ, ಸ್ಥಳ ಕೇಳುತ್ತಾರೆ,  ಅದಕ್ಕೆ ವಿವರಣೆ ಕೊಡುತ್ತಿದ್ದಂತೆ, ಅದು ಇಂತಾ ಕಡೆ, ಅಲ್ಲಿ  ಇಂತಹ ಸ್ಥಳ ಇದೆ, ಅಂಚೆ ಕಚೇರಿ ಇದೆ. .  ..  ..  ಅಲ್ಲಿಂದ ಹೇಳುತ್ತಿದ್ದರು. .  ಇಲ್ಲೆಲ್ಲಾ ಅಚ್ಚರಿ. . .!. ಇದು ಹೇಗಪ್ಪಾ ಸಾಧ್ಯ. . !. ಕೊನೆಗೆ ರಾಜಧಾನಿಯ ಅಧಿಕಾರಿ ತಣ್ಣಗೆ ಅಂದು ಬಿಟ್ಟರು " ನಿಮ್ಮಲ್ಲಿ  ಮನೆಯೇ ಇಲ್ಲಾರಿ . .ಅಲ್ಲೆಲ್ಲಾ ಕಾಡೇ ಇದೆ. . ಮತ್ತೆ ಹೇಗೆ ಟವರ್.  .".
ತಕ್ಷಣವೇ ನಮ್ಮೂರಿನ ಜನ ಹೇಳಿದ್ದು, "ನೀವು ಗೂಗಲ್ ನೋಡಿ ಏನನ್ನೂ ಹೇಳಬೇಡಿ ಇಲ್ಲಿಗೆ ಬನ್ನಿ . .ಸಾಕಷ್ಟು ಮನೆಗಳು ಇವೆ, ಗೂಗಲ್ ನೋಡಿ ದಾರಿ ತಪ್ಪಬೇಡಿ, ದಾರಿ ತಪ್ಪಿಸಬೇಡಿ, ಅಲ್ಲಿಗೇ ಬನ್ನಿ ದಾರಿ ಹುಡುಕಿ.  ."

 ಇಂದು ಆಗಿರುವುದು. . . ಆಗುತ್ತಿರುವುದು. . ಇದೇ. .!. ಎಲ್ಲವನ್ನೂ ಆ ತಣ್ಣನೆಯ ಕೊಠಡಿಯಲ್ಲಿ  ಕುಳಿತು ಮನೆಯೇ ಇಲ್ಲ, ವ್ಯವಸ್ಥೆಯೇ ಸಾಧ್ಯವಿಲ್ಲ ಎಂದು  ವರದಿ ನೀಡಿ ಬಿಟ್ಟರೆ ಓಕೆ ಎಂದೇ ಯೋಚಿಸಿರುವ ಇಂದಿನ ಕಾಲದಲ್ಲಿ  ಹಳ್ಳಿಗಳು ಬದಲಾಗೋದು ಹೇಗೆ ಸಾಧ್ಯ ?. ಇದುವರೆಗೆ ಎಲ್ಲಾ ಕಡೆಯೂ ಆಗಿರೋದು ಇದೆ, ಅದ್ಯಾವುದೋ ಸ್ಯಾಟಲೈಟ್ ಮೂಲಕ ಮೇಲಿನಿಂದಲೇ ನೋಡಿ ಮತ್ಯಾವುದೋ ಯೋಜನೆ ಹಾಕಿ ಕೊನೆಗೆ ಜನರನ್ನೇ ಓಡಿಸುವ ಕೆಲಸ ನಡೆದಿದೆ.
ತಾಂತ್ರಿಕತೆ ಎನ್ನುವುದು  ನಗರದಲ್ಲಿ  ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.ಹಳ್ಳಿಗಳಿಗೆ ಅದು  ತಲಪುವ ವೇಳೆ ಎಲ್ಲವೂ ಮುಗಿದಿರುತ್ತದೆ.ಮತ್ತೂ ಕೆಲವು ತಲಪುವುದೇ ಇಲ್ಲ. .!. ಎಂತಹ ಬದಲಾವಣೆ ಈ ದೇಶದಲ್ಲಿ.  .!

ಉದಾಹರಣೆಗೆ ಇಂದಿನ ಮೊಬೈಲ್ ವ್ಯವಸ್ಥೆಯನ್ನೇ ಗಮನಿಸಿ ನೋಡಿ, ಇಂದಿಗೂ ಅನೇಕ ಹಳ್ಳಿಗಳಿಗೆ, ಲಕ್ಷಾಂತರ ಜನರಿಗೆ ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲ.ಆದರೆ ನಗರದ ಅದೆಷ್ಟೋ ಕಡೆಗೆ 3ಜಿ ಸೇವೆ ಬಂದು ಈಗ 4ಜಿ ಸೇವೆಯೂ ಬಂದಿದೆ.ಆದರೆ ಅದೆಷ್ಟೋ ಹಳ್ಳಿಗಳಲ್ಲಿ  ಇಂದಿಗೂ 2ಜಿ ಸೇವೆಯೇ ಬಂದಿಲ್ಲ. . !. ನಗರಕ್ಕೆ ಹಾಗೆ ಬಂದಿರುವ ಆಧುನಿಕ ಸೇವೆಗಳಿಂದ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಈಗ ಹೇಳುವುದು  "ಅಲ್ಲಿ  ಮನೆಗಳೇ ಇಲ್ಲ. .  ಕಾಡುಗಳೇ ಎಲ್ಲಾ. . !.". ಇಂತಹ ವಿಪರ್ಯಾಸಕ್ಕೆ ಏನೆನ್ನೋಣ.  . !.

ಕಾಮೆಂಟ್‌ಗಳಿಲ್ಲ: