24 ಏಪ್ರಿಲ್ 2011

ಕೊನೆಗೂ ಉಳಿಯುವುದು ಇದೇ. .

ಸಾಯಿಬಾಬಾ ತೀರಿಕೊಂಡರು.

ಎಷ್ಟೋ ಜೀವಗಳಿಗೆ ಸ್ಫೂರ್ತಿಯಾಗಿದ್ದ ಸಾಯಿಬಾಬಾ ತೀರಿಕೊಂಡರು ಎಂದಾಕ್ಷಣ ಅಲ್ಲೆಲ್ಲಾ ಮತ್ತೆ ನಿರಾಸೆಗಳು ತುಂಬಿಕೊಂಡವು. ಆದರೆ ಮತ್ತೆ ಅದೇ ಜೀವಗಳು ಯೋಚಿಸುತ್ತವೆ ಇನ್ನೊಂದು ಅವತಾರದಲ್ಲಿ ಈ ಮಹಾಪುರುಷ ಬಂದೇ ಬರುತ್ತಾನೆ ಅಂತ ಸಮಾಧಾನ ಪಟ್ಟುಕೊಳ್ಳುತ್ತವೆ. ಏನಿದ್ದರೂ ಈಗ ಸಾಯಿಬಾಬಾ ಇಲ್ಲ , ಮುಂದಿನದ್ದು ಗೊತ್ತಿಲ್ಲ.

ಸತ್ಯಸಾಯಿ ಬಾಬಾರನ್ನು ನಾನಂತೂ ಕಾಣುವುದು ಒಬ್ಬ ಸಮಾಜ ಸೇವಕನಾಗಿ , ಸುಧಾರಕನಾಗಿ. ಒಂದು ಸರಕಾರಕ್ಕೆ ಮಾಡಲಾಗದ ಕೆಲಸವನ್ನು , ಒಂದು ಆಡಳಿತಕ್ಕೆ ಕಲ್ಪಿಸಲೂ ಸಾಧ್ಯವಾಗದ ಕೆಲಸವನ್ನು ಅವರು ಮಾಡಿ ತೋರಿಸಿದ್ದಾರೆ. ಹಾಗಾಗಿ ಅವರು ದೇವತಾ ಮನುಷ್ಯ. ಆರಾಧನೆಗೆ ಯೋಗ್ಯರೇ ಆಗಿದ್ದರು. ಹಾಗಾಗಿ ಅವರ ಬಗ್ಗೆ ಇದುವರೆಗೆ ಯಾವುದೇ ಟೀಕೆಗಳು ಬಂದರೂ ಆ ಬಗ್ಗೆ ಯೋಚಿಸುವುದಕ್ಕೂ ಹೋಗದೇ ಬಾಬಾ ಕೆಲಸಗಳನ್ನು ಒಪಿಕೊಂಡು ಬಿಡುವುದು ಹೆಚ್ಚು ಸೂಕ್ತ ಅಂತ ನಾನು ನಂಬಿದ್ದೆ. ಹೀಗೆ ಟೀಕೆಗಳು ಬರುತ್ತಿದ್ದಾಗ ಬಾಬಾ ಸಹೇಳುತ್ತಿದ್ದ ಮಾತುಗಳನ್ನು ಎಲ್ಲೋ ಓದಿದ್ದು ನೆನಪಿದೆ , “ಸಿಹಿ ಇದ್ದಲ್ಲಿಗೇ ಇರುವೆಗಳು ಬರುವುದಲ್ಲವೇ , ಸಿಹಿ ಇಲ್ಲದಲ್ಲಿ ಇರುವೆಗಳು ಇರೋದಿಲ್ಲ ಅಲ್ವಾ” ಅಂತ ಒಂದೇ ಮಾತಿನಲ್ಲಿ ಹೇಳಿದ್ದು ಅಲ್ಲಿ ದಾಖಲಾಗಿತ್ತು. ಅಂದರೆ ಟೀಕೆಗಳಿಗೆ ಉತ್ತರ ಇಲ್ಲ. ಕಾಯಕವೇ ಅದಕ್ಕೆ ಉತ್ತರ. ನಿಜವಾಗಿಯೂ ಈ ಮಾತು ನಮಗೂ ಅನ್ವಯ ಅಲ್ಲವೇ. ಟೀಕೆಗಳಿಗೆ ಉತ್ತರ ನೀಡುತ್ತಾ ಹೋಗುತ್ತಿದ್ದಂತೆಯೇ ಅ ಬೆಳೆಯುತ್ತಾ ಸಾಗುತ್ತೆ. ಹಾಂಗತ ಅದುವೇ ದೌರ್ಬಲ್ಯ ಅಂತ ಟೀಕಾಕಾರರು ಭಾವಿಸಿದರೆ ಅದಕ್ಕಿಂತ ದೊಡ್ಡ ಮೂರ್ಖತನ ಇನ್ನೊಂದಿಲ್ಲ.

ಅದಲ್ಲ , ಬಾಬಾ ಮಾಡಿದ ಕ್ರಾಂತಿ ನಿಜಕ್ಕೂ ಅದ್ಭುತ. ಉಚಿತ ವೈದ್ಯಕೀಯ ಸೇವೆ , ಶಿಕ್ಷಣ , ಡಿಯುವ ನೀರು , ಶಿಸ್ತು , ಸಾಮರಸ್ಯ , ಮಾನಸಿಕ ಧೈರ್ಯ ,. . ಹೀಗೇ ಒಂದೇ ಎರಡೇ. ಸಾಲು ಸಾಲು ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಇದೆಲ್ಲಾ ಸಾಮಾನ್ಯ ಒಬ್ಬ ಸ್ವಾಮಿಗೆ ಮಾಡಲು ಆಗದ ಕೆಲಸವೇ ಸರಿ.

ಇದಕ್ಕೆಲ್ಲಾ ದಾನಿಗಳೂ ಇದ್ದಾರೆ ಅನ್ನಿ. ದಾನ ಮಾಡುವವನೂ ಅಲ್ಲಿ ಭ್ರಷ್ಠಾಚಾರ , ಅವ್ಯಹಾರ ಇಲ್ಲ ಎಂದೇ ಅಲ್ಲವೇ ದಾನ ಮಾಡುವುದು. ಒಂದು ವೇಳೆ ಎಲ್ಲೆಲ್ಲಾ ಅವ್ಯಹಾರ ತಾಂಡವವಾಡುತ್ತಿದ್ದರೆ ಅಷ್ಟು ಪ್ರಮಾಣದ ದಾನ ಹರಿದುಬರಲು ಸಾಧ್ಯವಿತ್ತೇ?. ಅದೂ ಅಲ್ಲ ಸೇವಾಕರ್ತರಾಗಿ ವಿಧೇಶಗಳಿಂದಲೂ ವೈದ್ಯರು ಆಗಮಿಸುತ್ತಿದ್ದರೇ?. ಖಂಡಿತಾ ಇಲ್ಲ. ಹೀಗಾಗಿ ಬಾಬಾ ನಿಜಕೂ ಒಬ್ಬ ಶ್ರೇಷ್ಠ ಪುರುಷ.
ಬಾಬಾ ಎಂದೂ ನನ್ನನ್ನು ಪೂಜೆ ಮಾಡಿ ಎಂತ ಎಲ್ಲೂ ಹೇಳಿಲ್ಲ , ಭಕ್ತರೇ ಪೂಜಿಸುವಾಗ ಅವರು ಹೇಳಿದ್ದು , ನಿಮ್ಮ ತಂದೆ ತಾಯಿಯನ್ನು ಪೂಜಿಸಿ , ಕುಲದೇವರನ್ನು ಪೂಜಿಸಿ ಎಂದರೇ ವಿನಹ: ನಾನೇ ದೇವರು ಎಂದು ಹೇಳಿಲ್ಲ. ಆದರೂ ಭಜನೆ ಇತ್ಯಾದಿಗಳ ಮೂಲಕ ಮಾನಸಿಕವಾದ ನೆಮ್ಮದಿಗೆ ನಾಂದಿ ಹಾಡಿದರು. ಆನ ಬಂದು ಸೇರಿದರು. ಏನೋ ಶಕ್ತಿ ಕಂಡುಕೊಂಡರು. ಲಕ್ಷ ಲಕ್ಷ ಜನ ಅವರತ್ತ ಹೋದರು.
ಇಂದು ಯಾವುದೇ ಒಬ್ಬ ಸ್ವಾಮೀಜಿಯಾಗಲಿ , ಅಥವಾ ಇನ್ಯಾರೇ ಆಗಲಿ ಮಾಡದ ಕೆಲಸವನ್ನು ಬಾಬಾ ಮಾಡಿದ್ದಾರೆ. ಅಷ್ಟೋ ಜನರಿಗೆ ಆರೋಗ್ಯ , ಶಿಕ್ಷಣ ಒದಗಿಸಿದ್ದಾರೆ. ಹೀಗಾಗಿ ಅವರು ಗ್ರೇಟ್. ಅವರ ನಿಧನಕ್ಕೆ ಹನಿ ಹನಿ ಕಂಬನಿ.

ಹುಟ್ಟು ಸಾವಿನ ಮಧ್ಯೆ ಇರುವ ಬದುಕಿನಲ್ಲಿ ನಾವು ಮಾಡಿದ ಸಾಧನೆಗಳು , ಸಮಾಜಕ್ಕೆ ನೀಡಿದ ಕೊಡುಗೆಗಳು ಉಳಿದುಕೊಳ್ಳುವುದೇ ವಿನಹ, ಈ ದೇಹವಲ್ಲ ಅಲ್ವೇ. ಹಾಗೇ ಇಂದು ಬಾಬಾ ನಿಧನರಾದ ತಕ್ಷಣ ಅವರ ಸಮಾಜ ಕಾರ್ಯಗಳು ಕಾಣಿಸಿಕೊಳ್ಳುತ್ತವೆ.ಆ ಮೂಲಕ ಅವರು ಶಾಶ್ವತರಾಗುತ್ತಾರೆ.

ನಾವೂ ಹಾಗೆಯೇ ಟೀಕೆಗಳಿಗೆ ಕಡಿವಾಣ ಹಾಕಿ ಅವರ ಹಾದಿಯಲ್ಲೇ ಮುಂದುವರಿದರೆ ಒಳ್ಳೆಯದಲ್ವೇ. ಸಮಾಜಕ್ಕೆ ಕಿರು ಕಾಣಿಕೆ ನೀಡುವತ್ತ ಚಿಂತಿಸುವುದು ಒಳ್ಳೆಯದಲ್ವೇ.

ಕಾಮೆಂಟ್‌ಗಳಿಲ್ಲ: