ಸಂಬಂಧಗಳು,
ಅದೊಂದು ಅದ್ಭುತ ಸೃಷ್ಠಿ. ಒಮ್ಮೆ ಅದರ ಜನನವಾದರೆ ಮುಗಿಯಿತು. ಅದಕ್ಕೆ ಮತ್ತೆ ಸಾವು ಎಂಬುದಿಲ್ಲ. ಆ ಸಂಬಂದಗಳು ಹಾಗೇ ಉಳಿದಕೊಂಡು ಬಿಡುತ್ತದೆ. ಅದಕ್ಕೆ ಎಷ್ಟೇ ಸರ್ಜರಿಗಳು ಮಾಡಿದರೂ ಮೊದಲಿನ ಸಂಬಂಧಗಳಿಂದ ಹೊಕ್ಕುಳ ಬಳ್ಳಿ ಬಿಡಿಸಿಕೊಳ್ಳುವುದೇ ಇಲ್ಲ. ಎಂತಹ ಒಂದು ಒಳ್ಳೆಯ ಲೋಕ ಇದು ಅಂತ ಅನಿಸಿಬಿಡುತ್ತದೆ ನನಗೆ.
ಒಂದು ಮಗು ಹುಟ್ಟಿಕೊಂಡಿತು ಅಂದಾಕ್ಷಣ ಅಲೊಬ್ಬಳು ಅಮ್ಮನೂ ಹುಟ್ಟಿಕೊಳ್ಳುತ್ತಾಳೆ. ಅಪ್ಪನೂ ಜನನವಾಗುತ್ತಾನೆ. ಆಗಲೇ ಹೊಸ ಅಜ್ಜ , ಅಜ್ಜಿ , ಸೋದರ ಅತ್ತೆ , ಭಾವ , ಸೋದರಮಾವ , ಅಣ್ಣ , ತಮ್ಮ , ತಂಗಿ , ಅಕ್ಕ, ಚಿಕ್ಕಪ್ಪ , ಚಿಕ್ಕಮ್ಮ , ಮತ್ತಾತ , ಮತ್ತಜ್ಜಿ . . . . . . ಅಬ್ಬಾ ಎಷ್ಟೆಲ್ಲಾ ಸಂಬಂಧಗಳ ಹುಟ್ಟು ಇಲ್ಲಿ ಆಗಿಬಿಡುತ್ತದೆ. ಎಷ್ಟು ಜನರಿಗೆ ಸಂಭ್ರಮ. ನಾನು ಅಮ್ಮನಾದೆ ಎನ್ನವುಷ್ಟೇ ಖುಷಿ ಈ ಎಲ್ಲಾ ಸಂಬಂಧಗಳಲ್ಲೂ ಕಾಣುತ್ತದೆ.ಇಲ್ಲಿ ಆ ಸಂಬಂಧಗಳಿಗಿಂತ ದೊಡ್ಡದು ಯಾವುದೂ ಅಲ್ಲ. ಎಲ್ಲರಿಗೂ ಈ ಸಂಬಂಧಗಳ ನಡುವೆ ಬದುಕಬೇಕು ಅನ್ನೋ ಹಂಬಲ ಇದ್ದೇ ಇರುತ್ತದೆ. ಆತ ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ ಈ ಸಂಬಂಧಗಳಲ್ಲಿ ಅನವಿಗೆ ಪ್ರೀತಿ , ಮಮತೆ ಇದ್ದೇ ಇರುತ್ತದೆ. ಎಲ್ಲಾದರು ಒಂದು ಹೊಕ್ಕುಳ ಬಳ್ಳಿಯ ಸಂಬಂಧ ಸೃಷ್ಠಿಯಾಗಿಲ್ಲ ಎಂದಾದರೆ ಎಂತಹ ಕೊರಗು ಇರುತ್ತದೆ ಅನ್ನೋದು ಅನುಭವಿಸಿದವರಿಗೆ ಮಾತ್ರಾ ತಿಳಿಯುವುದು.
ಈ ಸಂಬಂಧಗಳಿಗೆ ನಮ್ಮ ಪುಣ್ಯ ಭೂಮಿಯಲ್ಲಿ ಇರುವಷ್ಟು ಮಹತ್ವ ಬೇರೆ ಕಡೆ ಕಾಣಿಸದು. ಇಂದು ಇವನ ಹೆಂಡತಿಯಾದರೆ , ನಾಳೆ ಅವನ ಹೆಂಡತಿಯಾಗಿ ಬಿಡುವುದು ಸುಲಭ ಮತ್ತು ಅದು ಸಾಮಾನ್ಯ ಕೂಡಾ. ಆದರೆ ಈ ಸಂಬಂಧವನ್ನು ಹೊರತುಪಡಿಸಿ ಉಳಿದ ಎಲ್ಲವೂ ಕೂಡಾ ಅಳಿಸಲು ಸಾಧ್ಯವೇ ಇಲ್ಲ.
ಒಂದು ವೇಳೆ ವ್ಯಕ್ತಿ ಇಲ್ಲವಾದರೂ ಆ ಸಂಬಂಧಗಳು ಹಾಗೇ ಉಳಿದುಕೊಳ್ಳುತ್ತವೆ. ಈಗ ಇಲ್ಲವಾದ ಅವರು ನನಗೆ ಮಾವನ , ಅಣ್ಣನೋ , ಭಾವನೋ ಆಗಿದ್ದ ಎನ್ನುವುದು ಉಳಿದುಕೊಳ್ಳುತ್ತದೆ. ಹಾಗಾಗಿ ಈ ಸಂಬಂಧಗಳಿಗೆ ಸಾವಿಲ್ಲ.
ನಿಜಕ್ಕೂ ಈ ಸಂಬಂಧಗಳ ನಡುವೆ ಪಯಣಿಸೋದೇ ಒಂದು ಖುಷಿ.
12 ಏಪ್ರಿಲ್ 2011
12 ಮಾರ್ಚ್ 2011
ಸುನಾಮಿ ಎಂದರೆ ಇವರು ನಡುಗುತ್ತಾರೆ
ಮತ್ತೆ ನೆನಪಾಯಿತು 2004 ಡಿಸೆಂಬರ್ 26.

ಅನೇಕ ಘಟನೆಗಳು ಓಡೋಡಿ ಬಂದವು. ಅಂದು ಸುನಾಮಿಯನ್ನು ಗೆದ್ದವರು ಯಾರಿದ್ದಾರೆ ಎಂದು ನೋಡಿದಾಗ ಅವರು ಸಿಕ್ಕಿದರು. ಮನೆಗೆ ಹೋದಾಗ ಅವರು ವಿವರಿಸಿದ್ದು ಹೀಗೆ. .
“ಅಲ್ಲಿ ನಾನು ಹೆಣಗಳ ರಾಶಿಯಲ್ಲಿ ಜೀವಚ್ಚವವಾಗಿ ಬಿದ್ದಿದ್ದೆ.ಯಾರೂ ಒಬ್ಬ ಪುಣ್ಯಾತ್ಮ ನನ್ನನ್ನು ಗಮನಿಸಿ ಬದುಕಿಸಿದ , ಅಬ್ಬಾ . . ಬದುಕೇ ಮುಗಿದು ಹೋಯಿತು ಅಂದುಕೊಂಡಿದ್ದ ನಾನೀಗ ಮತ್ತೆ ಬದುಕು ಕಟ್ಟಿಕೊಂಡಿದ್ದೇನೆ . .” ಇದು ಪುತ್ತೂರಿನ ಹಾರಾಡಿಯ ನಂಜಮ್ಮ ಸುನಾಮಿ ಬಗ್ಗೆ ಹೇಳುವ ಭಯ ಮಿಶ್ರಿತ ಮಾತು. ಉತ್ತರ ಜಪಾನ್ನಲ್ಲಿ ಸಂಭವಿಸಿದ ಘೋರ ಘಟನೆಯನ್ನು ದೃಶ್ಯ ಮಾಧ್ಯಮದಲ್ಲಿ ವೀಕ್ಷಿಸುತ್ತಾ ನಂಜಮ್ಮಳ ಕಣ್ಣಂಚಿನಲ್ಲಿ ಈಗಲೂ ನೀರು ಹರಿಯುತ್ತದೆ.
ನಿನ್ನೆ ಉತ್ತರ ಜಪಾನ್ ಮತ್ತು ಆಸುಪಾಸಿನ ದೇಶಗಳು ಸುನಾಮಿ ಹಾಗೂ ಭೂಕಂಪದಿಂದ ತತ್ತರಿಸಿ ಅದೆಷ್ಟೋ ಜನರನ್ನು ಆಪೋಶನ ತೆಗೆದುಕೊಂಡಿದ್ದರೆ , ಅಂದು 26 ಡಿಸೆಂಬರ್ 2004 ಭಾನುವಾರ. ಬೆಂಗಳೂರಿನಂತಹ ನಗರದಲ್ಲಿ ಕೆಲ ಜನರೆಲ್ಲಾ ವೀಕೆಂಡ್ ಮಜಾದಲ್ಲಿದ್ದರೆ , ಇನ್ನೂ ಕೆಲವರು ನಗರ ಪ್ರದಕ್ಷಿಣೆ , ಪ್ರವಾಸಕ್ಕೆ ಹೋಗಿದ್ದರು , ಕ್ರಿಸ್ಮಸ್ ರಜಾವೂ ಇದ್ದರಿಂದ ಬೇರೆ ಬೇರೆ ಕಡೆ ಜನ ಪ್ರವಾಸ ಹೋಗಿದ್ದರು.ಆದರೆ ಅಂದು ಸಂಜೆಯ ಹೊತ್ತಿಗೆ ತಮಿಳುನಾಡು ಸೇರಿದಂತೆ ದೇಶದ ಕರಾವಳಿ ತೀರಕ್ಕೆ ಹೋದ ಜನರಿಗೆ ಅದೊಂದು ದುರ್ದಿನ.ಈ ಘಟನೆಯಿಂದ ಮಾನಸಿಕವಾಗಿ ನೊಂದವರು ಅದೆಷ್ಟೋ ಜನ. ಈ ಎಲ್ಲಾ ಘಟನೆಯನ್ನು ಕಂಡಾರೆ ಕಂಡು ಸ್ವತ: ನೋವು ಅನುಭವಿಸಿ ಮರುಜನ್ಮ ಪಡೆದ ಪುತ್ತೂರಿನ ಹಾರಾಡಿಯ ನಂಜಮ್ಮ ಇಂದಿಗೂ ಸುನಾಮಿ ಎಂಬ ಹೆಸರು ಕೇಳಿದೊಡನೆಯೇ ಎಲ್ಲಾ ಭಯಾನಕ ನೆನಪುಗಳನ್ನು ಹೀಗೆ ಬಿಚ್ಚಿಡುತ್ತಾರೆ. .
ಪುತ್ತೂರಿನ ಮೆಸ್ಕಾಂನಲ್ಲಿ ಗುಮಾಸ್ತೆಯಾಗಿರುವ ನಂಜಮ್ಮ ಅಂದು ತನ್ನ ಕುಟುಂಬದವರೊಂದಿಗೆ ತಮಿಳುನಾಡಿನ ದೇವಿ ದೇವಸ್ಥಾನಕ್ಕೆ ಹೋಗಿದ್ದರು. ಬಸ್ಸಿನಿಂದ ಇಳಿದು ಎರಡೇ ಎರಡು ಹೆಜ್ಜೆ ಹಾಕಿದ್ದರು. ಅಷ್ಟರಲ್ಲಿ ಹಿಂದಿನಿಂದ ಏನೋ ಹೊಡೆದಂತಾಯಿತು. ಅಲ್ಲೇ ಕುಸಿದು ಬಿದ್ದು ಅದೆಷ್ಟೂ ದೂರ ನೀರಲ್ಲಿ ಹೋಗಿದ್ದಾರೆ. ಆಗ ಯಾರೋ ಪುಣ್ಯಾತ್ಮರು ಬಂದು ನಂಜಮ್ಮರನ್ನು ಎತ್ತಿ ಕೂರಿಸಿ ವಾಹನ ತರುವುದಾಗಿ ಹೋಗಿದ್ದಾರೆ.ಅಷ್ಟರಲ್ಲಿ ಎರಡನೇ ಬಾರಿ ನೀರಿನ ಅಲೆ ಬಂದು ನಂಜಮ್ಮ ಮತ್ತೆ ಒಂದಷ್ಟು ದೂರ ನೀರಲ್ಲಿ ಸಾಗಿ ಅದ್ಯಾವುದೋ ಮರದ ಕೊಂಬೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆಗ ಸೃತಿಯೂ ತಪ್ಪಿತ್ತು. ಮತ್ತೆ ಎಚ್ಚರವಾದಾಗ ಎಲ್ಲೆಲ್ಲೂ ದೇಹಗಳು ಕಾಣುತ್ತಿವೆ , ಮಕ್ಕಳು , ವೃದ್ದರು ಹೀಗೆ ಅತ್ಯಂತ ವಿಕಾರವಾದ ದೇಹಗಳ ನಡುವೆ ಬಿದ್ದರುವ ನಂಜಮ್ಮಗೆ ಬದುಕೇ ಮುಗಿದುಹೋಯಿತು ಅಂತ ಅನ್ನಿಸಿತ್ತಂತೆ ಅತ್ತಿತ್ತ ಕಣ್ಣು ಹಾಯಿಸಿದರೆ ತನ್ನೊಂದಿಗೆ ಬಂದ ಯಾರನ್ನೂ ಕಾಣುತ್ತಿಲ್ಲ.ಏಕಾಂಗಿಯಾಗಿದ್ದರು ಆಗ. ಆದರೆ ಅಲ್ಲಿ ಮಿಸುಕಾಡುತ್ತಿರುವ ನಂಜಮ್ಮರನ್ನು ಯಾರೋ ಪುಣ್ಯಾತ್ಮರು ನೋಡಿದರು , ಹೀಗಾಗಿ ಮತ್ತೆ ಬದುಕುವ ಆಸೆಗೆ ಜೀವ ಸಿಕ್ಕಿತು.ಇವರನ್ನು ಆಸ್ಪತ್ರೆಗೆ ಸೇರಿಸಿದರಂತೆ.ಆಗಲೇ ನಂಜಮ್ಮ ದೇಹ ಜರ್ಝರಿತವಾಗಿತ್ತು , ದೇಹದಲ್ಲೆಲ್ಲಾ ಗಾಯಗಳಾಗಿತ್ತು ಆಸ್ಪತ್ರೆ ನಂಜಮ್ಮರನ್ನು ಸಾಗಿಸಿದಾ ಇಲ್ಲಾಗುವುದಿಲ್ಲ ಎಂದು ಹೇಳಿದ್ದಾರೆ.ಹೀಗೆ 3 ಆಸ್ಪತ್ರೆಗೆ ತೆರಳಿದ ಅವರಿಗೆ ಭಾಷಾ ಸಮಸ್ಯೆಯೂ ಕಾಡಿತು.ನಂತರ ಕನ್ನಡ ಬಲ್ಲವರನ್ನು ಕರೆತಂದು ನಂಜಮ್ಮರನ್ನು ಪುತ್ತೂರು ಕಡೆಗೆ ಕಳುಹಿಸಿದರು. ಅದ್ಯಾವುದೋ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು.ಆದರೆ ಹಣವಿಲ್ಲದ ಕಾರಣ ಅವರನ್ನು ಪುತ್ತೂರಿಗೆ ಕರೆತರಲು ಅಸಾಧ್ಯ ಎಂದು ಅವರ ಕಾರಿನ ಚಾಲಕರು ಹೇಳಿದಾಗ ತನ್ನ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಅವರಿಗೆ ನೀಡಿ ಪುತ್ತೂರಿಗೆ ಬಿಡುವಂತೆ ಮನವಿ ಮಾಡಿದರು. ಆ ಚಿನ್ನದ ಬಳೆಯನ್ನು ಮಾರಾಟ ಮಾಡಿ ಪುತ್ತೂರಿಗೆ ಬಂದರು. ಆ ಬಳಿಕ ಪುತ್ತೂರಿನ ವೈದ್ಯರು ಚಿಕಿತ್ಸೆ ನೀಡಿ ಗುಣಮುಖವಾಗಿದ್ದಾರೆ. ಆದರೆ ದೇಹದ ಮೇಲಿನ ಗಾಯಗಳು ಇಂದೂ ಕಾಣುತ್ತಿವೆ. ಈ ಸಂದರ್ಭಲ್ಲಿ ಇವರಿಗೆ ಪರಿಹಾರ ನೀಡುತ್ತೇವೆ ಎಂದು ಬಂದವರು ಮತ್ತೆ ಈ ಕಡೆ ತಿರುಗಿ ನೋಡಿಲ್ಲ ಅಂತಾರೆ ನಂಜಮ್ಮ.
ನಿನ್ನೆ ಉತ್ತರ ಜಪಾನ್ನಲ್ಲಿ ಸಂಭವಿಸಿದ ಭೂಕಂಪ ಹಾಗೂ ಸುನಾಮಿಯ ತೀವ್ರತೆ ಹಾಗೂ ಅಲ್ಲಿನ ಸಾವು ನೋವುಗಳನ್ನು ಕಂಡ ನಂಜಮ್ಮರಿಗೆ ಈ ಎಲ್ಲಾ ಘಟನೆಗಳನ್ನು ನೆನಪಿಸುವಂತೆ ಮಾಡಿತ್ತು. ಇದು ನಿಜಕ್ಕೂ ಒಂದು ಭಯಾನಕ ಸನ್ನಿವೇಶ ಎಂದು ನೆನಪಿಸಿಕೊಳ್ಳುತ್ತಾರೆ ನಂಜಮ್ಮ.
ಒಂದು ಸುನಾಮಿಯ ಹೊಡೆತಕ್ಕೆ ಸಿಕ್ಕಿ ಬದುಕೇ ಮುಗಿದುಹೋಯಿತು ಅಂದುಕೊಂಡಿದ್ದ ನಂಜಮ್ಮ ಸಾವು-ಬದುಕಿನ ನಡುವೆ ಹೋರಾಡಿ ಕೊನೆಗೂ ಸಾವೆಂಬ ಸುನಾಮಿಯನ್ನೂ ಗೆದ್ದಿದ್ದಾರೆ.ನಿನ್ನೆಯೂ ಸಂಭವಿಸಿದ ಘಟನೆಯಲ್ಲಿ ನಂಜಮ್ಮರಂತೆ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರು ಗೆದ್ದುಬರಲಿ ಎಂದು ಆಶಿಸೋಣ.

ಅನೇಕ ಘಟನೆಗಳು ಓಡೋಡಿ ಬಂದವು. ಅಂದು ಸುನಾಮಿಯನ್ನು ಗೆದ್ದವರು ಯಾರಿದ್ದಾರೆ ಎಂದು ನೋಡಿದಾಗ ಅವರು ಸಿಕ್ಕಿದರು. ಮನೆಗೆ ಹೋದಾಗ ಅವರು ವಿವರಿಸಿದ್ದು ಹೀಗೆ. .
“ಅಲ್ಲಿ ನಾನು ಹೆಣಗಳ ರಾಶಿಯಲ್ಲಿ ಜೀವಚ್ಚವವಾಗಿ ಬಿದ್ದಿದ್ದೆ.ಯಾರೂ ಒಬ್ಬ ಪುಣ್ಯಾತ್ಮ ನನ್ನನ್ನು ಗಮನಿಸಿ ಬದುಕಿಸಿದ , ಅಬ್ಬಾ . . ಬದುಕೇ ಮುಗಿದು ಹೋಯಿತು ಅಂದುಕೊಂಡಿದ್ದ ನಾನೀಗ ಮತ್ತೆ ಬದುಕು ಕಟ್ಟಿಕೊಂಡಿದ್ದೇನೆ . .” ಇದು ಪುತ್ತೂರಿನ ಹಾರಾಡಿಯ ನಂಜಮ್ಮ ಸುನಾಮಿ ಬಗ್ಗೆ ಹೇಳುವ ಭಯ ಮಿಶ್ರಿತ ಮಾತು. ಉತ್ತರ ಜಪಾನ್ನಲ್ಲಿ ಸಂಭವಿಸಿದ ಘೋರ ಘಟನೆಯನ್ನು ದೃಶ್ಯ ಮಾಧ್ಯಮದಲ್ಲಿ ವೀಕ್ಷಿಸುತ್ತಾ ನಂಜಮ್ಮಳ ಕಣ್ಣಂಚಿನಲ್ಲಿ ಈಗಲೂ ನೀರು ಹರಿಯುತ್ತದೆ.
ನಿನ್ನೆ ಉತ್ತರ ಜಪಾನ್ ಮತ್ತು ಆಸುಪಾಸಿನ ದೇಶಗಳು ಸುನಾಮಿ ಹಾಗೂ ಭೂಕಂಪದಿಂದ ತತ್ತರಿಸಿ ಅದೆಷ್ಟೋ ಜನರನ್ನು ಆಪೋಶನ ತೆಗೆದುಕೊಂಡಿದ್ದರೆ , ಅಂದು 26 ಡಿಸೆಂಬರ್ 2004 ಭಾನುವಾರ. ಬೆಂಗಳೂರಿನಂತಹ ನಗರದಲ್ಲಿ ಕೆಲ ಜನರೆಲ್ಲಾ ವೀಕೆಂಡ್ ಮಜಾದಲ್ಲಿದ್ದರೆ , ಇನ್ನೂ ಕೆಲವರು ನಗರ ಪ್ರದಕ್ಷಿಣೆ , ಪ್ರವಾಸಕ್ಕೆ ಹೋಗಿದ್ದರು , ಕ್ರಿಸ್ಮಸ್ ರಜಾವೂ ಇದ್ದರಿಂದ ಬೇರೆ ಬೇರೆ ಕಡೆ ಜನ ಪ್ರವಾಸ ಹೋಗಿದ್ದರು.ಆದರೆ ಅಂದು ಸಂಜೆಯ ಹೊತ್ತಿಗೆ ತಮಿಳುನಾಡು ಸೇರಿದಂತೆ ದೇಶದ ಕರಾವಳಿ ತೀರಕ್ಕೆ ಹೋದ ಜನರಿಗೆ ಅದೊಂದು ದುರ್ದಿನ.ಈ ಘಟನೆಯಿಂದ ಮಾನಸಿಕವಾಗಿ ನೊಂದವರು ಅದೆಷ್ಟೋ ಜನ. ಈ ಎಲ್ಲಾ ಘಟನೆಯನ್ನು ಕಂಡಾರೆ ಕಂಡು ಸ್ವತ: ನೋವು ಅನುಭವಿಸಿ ಮರುಜನ್ಮ ಪಡೆದ ಪುತ್ತೂರಿನ ಹಾರಾಡಿಯ ನಂಜಮ್ಮ ಇಂದಿಗೂ ಸುನಾಮಿ ಎಂಬ ಹೆಸರು ಕೇಳಿದೊಡನೆಯೇ ಎಲ್ಲಾ ಭಯಾನಕ ನೆನಪುಗಳನ್ನು ಹೀಗೆ ಬಿಚ್ಚಿಡುತ್ತಾರೆ. .
ಪುತ್ತೂರಿನ ಮೆಸ್ಕಾಂನಲ್ಲಿ ಗುಮಾಸ್ತೆಯಾಗಿರುವ ನಂಜಮ್ಮ ಅಂದು ತನ್ನ ಕುಟುಂಬದವರೊಂದಿಗೆ ತಮಿಳುನಾಡಿನ ದೇವಿ ದೇವಸ್ಥಾನಕ್ಕೆ ಹೋಗಿದ್ದರು. ಬಸ್ಸಿನಿಂದ ಇಳಿದು ಎರಡೇ ಎರಡು ಹೆಜ್ಜೆ ಹಾಕಿದ್ದರು. ಅಷ್ಟರಲ್ಲಿ ಹಿಂದಿನಿಂದ ಏನೋ ಹೊಡೆದಂತಾಯಿತು. ಅಲ್ಲೇ ಕುಸಿದು ಬಿದ್ದು ಅದೆಷ್ಟೂ ದೂರ ನೀರಲ್ಲಿ ಹೋಗಿದ್ದಾರೆ. ಆಗ ಯಾರೋ ಪುಣ್ಯಾತ್ಮರು ಬಂದು ನಂಜಮ್ಮರನ್ನು ಎತ್ತಿ ಕೂರಿಸಿ ವಾಹನ ತರುವುದಾಗಿ ಹೋಗಿದ್ದಾರೆ.ಅಷ್ಟರಲ್ಲಿ ಎರಡನೇ ಬಾರಿ ನೀರಿನ ಅಲೆ ಬಂದು ನಂಜಮ್ಮ ಮತ್ತೆ ಒಂದಷ್ಟು ದೂರ ನೀರಲ್ಲಿ ಸಾಗಿ ಅದ್ಯಾವುದೋ ಮರದ ಕೊಂಬೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆಗ ಸೃತಿಯೂ ತಪ್ಪಿತ್ತು. ಮತ್ತೆ ಎಚ್ಚರವಾದಾಗ ಎಲ್ಲೆಲ್ಲೂ ದೇಹಗಳು ಕಾಣುತ್ತಿವೆ , ಮಕ್ಕಳು , ವೃದ್ದರು ಹೀಗೆ ಅತ್ಯಂತ ವಿಕಾರವಾದ ದೇಹಗಳ ನಡುವೆ ಬಿದ್ದರುವ ನಂಜಮ್ಮಗೆ ಬದುಕೇ ಮುಗಿದುಹೋಯಿತು ಅಂತ ಅನ್ನಿಸಿತ್ತಂತೆ ಅತ್ತಿತ್ತ ಕಣ್ಣು ಹಾಯಿಸಿದರೆ ತನ್ನೊಂದಿಗೆ ಬಂದ ಯಾರನ್ನೂ ಕಾಣುತ್ತಿಲ್ಲ.ಏಕಾಂಗಿಯಾಗಿದ್ದರು ಆಗ. ಆದರೆ ಅಲ್ಲಿ ಮಿಸುಕಾಡುತ್ತಿರುವ ನಂಜಮ್ಮರನ್ನು ಯಾರೋ ಪುಣ್ಯಾತ್ಮರು ನೋಡಿದರು , ಹೀಗಾಗಿ ಮತ್ತೆ ಬದುಕುವ ಆಸೆಗೆ ಜೀವ ಸಿಕ್ಕಿತು.ಇವರನ್ನು ಆಸ್ಪತ್ರೆಗೆ ಸೇರಿಸಿದರಂತೆ.ಆಗಲೇ ನಂಜಮ್ಮ ದೇಹ ಜರ್ಝರಿತವಾಗಿತ್ತು , ದೇಹದಲ್ಲೆಲ್ಲಾ ಗಾಯಗಳಾಗಿತ್ತು ಆಸ್ಪತ್ರೆ ನಂಜಮ್ಮರನ್ನು ಸಾಗಿಸಿದಾ ಇಲ್ಲಾಗುವುದಿಲ್ಲ ಎಂದು ಹೇಳಿದ್ದಾರೆ.ಹೀಗೆ 3 ಆಸ್ಪತ್ರೆಗೆ ತೆರಳಿದ ಅವರಿಗೆ ಭಾಷಾ ಸಮಸ್ಯೆಯೂ ಕಾಡಿತು.ನಂತರ ಕನ್ನಡ ಬಲ್ಲವರನ್ನು ಕರೆತಂದು ನಂಜಮ್ಮರನ್ನು ಪುತ್ತೂರು ಕಡೆಗೆ ಕಳುಹಿಸಿದರು. ಅದ್ಯಾವುದೋ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು.ಆದರೆ ಹಣವಿಲ್ಲದ ಕಾರಣ ಅವರನ್ನು ಪುತ್ತೂರಿಗೆ ಕರೆತರಲು ಅಸಾಧ್ಯ ಎಂದು ಅವರ ಕಾರಿನ ಚಾಲಕರು ಹೇಳಿದಾಗ ತನ್ನ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಅವರಿಗೆ ನೀಡಿ ಪುತ್ತೂರಿಗೆ ಬಿಡುವಂತೆ ಮನವಿ ಮಾಡಿದರು. ಆ ಚಿನ್ನದ ಬಳೆಯನ್ನು ಮಾರಾಟ ಮಾಡಿ ಪುತ್ತೂರಿಗೆ ಬಂದರು. ಆ ಬಳಿಕ ಪುತ್ತೂರಿನ ವೈದ್ಯರು ಚಿಕಿತ್ಸೆ ನೀಡಿ ಗುಣಮುಖವಾಗಿದ್ದಾರೆ. ಆದರೆ ದೇಹದ ಮೇಲಿನ ಗಾಯಗಳು ಇಂದೂ ಕಾಣುತ್ತಿವೆ. ಈ ಸಂದರ್ಭಲ್ಲಿ ಇವರಿಗೆ ಪರಿಹಾರ ನೀಡುತ್ತೇವೆ ಎಂದು ಬಂದವರು ಮತ್ತೆ ಈ ಕಡೆ ತಿರುಗಿ ನೋಡಿಲ್ಲ ಅಂತಾರೆ ನಂಜಮ್ಮ.
ನಿನ್ನೆ ಉತ್ತರ ಜಪಾನ್ನಲ್ಲಿ ಸಂಭವಿಸಿದ ಭೂಕಂಪ ಹಾಗೂ ಸುನಾಮಿಯ ತೀವ್ರತೆ ಹಾಗೂ ಅಲ್ಲಿನ ಸಾವು ನೋವುಗಳನ್ನು ಕಂಡ ನಂಜಮ್ಮರಿಗೆ ಈ ಎಲ್ಲಾ ಘಟನೆಗಳನ್ನು ನೆನಪಿಸುವಂತೆ ಮಾಡಿತ್ತು. ಇದು ನಿಜಕ್ಕೂ ಒಂದು ಭಯಾನಕ ಸನ್ನಿವೇಶ ಎಂದು ನೆನಪಿಸಿಕೊಳ್ಳುತ್ತಾರೆ ನಂಜಮ್ಮ.
ಒಂದು ಸುನಾಮಿಯ ಹೊಡೆತಕ್ಕೆ ಸಿಕ್ಕಿ ಬದುಕೇ ಮುಗಿದುಹೋಯಿತು ಅಂದುಕೊಂಡಿದ್ದ ನಂಜಮ್ಮ ಸಾವು-ಬದುಕಿನ ನಡುವೆ ಹೋರಾಡಿ ಕೊನೆಗೂ ಸಾವೆಂಬ ಸುನಾಮಿಯನ್ನೂ ಗೆದ್ದಿದ್ದಾರೆ.ನಿನ್ನೆಯೂ ಸಂಭವಿಸಿದ ಘಟನೆಯಲ್ಲಿ ನಂಜಮ್ಮರಂತೆ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರು ಗೆದ್ದುಬರಲಿ ಎಂದು ಆಶಿಸೋಣ.
01 ಮಾರ್ಚ್ 2011
ಇದೇನು ಹಗರಣವಾ ?
ಸುಳ್ಯದಲ್ಲಿ ಮೊನ್ನೆ ಇದ್ದಕ್ಕಿದ್ದಂತೆಯೇ ಇ ಸ್ಟಾಂಪ್ ಪಡೆಯಲು ತೀರಾ ರಶ್. ಇಂದು ಕೊಟ್ಟರೆ ನಾಳೆಯೋ ನಾಡಿದ್ದೋ ಸಿಗುತ್ತಿತ್ತು.ಇದ್ಯಾಕೆ ಅಂತ ಯಾರಿಗೂ ಗೊತ್ತಿಲ್ಲ.ಇದರ ಬೆನ್ನಿಗೇ ಒಂದೊಂದು ಸಂಗತಿ ಬಿಚ್ಚತೊಡಗಿತು. ಸ್ವಲ್ಪ ಹುಡುಕಾಡಿದಾಗ ಸಿಕ್ಕಿದ್ದು ಹೀಗೆ . .
ತೆಲಗಿ ಹಗರಣದ ನಂತರ ಛಾಪಾ ಕಾಗದ ವಿತರಣೆಯಲ್ಲಿ ಭಾರೀ ಎಚ್ಚರಿಕೆಯನ್ನು ಸರಕಾರ ವಹಿಸಿತ್ತು. ಅದಕ್ಕಾಗಿ ವಿವಿದ ರೀತಿಯ ಕ್ರಮ ಕೈಗೊಂಡಿತ್ತು. ಈಗ ಇ ಸ್ಟಾಂಪಿಗ್ ವ್ಯವಸ್ಥೆ ಮಾಡಿದೆ.ಅದರೊಂದಿಗೆ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಂಬ್ರೋಸಿಂಗ್ ಮತ್ತು ಪ್ರಾಂಕ್ಲಿನ್ ವ್ಯವಸ್ಥೆಯನ್ನು ಜನಸಾಮಾನ್ಯರಿಗೆ ಮಾಡಿಕೊಟ್ಟಿದೆ.
ಸುಳ್ಯದಲ್ಲಿ ಮೊನ್ನೆ ಇದ್ದಕ್ಕಿದ್ದಂತೆಯೇ ಇ ಸ್ಟಾಂಪ್ ಪೇಪರ್ ಪಡೆಯಲು ತೀರಾ ರಶ್. ಇಂದು ಕೊಟ್ಟರೆ ನಾಳೆಯೋ ನಾಡಿದ್ದೋ ಇ ಸ್ಟಾಂಪ್ ಸಿಗುತ್ತಿತ್ತು. ಎಂಬ್ರೋಸಿಂಗ್ , ಪ್ರಾಂಕ್ಲಿನ್ ವ್ಯವಸ್ಥೆ ಸುಳ್ಯದಲ್ಲಿ ಈಗ ಇಲ್ಲವೆಂದು ಜನ ಹೇಳುತ್ತಿದ್ದರು. ಆದರೆ ಇದು ಯಾಕೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಈ ವಿಚಾರದ ಬೆನ್ನ ಹಿಂದೆ ಹೋದರೆ ಕಳೆದ ಎರಡು ಮೂರು ವರ್ಷದಿಂದ ನಡೆಯುತ್ತಿದ್ದ ದೊಡ್ಡ ವಂಚನೆ ಬೆಳಕಿಗೆ ಬರುತ್ತದೆ. ಸರಕಾರಕ್ಕೆ ಸಾವಿರಾರು ರುಪಾಯಿ ವಂಚಿಸಿದ ಸಂಗತಿ ಹೊರಬರುತ್ತದೆ.ಆದರೆ ಈಗ ಇದೆಲ್ಲವೂ ಮುಚ್ಚಿ ಹೋಗುವ ಹಂತದಲ್ಲಿದೆ.
ಏನಿದು ?
ಛಾಪಾ ಕಾಗದದ ಬದಲಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಂಬ್ರೋಸಿಂಗ್ ಮಾಡುವ ಪದ್ದತಿಯನ್ನು ಸರಕಾರ ಜಾರಿಗೊಳಿಸಿತ್ತು. ಇದರ ಪ್ರಕಾರ ನಾವು ಖಾಲಿ ಹಾಳೆ ಅಥವಾ ಹಳೆಯ ಸ್ಟಾಂಪ್ ಪೇಪರನ್ನು ತೆಗೆದುಕೊಂಡು ಹೋದರೆ ಅಲ್ಲಿ ಒಂದು ಸೀಲ್ ಹಾಕಿ ಸರಕಾರಕ್ಕೆ ನೂರು ರುಪಾಯಿ ಕಟ್ಟಬೇಕು. ಅಂದರೆ ಆ ಎಂಬ್ರೋಸಿಂಗ್ ಮಾಡಿದ ಹಾಳೆಯಲ್ಲಿ ಒಂದು ಸೀರಿಯಲ್ ನಂಬರನ್ನು ಬರೆಯಬೇಕು.ಇದೇ ಸಂಖ್ಯೆಯನ್ನು ನಮೂದಿಸಿ , ರಿಜಿಸ್ಟ್ರಾರ್ ಕಚೇರಿಯಲ್ಲಿ ರೆಕಾರ್ಡ್ ಮೈಂಟೈನ್ ಮಾಡಬೇಕು. ಇದರ ಪ್ರಕಾರ ಸರಕಾರಕ್ಕೆ ಹಣ ಸಂದಾಯ ಮಾಡಬೇಕು. ಆದರೆ ಇಲ್ಲಿ ಆಗಿರುವುದೇ ಬೇರೆ. ಆ ಸೀರಿಯಲ್ ನಂಬರೇ ಇಲ್ಲ. ಈ ನಂಬರೇ ಇಲ್ಲದ ಮೇಲೆ ಸರಕಾರಕ್ಕೆ ಹಣ ಕೊಡುವುದು ಹೇಗೆ ಮತ್ತು ಯಾರು. ಹಾಗಂತ ಸಾರ್ವಜನಿಕರಿಂದ ಹಣ ವಸೂಲು ಮಾಡಲಾಗುತ್ತದೆ. ಇಂತಹ ಅದೆಷ್ಟೋ ಛಾಪಾ ಕಾಗದ 2 ವರ್ಷದಿಂದ ಬಳಕೆಯಾಗುತ್ತಾ ಇದೆ. ಎಂಗ್ರಿಮೆಂಟ್ಗಳು ನಡೆಯುತ್ತಾ ಇದೆ.

ಇತ್ತೀಚೆಗೆ ಕೃಷಿಕರೊಬ್ಬರು ಬ್ಯಾಂಕೊಂದಕ್ಕೆ ವಿವಿದ ದಾಖಲೆಗಳನ್ನು ನೀಡಿದರಂತೆ , ಆಗ ಬೆಳಕಿಗೆ ಬಂದದ್ದು ಈ ನಕಲಿ ಸ್ಟ್ಯಾಂಪ್ ಪೇಪರ್. ಈ ಬಗ್ಗೆ ರಿಜಿಸ್ಟ್ರಾರ್ ಕಚೇರಿಯಲ್ಲೂ ವಿಚಾರಿಸದಾಗ ಎಲ್ಲಾ ಪ್ರಮಾದಗಳು ಬೆಳಕಿಗೆ ಬಂದಿದೆ. ಅದಾದ ಬಳಿಕ ಕೆಲ ದಿನದ ನಂತರ ಮರಳು ಸಾಗಾಟ ಪ್ರಕರಣವನ್ನು ಕೇರಳ ಪೊಲೀಸರು ಬೇಧಿಸಿದಾಗ ಅದರಲ್ಲಿ ಕಂಡು ಬಂದದ್ದೂ ಇಂತಹದ್ದೇ ನಕಲಿ ಸ್ಟ್ಯಾಂಪ್ ಪೇಪರ್. ಆದರೆ ಎರಡೂ ಪ್ರಕರಣದಲ್ಲಿ ಈ ಬಗ್ಗೆ ದೂರುಗಳು ದಾಖಲಾಗಿಲ್ಲ. ಎಲ್ಲವೂ ಅಲ್ಲಿಗೇ ಮುಚ್ಚಿಹೋಗಿದೆ.
ಇದೆಲ್ಲಾ ಬೆಳಕಿಗೆ ಬಂದಾಗುವ ವೇಳೆ ಕೂಡಲೇ ಎಂಬ್ರೋಸಿಂಗ್ ಪದ್ದತಿಯನ್ನು ನಿಲ್ಲಿಸಿ , ಕೇವಲ ಇ ಸ್ಟ್ಯಾಂಪಿಂಗ್ ವ್ಯವಸ್ಥೆ ಮಾತ್ರಾ ಬಳಕೆಯಾಗಬೇಕು ಎಂಬ ಸುಳ್ಯದಲ್ಲಿ ರೂಲ್ ಬಂತು. ಹೀಗಾಗಿ ಈಗ ಜನರಿಗೆ ಸಂಕಷ್ಠ.
ಅಷ್ಟಕ್ಕೂ ಈ ಹಗರಣ ಮಾಡಿದವರು ಯಾರು ?. ಹೇಗೆ ಆಯಿತು ? ಇಲಾಖೆಗಳು ಈ ಬಗ್ಗೆ ಯಾಕೆ ತನಿಖೆ ಮಾಡುತ್ತಿಲ್ಲ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.ಕಳೆದ 2 ವರ್ಷದಿಂದ ನಡೆದ ಈ ಅವ್ಯಹಾರ ಎಷ್ಟಾಗಿದೆ ಎಂಬುದೂ ಗೊತ್ತಾಗಿಲ್ಲ.ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿದೆ.
ತೆಲಗಿ ಹಗರಣದ ನಂತರ ಛಾಪಾ ಕಾಗದ ವಿತರಣೆಯಲ್ಲಿ ಭಾರೀ ಎಚ್ಚರಿಕೆಯನ್ನು ಸರಕಾರ ವಹಿಸಿತ್ತು. ಅದಕ್ಕಾಗಿ ವಿವಿದ ರೀತಿಯ ಕ್ರಮ ಕೈಗೊಂಡಿತ್ತು. ಈಗ ಇ ಸ್ಟಾಂಪಿಗ್ ವ್ಯವಸ್ಥೆ ಮಾಡಿದೆ.ಅದರೊಂದಿಗೆ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಂಬ್ರೋಸಿಂಗ್ ಮತ್ತು ಪ್ರಾಂಕ್ಲಿನ್ ವ್ಯವಸ್ಥೆಯನ್ನು ಜನಸಾಮಾನ್ಯರಿಗೆ ಮಾಡಿಕೊಟ್ಟಿದೆ.
ಸುಳ್ಯದಲ್ಲಿ ಮೊನ್ನೆ ಇದ್ದಕ್ಕಿದ್ದಂತೆಯೇ ಇ ಸ್ಟಾಂಪ್ ಪೇಪರ್ ಪಡೆಯಲು ತೀರಾ ರಶ್. ಇಂದು ಕೊಟ್ಟರೆ ನಾಳೆಯೋ ನಾಡಿದ್ದೋ ಇ ಸ್ಟಾಂಪ್ ಸಿಗುತ್ತಿತ್ತು. ಎಂಬ್ರೋಸಿಂಗ್ , ಪ್ರಾಂಕ್ಲಿನ್ ವ್ಯವಸ್ಥೆ ಸುಳ್ಯದಲ್ಲಿ ಈಗ ಇಲ್ಲವೆಂದು ಜನ ಹೇಳುತ್ತಿದ್ದರು. ಆದರೆ ಇದು ಯಾಕೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಈ ವಿಚಾರದ ಬೆನ್ನ ಹಿಂದೆ ಹೋದರೆ ಕಳೆದ ಎರಡು ಮೂರು ವರ್ಷದಿಂದ ನಡೆಯುತ್ತಿದ್ದ ದೊಡ್ಡ ವಂಚನೆ ಬೆಳಕಿಗೆ ಬರುತ್ತದೆ. ಸರಕಾರಕ್ಕೆ ಸಾವಿರಾರು ರುಪಾಯಿ ವಂಚಿಸಿದ ಸಂಗತಿ ಹೊರಬರುತ್ತದೆ.ಆದರೆ ಈಗ ಇದೆಲ್ಲವೂ ಮುಚ್ಚಿ ಹೋಗುವ ಹಂತದಲ್ಲಿದೆ.
ಏನಿದು ?
ಛಾಪಾ ಕಾಗದದ ಬದಲಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಎಂಬ್ರೋಸಿಂಗ್ ಮಾಡುವ ಪದ್ದತಿಯನ್ನು ಸರಕಾರ ಜಾರಿಗೊಳಿಸಿತ್ತು. ಇದರ ಪ್ರಕಾರ ನಾವು ಖಾಲಿ ಹಾಳೆ ಅಥವಾ ಹಳೆಯ ಸ್ಟಾಂಪ್ ಪೇಪರನ್ನು ತೆಗೆದುಕೊಂಡು ಹೋದರೆ ಅಲ್ಲಿ ಒಂದು ಸೀಲ್ ಹಾಕಿ ಸರಕಾರಕ್ಕೆ ನೂರು ರುಪಾಯಿ ಕಟ್ಟಬೇಕು. ಅಂದರೆ ಆ ಎಂಬ್ರೋಸಿಂಗ್ ಮಾಡಿದ ಹಾಳೆಯಲ್ಲಿ ಒಂದು ಸೀರಿಯಲ್ ನಂಬರನ್ನು ಬರೆಯಬೇಕು.ಇದೇ ಸಂಖ್ಯೆಯನ್ನು ನಮೂದಿಸಿ , ರಿಜಿಸ್ಟ್ರಾರ್ ಕಚೇರಿಯಲ್ಲಿ ರೆಕಾರ್ಡ್ ಮೈಂಟೈನ್ ಮಾಡಬೇಕು. ಇದರ ಪ್ರಕಾರ ಸರಕಾರಕ್ಕೆ ಹಣ ಸಂದಾಯ ಮಾಡಬೇಕು. ಆದರೆ ಇಲ್ಲಿ ಆಗಿರುವುದೇ ಬೇರೆ. ಆ ಸೀರಿಯಲ್ ನಂಬರೇ ಇಲ್ಲ. ಈ ನಂಬರೇ ಇಲ್ಲದ ಮೇಲೆ ಸರಕಾರಕ್ಕೆ ಹಣ ಕೊಡುವುದು ಹೇಗೆ ಮತ್ತು ಯಾರು. ಹಾಗಂತ ಸಾರ್ವಜನಿಕರಿಂದ ಹಣ ವಸೂಲು ಮಾಡಲಾಗುತ್ತದೆ. ಇಂತಹ ಅದೆಷ್ಟೋ ಛಾಪಾ ಕಾಗದ 2 ವರ್ಷದಿಂದ ಬಳಕೆಯಾಗುತ್ತಾ ಇದೆ. ಎಂಗ್ರಿಮೆಂಟ್ಗಳು ನಡೆಯುತ್ತಾ ಇದೆ.

ಇತ್ತೀಚೆಗೆ ಕೃಷಿಕರೊಬ್ಬರು ಬ್ಯಾಂಕೊಂದಕ್ಕೆ ವಿವಿದ ದಾಖಲೆಗಳನ್ನು ನೀಡಿದರಂತೆ , ಆಗ ಬೆಳಕಿಗೆ ಬಂದದ್ದು ಈ ನಕಲಿ ಸ್ಟ್ಯಾಂಪ್ ಪೇಪರ್. ಈ ಬಗ್ಗೆ ರಿಜಿಸ್ಟ್ರಾರ್ ಕಚೇರಿಯಲ್ಲೂ ವಿಚಾರಿಸದಾಗ ಎಲ್ಲಾ ಪ್ರಮಾದಗಳು ಬೆಳಕಿಗೆ ಬಂದಿದೆ. ಅದಾದ ಬಳಿಕ ಕೆಲ ದಿನದ ನಂತರ ಮರಳು ಸಾಗಾಟ ಪ್ರಕರಣವನ್ನು ಕೇರಳ ಪೊಲೀಸರು ಬೇಧಿಸಿದಾಗ ಅದರಲ್ಲಿ ಕಂಡು ಬಂದದ್ದೂ ಇಂತಹದ್ದೇ ನಕಲಿ ಸ್ಟ್ಯಾಂಪ್ ಪೇಪರ್. ಆದರೆ ಎರಡೂ ಪ್ರಕರಣದಲ್ಲಿ ಈ ಬಗ್ಗೆ ದೂರುಗಳು ದಾಖಲಾಗಿಲ್ಲ. ಎಲ್ಲವೂ ಅಲ್ಲಿಗೇ ಮುಚ್ಚಿಹೋಗಿದೆ.
ಇದೆಲ್ಲಾ ಬೆಳಕಿಗೆ ಬಂದಾಗುವ ವೇಳೆ ಕೂಡಲೇ ಎಂಬ್ರೋಸಿಂಗ್ ಪದ್ದತಿಯನ್ನು ನಿಲ್ಲಿಸಿ , ಕೇವಲ ಇ ಸ್ಟ್ಯಾಂಪಿಂಗ್ ವ್ಯವಸ್ಥೆ ಮಾತ್ರಾ ಬಳಕೆಯಾಗಬೇಕು ಎಂಬ ಸುಳ್ಯದಲ್ಲಿ ರೂಲ್ ಬಂತು. ಹೀಗಾಗಿ ಈಗ ಜನರಿಗೆ ಸಂಕಷ್ಠ.
ಅಷ್ಟಕ್ಕೂ ಈ ಹಗರಣ ಮಾಡಿದವರು ಯಾರು ?. ಹೇಗೆ ಆಯಿತು ? ಇಲಾಖೆಗಳು ಈ ಬಗ್ಗೆ ಯಾಕೆ ತನಿಖೆ ಮಾಡುತ್ತಿಲ್ಲ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.ಕಳೆದ 2 ವರ್ಷದಿಂದ ನಡೆದ ಈ ಅವ್ಯಹಾರ ಎಷ್ಟಾಗಿದೆ ಎಂಬುದೂ ಗೊತ್ತಾಗಿಲ್ಲ.ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕಾಗಿದೆ.
11 ಫೆಬ್ರವರಿ 2011
ಭೂಮಿ ಈಗ ರಜಸ್ವಲೆ. .
ಸೃಷ್ಠಿಯ ಮೂಲ ಹೆಣ್ಣು. ಹೆಣ್ಣನ್ನು ಭೂಮಿ, ಪ್ರಕೃತಿ ಹೀಗೆ ವಿವಿದ ರೂಪದಲ್ಲಿ ಕಂಡವರು ನಮ್ಮ ಪೂರ್ವಜರು.ಇದಕ್ಕೂ ಕಾರಣವಿದೆ, ಒಂದು ಸೃಷ್ಠಿಯು ಹಿಂದೆ ಹೆಣ್ಣು ಇದ್ದೇ ಇರುತ್ತಾಳೆ. ಇರಲೇಬೇಕು.ಈ ಪ್ರಕೃತಿ, ಭೂಮಿಯೂ ಕೂಡಾ ಹಾಗೆಯೇ.ಯಾವುದೇ ಬೆಳೆಗಳ ಸೃಷ್ಠಿಗೆ ಭೂಮಿ ಮತ್ತು ಈ ಪ್ರಕೃತಿ ಬೇಕೇ ಬೇಕು.ಇಂತಹ ಸೃಷ್ಠಿಯಾಗುವುದಕ್ಕೆ ಮೊದಲು ಅವಳು ಪ್ರಬುದ್ದಳಾಗಬೇಕು , ರಜಸ್ವಲೆಯಾಗಬೇಕು.ಇದು ಪ್ರಕೃತಿ ನಿಯಮವೂ ಹೌದು. ಅದರಂತೆ ಈಗ ಭೂದೇವಿಯು ರಜಸ್ವಲೆಯಾಗಿದ್ದಾಳೆ. ಸೃಷ್ಠಿಗೆ ತಯಾರಾಗಿದ್ದಾಳೆ. ಹಾಗಾಗಿ
ಎಲ್ಲೆಡೆ ಮೌನ ಆವರಿಸಿದೆ. ಭೂಮಿಗೆ ಕಾಲಿಡುವುದಕ್ಕೂ ಈಗ ಹಿಂಜರಿಕೆ.ಎಲ್ಲಿ ಅವಳಿಗೆ ನೋವಾಗುತ್ತದೋ ಅನ್ನೋ ಭಾವ.ಎಂತಹ ಪ್ರೀತಿಯ ಭಾವ ಅದು !.
ಈಗ ಭೂಮಿಯ ಕಡೆಗೆ ಒಮ್ಮೆ ನೋಡಿ. ಮೊನ್ನೆ ಮೊನ್ನೆ ಬರಡು ಬರಡಾಗಿದ್ದ ಮರಗಳೆಲ್ಲಾ ಮತ್ತೆ ಚಿಗುರಿ ನಿಂತಿದೆ.ಮಾಮರವೆಲ್ಲಾ ಹೂ ಬಿಟ್ಟು ಕಾಯಿ ಕಟ್ಟಿಕೊಳ್ಳುವುದಕ್ಕೆ ಸಿದ್ದವಾಗುತ್ತಿದೆ , ಅಂದರೆ ಗರ್ಭವತಿಯಾಗುವುದಕ್ಕೆ ಅಣಿಯಾಗುತ್ತಿದೆ , ಇತ್ತ ಕೃಷಿಯೂ ಹಾಗೇ ಅಡಿಕೆಯಲ್ಲಾದರೆ ಹಿಂಗಾರ ಬಿಟ್ಟು ಸುವಾಸನೆ ಬೀರುತ್ತಿದೆ , ದುಂಬಿಗಳನ್ನು ಪರಾಗಸ್ಪರ್ಶಕ್ಕೆ ಆಕರ್ಷಿಸುತ್ತಿದೆ , ಇಲ್ಲಿ ಗದ್ದೆ ನೋಡಿ ಎಲ್ಲವೂ ಸಿದ್ದವಾಗಿದೆ ಕಟಾವಾಗುವುದಕ್ಕೆ ಕಾದುನಿಂತಿದೆ, ಇದೆಲ್ಲದರ ಜೊತೆಗೆ ಚಳಿಯೂ ಸಾತ್ ನೀಡುತ್ತದೆ. ಈ ನಡುವೆ ಬೀಸುವ ತಂಗಾಳಿ. ಇದನ್ನು ನಮ್ಮೂರ ಜನ ಫಲ ಗಾಳಿ ಅಂತಾನೇ ಕರೀತಾರೆ.ಯಾಕಂದ್ರೆ ಇದರಿಂದಾಗಿಯೇ ಕಾಯಿ ಕಟ್ಟುವುದೂ ಇದೆ.ಹೀಗೇ ಭುವಿಯ ಒಡಲೊಳಗೆ ಅದರದ್ದೇ ಆದ ಸೃಷ್ಠಿಯ ತತ್ವಗಳು ಕಾಣಿಸುತ್ತವೆ. ಆದರೆ ಮಾನವರಾದ ನಾವು ಈ ಪ್ರಕೃತಿಯೊಂದಿಗೆ ಎಷ್ಟೇ ಬಡಿದಾಡಿದರೂ ಅವಳು ಮಾತ್ರಾ ಸಹಿಸಿಕೊಂಡಾದ್ದಾಳೆ. ಯಾಕೆಂದರೆ ಅವಳು ಮಾತೆ. .!. ಈ ಮಾತೆಯೊಂದಿಗೆ ಜಗಳವಾಡುವುದನ್ನು ಕೆಲ ದಿನವಾದರೂ ನಿಲ್ಲಿಸಬೇಡವೇ.ಹಾಗಾದರೆ ಯಾವಾಗ. ಅವಳು ರಜಸ್ವಲೆಯಾದ ದಿನ. ಈಗ ಅವಳು ರಜಸ್ವಲೆ. ತಿಂಗಳ ಮುಟ್ಟು. ಹಾಗಾಗಿ ಅವಳಿಗೆ ವಿಶ್ರಾಂತಿ ಬೇಕು.ನಾವು ಜಗಳವನ್ನು ಈ 3 ದಿನ ನಿಲ್ಲಿಸಲೇಬೇಕು. ಅದಕ್ಕಾಗಿ ನಮ್ಮೂರಿನ ಜನ ಇದನ್ನು ಕೆಡ್ಡಾಸ ಎಂಬ ಆಚರಣೆಯ ಮೂಲಕ ಮೂರು ದಿನ ಭೂಮಾತೆಯ ಪೂಜೆ ಮಾಡುತ್ತಾರೆ.ಯಾವೊಂದು ಕೆಲಸವೂ ಮಾಡುವುದಿಲ್ಲ.
ವರ್ಷ ಪೂರ್ತಿ ಭೂಮಿಯೊಂದಿಗೆ ದುಡಿದು,ಸರಸವಾಡಿ ಈಗ ಭೂಮಿಯನ್ನು ಅರಾಧಿಸುವ ಒಂದು ವಿಶಿಷ್ಠ ಆಚರಣೆಯೇ ಈ ಕೆಡ್ಡಾಸ.ಈ ತುಳುನಾಡು ತನ್ನದೇ ಆದ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದೆ.ಇಲ್ಲಿನ ಆಚರಣೆಗಳೆಲ್ಲವೂ ವಿಶಿಷ್ಠವಾಗಿದೆ ಮತ್ತು
ಅದರ ಹಿಂದೆ ಒಂದು ವೈಜ್ಞಾನಿಕ,ಭಾವನಾತ್ಮಕ ಸಂಬಂಧಗಳೂ ಇರುತ್ತದೆ.ಇಲ್ಲಿ ಸಾಮಾನ್ಯವಾಗಿ ಸಾಮೂಹಿಕವಾದ ಹಬ್ಬಗಳ ಆಚರಣೆಗಳೇ ಹೆಚ್ಚು ಪ್ರತಿಬಿಂಬಿತವಾಗುತ್ತದೆ.ಹೆಚ್ಚ ಆಪ್ಯಾಯಮಾನವಾಗುತ್ತದೆ. ಮಾತ್ರವಲ್ಲ ಎಲ್ಲಾ ಆಚರಣೆಗಳೂ ಕೃಷಿ ಹಾಗೂ ಬೇಸಾಯದ ಮತ್ತು ಪ್ರಕೃತಿ ಮೂಲದಿಂದ ಬಂದ ಆಚರಣೆಗಳೇ ಆಗಿದೆ.ಭೂಮಿಯನ್ನು ಹೆಣ್ಣೆಂದು ಕಂಡು ಅವಳಿಗೆ ಪೂಜೆ ಮಾಡುವ ಸಂಪ್ರದಾಯ ಇಲ್ಲೂ ಇದೆ. ಈಗ ಅವಳು ಋತುಮತಿಯಾಗುತ್ತಾಳೆ ಅದಾದ ಬಳಿಕ 3 ಅಥವಾ 4 ದಿನಗಳ ಕಾಲ ಅವಳು ಮೈಲಿಗೆಯಲ್ಲಿರುತ್ತಾಳೆ ನಂತರ ಪರಿಶುದ್ಧಳಾಗುತ್ತಾಳೆ ಎಂಬುದನ್ನು ಈ ಆಚರಣೆ ಪ್ರತಿಬಿಂಬಿಸುತ್ತದೆ. ಹೆಣ್ಣು ಋತುಮತಿಯಾಗುವುದು ಎಂದರೆ ಸೃಷ್ಠಿ ಕ್ರಿಯೆಗೆ ಅಣಿಯಾಗುವುದು ಎಂದಾದರೆ ಭೂಮಿ ಯಾವ ಸೃಷ್ಠಿ ಕ್ರಿಯೆಗೆ ಅಣಿಯಾಗುತ್ತಾಳೆ ಎಂಬುದು ಕೂಡಾ ಈ ಆಚರಣೆಯಿಂದ ತಿಳಿಯುತ್ತದೆ.ಶರದೃತುವಿನಲ್ಲಿ ಸಸ್ಯಶ್ಯಾಮಲೆಯಾಗಿ ಕಾಣುವ ಇಳೆ ನಂತರ ಮಾಸದಲ್ಲಿ ತನ್ನೆಲ್ಲಾ ಎಲೆಗಳನ್ನು ಉದುರಿಸಿ ಕೊಂಡು ಬೋಳು ಬೋಳಾಗಿ ಪ್ರಕೃತಿ ಕಾಣುತ್ತದೆ ನೋಡುವುದಕ್ಕೆ ಬಂಜೆಯಾಗುತ್ತಾಳೆ. ಮತ್ತೆ ವಸಂತ ಮಾಸ ಬಂದಾಗ ಹಸಿರು ಹಸಿರಾಗಿ ಭೂಮಿ ಸೊಂಪಾಗಿ ಕಾಣುತ್ತದೆ.ಅನೇಕ ಬದಲಾವಣೆಗಳು ಆಗುತ್ತವೆ.ಈ ವೈಜ್ಞಾನಿಕ ಬದಲಾವಣೆಗಳನ್ನು ತನಗೆ ಬದಲಾಯಿಸಲು ಆಗದೆ ,ವಿಚಿತ್ರವನ್ನು ಅರಿಯಲು ಸಾಧ್ಯವಾಗದೇ ಇದ್ದಾಗ ತನ್ನದೇ ಆದ ರೀತಿಯಲ್ಲಿ ಕಲ್ಪಸಿಕೊಂಡ ಮನುಷ್ಯ ಭೂಮಿಗೂ ಕಲ್ಪನೆಗಳನ್ನು ಮಾಡಿಕೊಂಡ. ಅದಕ್ಕನುಗುಣವಾಗಿ ಋತುಶಾಂತಿ ಇತ್ಯಾದಿಗಳು ನಡೆಯಬೇಕು ಎಂದು ಕಲ್ಪಸಿಕೊಂಡು ಇಂತಹ ಆಚರಣೆಗಳನ್ನು ಬೆಳೆಸಿಕೊಂಡು ಬಂದಿದೆ.

ಜನವರಿ - ಫೆಬ್ರವರಿ ತಿಂಗಳಲ್ಲಿ ಗಿಡಮರಗಳು ಎಲೆಗಳನು ಉದುರಿಸಿ ಬೋಳಾಗಿ ಕಾಣುತ್ತದೆ.ಇದು ಭೂಮಿ ತಾಯಿಯ ಮುಟ್ಟಿನ ದಿನ ಎಂದು ನಂಬಿದ ಜನ ಈ ಅವಧಿಯಲ್ಲಿ ಲೆಕ್ಕ ಹಾಕಿ ಸಂಕ್ರಮಣದ ಸಮೀಪದ 3 ಅಥವಾ 4 ದಿನಗಳ ಕಾಲ ಮುಟ್ಟಿನ ದಿನವೆಂದು ತುಳುವರು ಕರೆದರು. ಈ ಕಾಲವನ್ನು ಕೆಡ್ಡಾಸ ಎಂಬುದಾಗಿ ಕರೆದರು.ಈ ದಿನಗಳಲ್ಲಿ ಭೂಮಿ ಅದುರಬಾರದು, ಹಸಿ ಗಿಡಗಳನ್ನು ಕಡಿಯಬಾರದು ಒಣ ಮರಗಳನ್ನು ತುಂಡರಿಸಬಾರದು , ಬೇಟೆಗೆ ಹೋಗಬೇಕು. ಒಟ್ಟಿನಲ್ಲಿ ಭೂಮಿಯನ್ನು ಯಾವುದೇ ರೀತಿಯಿಂದ ಹಾನಿ ಮಾಡಬಾರದು ಎನ್ನವುದು ಇವರ ಸಾರಾಂಶ. ಕೆಡ್ಡಾಸದ ಒಂದನೇ ದಿನದಂದು ಮನೆ ಆವರಣಗಳನು ಸ್ವಚ್ಚಗೊಳಿಸಿ ಅಕ್ಕಿಯಿಂದ ಮಾಡಿದ ತಿಂಡಿಯನ್ನು ತಯಾರಿಸುತ್ತಾರೆ.ಇದಕ್ಕೆ 7 ಬಗೆಯ ಧಾನ್ಯವನ್ನು ಬೆರೆಸಲಾಗುತ್ತದೆ.ಈ ತಿಂಡಿಯನನು ನನ್ಯರಿ ಅಥವಾ ತಂಬಿಟ್ಟು ಎಂದು ಕೆರೆಯಲಾಗುತ್ತದೆ. ಏಕೆಂದರೆ ಹೆಣ್ಣು ರಜಸ್ವಲೆಯಾದಾಗ ಅವಳಗೆ ಪೌಷ್ಠಿಕಾಂಶವುಳ್ಳ ಆಹಾರ ಬೇಕು ಎನ್ನುವುದರ ಸಂಕೇತವಿದು.
ಕೆಡ್ಡಸದ 3 ಅಥವಾ 4ನೇ ದಿನ ಭೂಮಿ ತಾಯಿಯ ಆರಾಧನೆಗೆ ಮೀಸಲಿಟ್ಟ ಜಾಗದಲ್ಲಿ ಅಂದರೆ ತುಳಸಿ ಕಟ್ಟೆಯ ಬಳಿಯಲ್ಲಿ ವಿವಿಧ ಜಾತಿಯ ಮರಗಳ 7 ಎಲೆಗಳನ್ನು ಇರಿಸಿ ಭೂಮಿ ತಾಯಿ ಪರಿಶುದ್ದಳಾಗಲು ಅರಶಿನ , ಕುಂಕುಮ, ಹಾಲು,ಇತ್ಯಾದಿಗಳನ್ನು 5 ಅಥವಾ 7 ಮಂದಿ ಮುತ್ತೈದೆಯರು ಭೂಮಿಗೆ ಪ್ರೋಕ್ಷಣೆ ಮಾಡುತ್ತಾರೆ.ನಂತರ ನಮಸ್ಕರಿಸಿ ಎಲ್ಲರೂ ಒಟ್ಟಿಗೆ ಸೇರಿ ಊಟ ಉಪಹಾರಗಳನ್ನು ಮಾಡುತ್ತಾರೆ.
ಹೀಗೆ ಒಂದು ಸೃಷ್ಠಿ ಕ್ರಿಯೆಯ ಮೊದಲ ಭಾಗವನ್ನು ಭುವಿಯಲ್ಲೂ ಕಾಣುವ ಈ ಸಂಪ್ರದಾಯವು ಅತ್ಯಂತ ವಿಶಿಷ್ಠವಾಗಿ ಕಾಣುತ್ತದೆ.ತುಳು ನಾಡಿನ ಬಹುತೇಕ ಆಚರಣೆಗಳೆಲ್ಲವೂ ಕೃಷಿಯನ್ನು ಅವಲಂಬಿಸಿಕೊಂಡೇ ಇರುತ್ತದೆ.ಅಂದರೆ ಭೂಮಿ ವರ್ಷಕ್ಕೊಮ್ಮೆ ಋತುಮತಿಯಾದರೆ ಪ್ರಕೃತಿಗೆ ವರ್ಷಕ್ಕೊಮ್ಮೆ ಹಸಿರು ಜೀವ.
ಈಗ ಮತ್ತೆ ಪ್ರಕೃತಿ ಹಸಿರು ಹಸಿರಾಗಿ, ಮುಂಜಾನೆಯ ಮುಂಜಾವಿಗೆ ಮೈಯೊಡ್ಡಿ ನಿಂತಿದ್ದಾಳೆ .ಈ ಸೊಬಗ ಆಸ್ವಾದಿಸಲು , ಅದನ್ನು ಸ್ವಾಗತಿಸಲು ಮಂದಿಯೆಲ್ಲ ಕಾತರರಾಗಿದ್ದಾರೆ ಎನ್ನಬಹುದು. ಇನ್ನೊಂದೆಡ ಮುಂದಿನ ತಿಂಗಳು ರೈತನ ಬೆಳೆಗಳೆಲ್ಲಾ ಕಟಾವಿಗೆ ಸಿದ್ದವಾಗುತ್ತದೆ. ಮಾತ್ರವಲ್ಲ ವರ್ಷಪೂರ್ತಿ ಭೂಮಿಗೆ ನೋವು ಕೊಡುತ್ತಿದ್ದರೆ ಈ ೪ ದಿನಗಳ ಕಾಲ ಭೂಮಿಯನ್ನು ನೆನೆಯಲು ಈ ಆಚರಣೆ ಎನ್ನಬಹುದು. ರಾಜ್ಯದ ವಿವಿದೆಡೆ ಇಂತಹ ಆಚರಣೆಯಿದೆ.. ಇದೆಲ್ಲವೂ ಕೂಡಾ ಪ್ರಕೃತಿ ಮತ್ತು ಕೃಷಿಯನ್ನು ಅವಲಂಬಿಸಿಕೊಂಡಿದೆ ಎಂಬುದು ಗಮನಾರ್ಹ. ಆದರೆ ಇಂದು ಅಂತಹ ಶ್ರೇಷ್ಠವಾದ ಕೃಷಿಯ ಏನಾಗಿದೆ.? ರೈತರ ಸ್ಥಿತಿ ಏನಾಗಿದೆ.? ಬೇಸಾಯ ಇತ್ಯಾದಿಗಳ ಬದಲು ವಾಣಿಜ್ಯ ಬೆಳೆಗಳು ಬಂದಿದೆ.
ಇದರ ಜೊತೆ ಜೊತೆಗೇ ಈ ಬಾರಿ ಕೃಷಿ ಬಜೆಟ್ ಕೂಡಾ ಇದೆಯಂತೆ. ಹಾಗಾಗಿ ಈ ಬಾರಿ ಭುವಿಗೆ ಗರ್ಭಪಾತವಾಗುತ್ತೋ , ಗಂಡು ಮಗುವಾಗುತ್ತೋ , ಹೆಣ್ಣು ಮಗುವಾಗುತ್ತೋ ಅಥವಾ ಬಂಜೆಯಾಗುತ್ತೋ ನೋಡಬೇಕು.
ಎಲ್ಲೆಡೆ ಮೌನ ಆವರಿಸಿದೆ. ಭೂಮಿಗೆ ಕಾಲಿಡುವುದಕ್ಕೂ ಈಗ ಹಿಂಜರಿಕೆ.ಎಲ್ಲಿ ಅವಳಿಗೆ ನೋವಾಗುತ್ತದೋ ಅನ್ನೋ ಭಾವ.ಎಂತಹ ಪ್ರೀತಿಯ ಭಾವ ಅದು !.
ಈಗ ಭೂಮಿಯ ಕಡೆಗೆ ಒಮ್ಮೆ ನೋಡಿ. ಮೊನ್ನೆ ಮೊನ್ನೆ ಬರಡು ಬರಡಾಗಿದ್ದ ಮರಗಳೆಲ್ಲಾ ಮತ್ತೆ ಚಿಗುರಿ ನಿಂತಿದೆ.ಮಾಮರವೆಲ್ಲಾ ಹೂ ಬಿಟ್ಟು ಕಾಯಿ ಕಟ್ಟಿಕೊಳ್ಳುವುದಕ್ಕೆ ಸಿದ್ದವಾಗುತ್ತಿದೆ , ಅಂದರೆ ಗರ್ಭವತಿಯಾಗುವುದಕ್ಕೆ ಅಣಿಯಾಗುತ್ತಿದೆ , ಇತ್ತ ಕೃಷಿಯೂ ಹಾಗೇ ಅಡಿಕೆಯಲ್ಲಾದರೆ ಹಿಂಗಾರ ಬಿಟ್ಟು ಸುವಾಸನೆ ಬೀರುತ್ತಿದೆ , ದುಂಬಿಗಳನ್ನು ಪರಾಗಸ್ಪರ್ಶಕ್ಕೆ ಆಕರ್ಷಿಸುತ್ತಿದೆ , ಇಲ್ಲಿ ಗದ್ದೆ ನೋಡಿ ಎಲ್ಲವೂ ಸಿದ್ದವಾಗಿದೆ ಕಟಾವಾಗುವುದಕ್ಕೆ ಕಾದುನಿಂತಿದೆ, ಇದೆಲ್ಲದರ ಜೊತೆಗೆ ಚಳಿಯೂ ಸಾತ್ ನೀಡುತ್ತದೆ. ಈ ನಡುವೆ ಬೀಸುವ ತಂಗಾಳಿ. ಇದನ್ನು ನಮ್ಮೂರ ಜನ ಫಲ ಗಾಳಿ ಅಂತಾನೇ ಕರೀತಾರೆ.ಯಾಕಂದ್ರೆ ಇದರಿಂದಾಗಿಯೇ ಕಾಯಿ ಕಟ್ಟುವುದೂ ಇದೆ.ಹೀಗೇ ಭುವಿಯ ಒಡಲೊಳಗೆ ಅದರದ್ದೇ ಆದ ಸೃಷ್ಠಿಯ ತತ್ವಗಳು ಕಾಣಿಸುತ್ತವೆ. ಆದರೆ ಮಾನವರಾದ ನಾವು ಈ ಪ್ರಕೃತಿಯೊಂದಿಗೆ ಎಷ್ಟೇ ಬಡಿದಾಡಿದರೂ ಅವಳು ಮಾತ್ರಾ ಸಹಿಸಿಕೊಂಡಾದ್ದಾಳೆ. ಯಾಕೆಂದರೆ ಅವಳು ಮಾತೆ. .!. ಈ ಮಾತೆಯೊಂದಿಗೆ ಜಗಳವಾಡುವುದನ್ನು ಕೆಲ ದಿನವಾದರೂ ನಿಲ್ಲಿಸಬೇಡವೇ.ಹಾಗಾದರೆ ಯಾವಾಗ. ಅವಳು ರಜಸ್ವಲೆಯಾದ ದಿನ. ಈಗ ಅವಳು ರಜಸ್ವಲೆ. ತಿಂಗಳ ಮುಟ್ಟು. ಹಾಗಾಗಿ ಅವಳಿಗೆ ವಿಶ್ರಾಂತಿ ಬೇಕು.ನಾವು ಜಗಳವನ್ನು ಈ 3 ದಿನ ನಿಲ್ಲಿಸಲೇಬೇಕು. ಅದಕ್ಕಾಗಿ ನಮ್ಮೂರಿನ ಜನ ಇದನ್ನು ಕೆಡ್ಡಾಸ ಎಂಬ ಆಚರಣೆಯ ಮೂಲಕ ಮೂರು ದಿನ ಭೂಮಾತೆಯ ಪೂಜೆ ಮಾಡುತ್ತಾರೆ.ಯಾವೊಂದು ಕೆಲಸವೂ ಮಾಡುವುದಿಲ್ಲ.
ವರ್ಷ ಪೂರ್ತಿ ಭೂಮಿಯೊಂದಿಗೆ ದುಡಿದು,ಸರಸವಾಡಿ ಈಗ ಭೂಮಿಯನ್ನು ಅರಾಧಿಸುವ ಒಂದು ವಿಶಿಷ್ಠ ಆಚರಣೆಯೇ ಈ ಕೆಡ್ಡಾಸ.ಈ ತುಳುನಾಡು ತನ್ನದೇ ಆದ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದೆ.ಇಲ್ಲಿನ ಆಚರಣೆಗಳೆಲ್ಲವೂ ವಿಶಿಷ್ಠವಾಗಿದೆ ಮತ್ತು
ಅದರ ಹಿಂದೆ ಒಂದು ವೈಜ್ಞಾನಿಕ,ಭಾವನಾತ್ಮಕ ಸಂಬಂಧಗಳೂ ಇರುತ್ತದೆ.ಇಲ್ಲಿ ಸಾಮಾನ್ಯವಾಗಿ ಸಾಮೂಹಿಕವಾದ ಹಬ್ಬಗಳ ಆಚರಣೆಗಳೇ ಹೆಚ್ಚು ಪ್ರತಿಬಿಂಬಿತವಾಗುತ್ತದೆ.ಹೆಚ್ಚ ಆಪ್ಯಾಯಮಾನವಾಗುತ್ತದೆ. ಮಾತ್ರವಲ್ಲ ಎಲ್ಲಾ ಆಚರಣೆಗಳೂ ಕೃಷಿ ಹಾಗೂ ಬೇಸಾಯದ ಮತ್ತು ಪ್ರಕೃತಿ ಮೂಲದಿಂದ ಬಂದ ಆಚರಣೆಗಳೇ ಆಗಿದೆ.ಭೂಮಿಯನ್ನು ಹೆಣ್ಣೆಂದು ಕಂಡು ಅವಳಿಗೆ ಪೂಜೆ ಮಾಡುವ ಸಂಪ್ರದಾಯ ಇಲ್ಲೂ ಇದೆ. ಈಗ ಅವಳು ಋತುಮತಿಯಾಗುತ್ತಾಳೆ ಅದಾದ ಬಳಿಕ 3 ಅಥವಾ 4 ದಿನಗಳ ಕಾಲ ಅವಳು ಮೈಲಿಗೆಯಲ್ಲಿರುತ್ತಾಳೆ ನಂತರ ಪರಿಶುದ್ಧಳಾಗುತ್ತಾಳೆ ಎಂಬುದನ್ನು ಈ ಆಚರಣೆ ಪ್ರತಿಬಿಂಬಿಸುತ್ತದೆ. ಹೆಣ್ಣು ಋತುಮತಿಯಾಗುವುದು ಎಂದರೆ ಸೃಷ್ಠಿ ಕ್ರಿಯೆಗೆ ಅಣಿಯಾಗುವುದು ಎಂದಾದರೆ ಭೂಮಿ ಯಾವ ಸೃಷ್ಠಿ ಕ್ರಿಯೆಗೆ ಅಣಿಯಾಗುತ್ತಾಳೆ ಎಂಬುದು ಕೂಡಾ ಈ ಆಚರಣೆಯಿಂದ ತಿಳಿಯುತ್ತದೆ.ಶರದೃತುವಿನಲ್ಲಿ ಸಸ್ಯಶ್ಯಾಮಲೆಯಾಗಿ ಕಾಣುವ ಇಳೆ ನಂತರ ಮಾಸದಲ್ಲಿ ತನ್ನೆಲ್ಲಾ ಎಲೆಗಳನ್ನು ಉದುರಿಸಿ ಕೊಂಡು ಬೋಳು ಬೋಳಾಗಿ ಪ್ರಕೃತಿ ಕಾಣುತ್ತದೆ ನೋಡುವುದಕ್ಕೆ ಬಂಜೆಯಾಗುತ್ತಾಳೆ. ಮತ್ತೆ ವಸಂತ ಮಾಸ ಬಂದಾಗ ಹಸಿರು ಹಸಿರಾಗಿ ಭೂಮಿ ಸೊಂಪಾಗಿ ಕಾಣುತ್ತದೆ.ಅನೇಕ ಬದಲಾವಣೆಗಳು ಆಗುತ್ತವೆ.ಈ ವೈಜ್ಞಾನಿಕ ಬದಲಾವಣೆಗಳನ್ನು ತನಗೆ ಬದಲಾಯಿಸಲು ಆಗದೆ ,ವಿಚಿತ್ರವನ್ನು ಅರಿಯಲು ಸಾಧ್ಯವಾಗದೇ ಇದ್ದಾಗ ತನ್ನದೇ ಆದ ರೀತಿಯಲ್ಲಿ ಕಲ್ಪಸಿಕೊಂಡ ಮನುಷ್ಯ ಭೂಮಿಗೂ ಕಲ್ಪನೆಗಳನ್ನು ಮಾಡಿಕೊಂಡ. ಅದಕ್ಕನುಗುಣವಾಗಿ ಋತುಶಾಂತಿ ಇತ್ಯಾದಿಗಳು ನಡೆಯಬೇಕು ಎಂದು ಕಲ್ಪಸಿಕೊಂಡು ಇಂತಹ ಆಚರಣೆಗಳನ್ನು ಬೆಳೆಸಿಕೊಂಡು ಬಂದಿದೆ.

ಜನವರಿ - ಫೆಬ್ರವರಿ ತಿಂಗಳಲ್ಲಿ ಗಿಡಮರಗಳು ಎಲೆಗಳನು ಉದುರಿಸಿ ಬೋಳಾಗಿ ಕಾಣುತ್ತದೆ.ಇದು ಭೂಮಿ ತಾಯಿಯ ಮುಟ್ಟಿನ ದಿನ ಎಂದು ನಂಬಿದ ಜನ ಈ ಅವಧಿಯಲ್ಲಿ ಲೆಕ್ಕ ಹಾಕಿ ಸಂಕ್ರಮಣದ ಸಮೀಪದ 3 ಅಥವಾ 4 ದಿನಗಳ ಕಾಲ ಮುಟ್ಟಿನ ದಿನವೆಂದು ತುಳುವರು ಕರೆದರು. ಈ ಕಾಲವನ್ನು ಕೆಡ್ಡಾಸ ಎಂಬುದಾಗಿ ಕರೆದರು.ಈ ದಿನಗಳಲ್ಲಿ ಭೂಮಿ ಅದುರಬಾರದು, ಹಸಿ ಗಿಡಗಳನ್ನು ಕಡಿಯಬಾರದು ಒಣ ಮರಗಳನ್ನು ತುಂಡರಿಸಬಾರದು , ಬೇಟೆಗೆ ಹೋಗಬೇಕು. ಒಟ್ಟಿನಲ್ಲಿ ಭೂಮಿಯನ್ನು ಯಾವುದೇ ರೀತಿಯಿಂದ ಹಾನಿ ಮಾಡಬಾರದು ಎನ್ನವುದು ಇವರ ಸಾರಾಂಶ. ಕೆಡ್ಡಾಸದ ಒಂದನೇ ದಿನದಂದು ಮನೆ ಆವರಣಗಳನು ಸ್ವಚ್ಚಗೊಳಿಸಿ ಅಕ್ಕಿಯಿಂದ ಮಾಡಿದ ತಿಂಡಿಯನ್ನು ತಯಾರಿಸುತ್ತಾರೆ.ಇದಕ್ಕೆ 7 ಬಗೆಯ ಧಾನ್ಯವನ್ನು ಬೆರೆಸಲಾಗುತ್ತದೆ.ಈ ತಿಂಡಿಯನನು ನನ್ಯರಿ ಅಥವಾ ತಂಬಿಟ್ಟು ಎಂದು ಕೆರೆಯಲಾಗುತ್ತದೆ. ಏಕೆಂದರೆ ಹೆಣ್ಣು ರಜಸ್ವಲೆಯಾದಾಗ ಅವಳಗೆ ಪೌಷ್ಠಿಕಾಂಶವುಳ್ಳ ಆಹಾರ ಬೇಕು ಎನ್ನುವುದರ ಸಂಕೇತವಿದು.
ಕೆಡ್ಡಸದ 3 ಅಥವಾ 4ನೇ ದಿನ ಭೂಮಿ ತಾಯಿಯ ಆರಾಧನೆಗೆ ಮೀಸಲಿಟ್ಟ ಜಾಗದಲ್ಲಿ ಅಂದರೆ ತುಳಸಿ ಕಟ್ಟೆಯ ಬಳಿಯಲ್ಲಿ ವಿವಿಧ ಜಾತಿಯ ಮರಗಳ 7 ಎಲೆಗಳನ್ನು ಇರಿಸಿ ಭೂಮಿ ತಾಯಿ ಪರಿಶುದ್ದಳಾಗಲು ಅರಶಿನ , ಕುಂಕುಮ, ಹಾಲು,ಇತ್ಯಾದಿಗಳನ್ನು 5 ಅಥವಾ 7 ಮಂದಿ ಮುತ್ತೈದೆಯರು ಭೂಮಿಗೆ ಪ್ರೋಕ್ಷಣೆ ಮಾಡುತ್ತಾರೆ.ನಂತರ ನಮಸ್ಕರಿಸಿ ಎಲ್ಲರೂ ಒಟ್ಟಿಗೆ ಸೇರಿ ಊಟ ಉಪಹಾರಗಳನ್ನು ಮಾಡುತ್ತಾರೆ.
ಹೀಗೆ ಒಂದು ಸೃಷ್ಠಿ ಕ್ರಿಯೆಯ ಮೊದಲ ಭಾಗವನ್ನು ಭುವಿಯಲ್ಲೂ ಕಾಣುವ ಈ ಸಂಪ್ರದಾಯವು ಅತ್ಯಂತ ವಿಶಿಷ್ಠವಾಗಿ ಕಾಣುತ್ತದೆ.ತುಳು ನಾಡಿನ ಬಹುತೇಕ ಆಚರಣೆಗಳೆಲ್ಲವೂ ಕೃಷಿಯನ್ನು ಅವಲಂಬಿಸಿಕೊಂಡೇ ಇರುತ್ತದೆ.ಅಂದರೆ ಭೂಮಿ ವರ್ಷಕ್ಕೊಮ್ಮೆ ಋತುಮತಿಯಾದರೆ ಪ್ರಕೃತಿಗೆ ವರ್ಷಕ್ಕೊಮ್ಮೆ ಹಸಿರು ಜೀವ.
ಈಗ ಮತ್ತೆ ಪ್ರಕೃತಿ ಹಸಿರು ಹಸಿರಾಗಿ, ಮುಂಜಾನೆಯ ಮುಂಜಾವಿಗೆ ಮೈಯೊಡ್ಡಿ ನಿಂತಿದ್ದಾಳೆ .ಈ ಸೊಬಗ ಆಸ್ವಾದಿಸಲು , ಅದನ್ನು ಸ್ವಾಗತಿಸಲು ಮಂದಿಯೆಲ್ಲ ಕಾತರರಾಗಿದ್ದಾರೆ ಎನ್ನಬಹುದು. ಇನ್ನೊಂದೆಡ ಮುಂದಿನ ತಿಂಗಳು ರೈತನ ಬೆಳೆಗಳೆಲ್ಲಾ ಕಟಾವಿಗೆ ಸಿದ್ದವಾಗುತ್ತದೆ. ಮಾತ್ರವಲ್ಲ ವರ್ಷಪೂರ್ತಿ ಭೂಮಿಗೆ ನೋವು ಕೊಡುತ್ತಿದ್ದರೆ ಈ ೪ ದಿನಗಳ ಕಾಲ ಭೂಮಿಯನ್ನು ನೆನೆಯಲು ಈ ಆಚರಣೆ ಎನ್ನಬಹುದು. ರಾಜ್ಯದ ವಿವಿದೆಡೆ ಇಂತಹ ಆಚರಣೆಯಿದೆ.. ಇದೆಲ್ಲವೂ ಕೂಡಾ ಪ್ರಕೃತಿ ಮತ್ತು ಕೃಷಿಯನ್ನು ಅವಲಂಬಿಸಿಕೊಂಡಿದೆ ಎಂಬುದು ಗಮನಾರ್ಹ. ಆದರೆ ಇಂದು ಅಂತಹ ಶ್ರೇಷ್ಠವಾದ ಕೃಷಿಯ ಏನಾಗಿದೆ.? ರೈತರ ಸ್ಥಿತಿ ಏನಾಗಿದೆ.? ಬೇಸಾಯ ಇತ್ಯಾದಿಗಳ ಬದಲು ವಾಣಿಜ್ಯ ಬೆಳೆಗಳು ಬಂದಿದೆ.
ಇದರ ಜೊತೆ ಜೊತೆಗೇ ಈ ಬಾರಿ ಕೃಷಿ ಬಜೆಟ್ ಕೂಡಾ ಇದೆಯಂತೆ. ಹಾಗಾಗಿ ಈ ಬಾರಿ ಭುವಿಗೆ ಗರ್ಭಪಾತವಾಗುತ್ತೋ , ಗಂಡು ಮಗುವಾಗುತ್ತೋ , ಹೆಣ್ಣು ಮಗುವಾಗುತ್ತೋ ಅಥವಾ ಬಂಜೆಯಾಗುತ್ತೋ ನೋಡಬೇಕು.
04 ಫೆಬ್ರವರಿ 2011
ಪವರ್ ಫುಲ್ ಕರ್ನಾಟಕ
ಗ್ರಾಮೀಣ ಕರ್ನಾಟಕ ಈಗ “ಪವರ್” ಫುಲ್.. !, ಆದರೆ ಯಾರೊಬ್ಬರೂ ಈ ಬಗ್ಗೆ ಮಾತನಾಡುತ್ತಿಲ್ಲ. ಈ ಶಕ್ತಿ ಹೇಗೆ ಬಂತು ಅಂತ ಗ್ರಾಮೀಣ ಜನ ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಗ್ರಾಮೀಣ ಕರ್ನಾಟಕ ಹೇಗೆ ಪವರ್ ಫುಲ್ ಅಂತೀರಾ. ಇಲ್ಲಿ ಈಗ ನಿರಂತರ ಪವರ್ ಇದೆ. ಹಳ್ಳಿ ಜನರಿಗೆ ಖುಷಿ ಇದೆ.
ಗ್ರಾಮೀಣ ಕರ್ನಾಟಕದಲ್ಲಿ ಒಂದು ಕಾಲವಿತ್ತು. ಬೆಳಗ್ಗೆ ಹೋದ ಪವರ್ ಬರೋದೇ ಸಂಜೆ ಇನ್ನೆಷ್ಟೊತ್ತಿಗೋ. ಶಾಲಾ ಮಕ್ಕಳಿಗೆ , ಗೃಹಿಣಿಯರಿಗೆ ತಲೆನೋವೇ ತಲೆ ನೋವು.ಆದ್ರೆ ಹೇಳೋದು ಯಾರಲ್ಲಿ. ಒಂದಷ್ಟು ಪತ್ರಿಕೆಗಳಲ್ಲಿ ವರದಿಗಳೂ , ಇನ್ನೊಂದಿಷ್ಟು ಪ್ರತಿಭಟನೆಗಳು ನಡೆದರೆ ಮುಗೀತು.ಪವರ್ ಪ್ರೋಬ್ಲೆಮ್ ಮುಗೀಲೇ ಇಲ್ಲ. ಅದಕ್ಕಿಂತಲೂ ಹೆಚ್ಚು ಕೃಷಿಕರು ಪಡೋ ಸಂಕಷ್ಠ ಒಂದಲ್ಲ ಹಲವಾರು. ತೋಟಕ್ಕೆ ನೀರುಣಿಸಲು ರಾತ್ರಿ ಹಗಲು ಶ್ರಮ ಪಡಬೇಕು. ಪವರ್ ಬಂದರೂ ಪಂಪ್ ಚಾಲೂ ಆಗೋದಿಲ್ಲ.ಆದರೂ ವಿಧಿಯಿಲ್ಲ ಕಾದು ಕುಳಿತಾದರೂ ಚಾಲೂ ಮಾಡಲೇ ಬೇಕು.ಅಲ್ಲೂ ಕಾಂಪಿಟೀಶನ್ ಇರ್ತಿತ್ತು. ಪವರ್ ಬಂದಾಗಲೇ ಪಂಪ್ ಚಾಲೂ ಆದರೆ ಮುಗೀತು . ಇಲ್ಲಾಂದ್ರೆ ವೋಲ್ಟೇಜ್ ಪ್ರಾಬ್ಲಂನಿಂದಾಗಿ ಚಾಲೂ ಆಗೋದಿಲ್ಲ. ತುಂಬಾ ವೋಲ್ಟೇಜ್ ಕಡಿಮೆ ಆದ್ರೆ ಲೈನ್ ಟ್ರಿಪ್ ಆಗುತ್ತೆ. ಮತ್ತೆ ಐದೋ ಹತ್ತೋ ನಿಮಿಷ ಕಳೆದು ಪವರ್ ಬರೋದು. ಆಗಲೂ ಇದೇ ಸಮಸ್ಯೆ. ಹೀಗೆ ಒಂದೇ ಎರಡೇ ಹತ್ತಾರು ಸಮಸ್ಯೆ ಗ್ರಾಮೀಣ ಕರ್ನಾಟಕದಲ್ಲಿ.
ಆದರೆ ಈ ಬಾರಿ ಸ್ವಲ್ಪ ಸುಧಾರಿಸಿದಂತೆ ಕಾಣುತ್ತೆ. ಯಾಕೆಂದರೆ ಅಂದೆಲ್ಲಾ ನವೆಂಬರ್ ಅಂತ್ಯ , ಡಿಸೆಂಬರ್ನಲ್ಲಿಯೇ ಪವರ್ ಕಟ್ ಶುರುವಾಗುತ್ತಿತ್ತು. ಹೀಗಾಗಿ ಮಾರ್ಚ್ ವೇಳೆಗೆ ಪರಿಸ್ಥಿತಿ ತೀರಾ ಕಠಿಣವಾಗುತ್ತಿತ್ತು.ಆದರೆ ಈ ಬಾರಿ ಹಾಗೆ ಕಾಣುತ್ತಿಲ್ಲ. ಫೆಬ್ರವರಿ ಆರಂಭವಾದರೂ ದಿನ ಪೂರ್ತಿ ಪವರ್ ಇದೆ. ಅದರಲ್ಲಿ 12 ಗಂಟೆ ಕೃಷಿಕರಿಗಾಗಿ ತ್ರೀ ಫೇಸ್ ಇದೆ. ಉಳಿದಂತೆ 12 ಗಂಟೆ ಮನೆ ಬಳಕೆಗೆ ಪವರ್ ಇದೆ. ಹೀಗಾಗಿ ನಿರಂತರ 24 ಗಂಟೆ ಮನೆಗೆ ಪವರ್ ಇದ್ದೇ ಇದೆ. ಆದರೆ ಇದು ಎಷ್ಟು ದಿನ ಅಂತ ಗೊತ್ತಿಲ್ಲ. ಒಂದಂತೂ ಸತ್ಯ ಇಷ್ಟು ದಿನ ಪವರ್ ನೀಡಿದ್ದಾರಲ್ಲಾ ಮುಂದಿನ ಬಾರಿ ಇನ್ನೂ ಸರಿಯಾಗಬಹುದು ಅನ್ನೋ ಆಶಾವಾದ ಗ್ರಾಮೀಣರಲ್ಲಿದೆ.ಅಂತೂ ಯಾವುದೇ ತೊಂದರೆ ಇಲ್ಲದೆ ಈಗ , ಇದುವರೆಗೆ ಪವರ್ ನೀಡಿದ್ದಾರಲ್ಲಾ ಅಂತ ಕೃಷಿಕರೆಲ್ಲಾ ಈಗ ನೆನಪಿಸಿಕೊಳ್ಳುತ್ತಾರೆ. ಅದರಲ್ಲೂ ಉಚಿತ ವಿದ್ಯುತ್ ಕೂಡಾ ಕೊಟ್ಟಿದ್ದಾರಲ್ಲಾ ಅದು ಇನ್ನಷ್ಡು ಖುಷಿ. ಆವತ್ತು ಮಾತನಾಡಿಕೊಳ್ಳುತ್ತಿದ್ದರು , ಹೇಗೂ ಫ್ರೀ ಕರೆಂಟ್ ಅಲ್ವಾ ಬರುವ ವರ್ಷದಿಂದ ಪವರೇ ಇರಲಿಕ್ಕಿಲ್ಲ ಅಂತ ಮಾತನಾಡಿಕೊಳ್ಳುತ್ತಿದ್ದರು. ಆದರೆ ಈಗ ಆ ನಿಲುವಿನಿಂದ ಬದಲಾಗಿದ್ದಾರೆ ಗ್ರಾಮೀಣ ಜನ. ಹೀಗೇ ಮುಂದುವರಿಯಲಿ ಅನ್ನೋದೇ ಕೃಷಿಕರ ಒತ್ತಾಸೆ.
ಗ್ರಾಮೀಣ ಕರ್ನಾಟಕದಲ್ಲಿ ಒಂದು ಕಾಲವಿತ್ತು. ಬೆಳಗ್ಗೆ ಹೋದ ಪವರ್ ಬರೋದೇ ಸಂಜೆ ಇನ್ನೆಷ್ಟೊತ್ತಿಗೋ. ಶಾಲಾ ಮಕ್ಕಳಿಗೆ , ಗೃಹಿಣಿಯರಿಗೆ ತಲೆನೋವೇ ತಲೆ ನೋವು.ಆದ್ರೆ ಹೇಳೋದು ಯಾರಲ್ಲಿ. ಒಂದಷ್ಟು ಪತ್ರಿಕೆಗಳಲ್ಲಿ ವರದಿಗಳೂ , ಇನ್ನೊಂದಿಷ್ಟು ಪ್ರತಿಭಟನೆಗಳು ನಡೆದರೆ ಮುಗೀತು.ಪವರ್ ಪ್ರೋಬ್ಲೆಮ್ ಮುಗೀಲೇ ಇಲ್ಲ. ಅದಕ್ಕಿಂತಲೂ ಹೆಚ್ಚು ಕೃಷಿಕರು ಪಡೋ ಸಂಕಷ್ಠ ಒಂದಲ್ಲ ಹಲವಾರು. ತೋಟಕ್ಕೆ ನೀರುಣಿಸಲು ರಾತ್ರಿ ಹಗಲು ಶ್ರಮ ಪಡಬೇಕು. ಪವರ್ ಬಂದರೂ ಪಂಪ್ ಚಾಲೂ ಆಗೋದಿಲ್ಲ.ಆದರೂ ವಿಧಿಯಿಲ್ಲ ಕಾದು ಕುಳಿತಾದರೂ ಚಾಲೂ ಮಾಡಲೇ ಬೇಕು.ಅಲ್ಲೂ ಕಾಂಪಿಟೀಶನ್ ಇರ್ತಿತ್ತು. ಪವರ್ ಬಂದಾಗಲೇ ಪಂಪ್ ಚಾಲೂ ಆದರೆ ಮುಗೀತು . ಇಲ್ಲಾಂದ್ರೆ ವೋಲ್ಟೇಜ್ ಪ್ರಾಬ್ಲಂನಿಂದಾಗಿ ಚಾಲೂ ಆಗೋದಿಲ್ಲ. ತುಂಬಾ ವೋಲ್ಟೇಜ್ ಕಡಿಮೆ ಆದ್ರೆ ಲೈನ್ ಟ್ರಿಪ್ ಆಗುತ್ತೆ. ಮತ್ತೆ ಐದೋ ಹತ್ತೋ ನಿಮಿಷ ಕಳೆದು ಪವರ್ ಬರೋದು. ಆಗಲೂ ಇದೇ ಸಮಸ್ಯೆ. ಹೀಗೆ ಒಂದೇ ಎರಡೇ ಹತ್ತಾರು ಸಮಸ್ಯೆ ಗ್ರಾಮೀಣ ಕರ್ನಾಟಕದಲ್ಲಿ.
ಆದರೆ ಈ ಬಾರಿ ಸ್ವಲ್ಪ ಸುಧಾರಿಸಿದಂತೆ ಕಾಣುತ್ತೆ. ಯಾಕೆಂದರೆ ಅಂದೆಲ್ಲಾ ನವೆಂಬರ್ ಅಂತ್ಯ , ಡಿಸೆಂಬರ್ನಲ್ಲಿಯೇ ಪವರ್ ಕಟ್ ಶುರುವಾಗುತ್ತಿತ್ತು. ಹೀಗಾಗಿ ಮಾರ್ಚ್ ವೇಳೆಗೆ ಪರಿಸ್ಥಿತಿ ತೀರಾ ಕಠಿಣವಾಗುತ್ತಿತ್ತು.ಆದರೆ ಈ ಬಾರಿ ಹಾಗೆ ಕಾಣುತ್ತಿಲ್ಲ. ಫೆಬ್ರವರಿ ಆರಂಭವಾದರೂ ದಿನ ಪೂರ್ತಿ ಪವರ್ ಇದೆ. ಅದರಲ್ಲಿ 12 ಗಂಟೆ ಕೃಷಿಕರಿಗಾಗಿ ತ್ರೀ ಫೇಸ್ ಇದೆ. ಉಳಿದಂತೆ 12 ಗಂಟೆ ಮನೆ ಬಳಕೆಗೆ ಪವರ್ ಇದೆ. ಹೀಗಾಗಿ ನಿರಂತರ 24 ಗಂಟೆ ಮನೆಗೆ ಪವರ್ ಇದ್ದೇ ಇದೆ. ಆದರೆ ಇದು ಎಷ್ಟು ದಿನ ಅಂತ ಗೊತ್ತಿಲ್ಲ. ಒಂದಂತೂ ಸತ್ಯ ಇಷ್ಟು ದಿನ ಪವರ್ ನೀಡಿದ್ದಾರಲ್ಲಾ ಮುಂದಿನ ಬಾರಿ ಇನ್ನೂ ಸರಿಯಾಗಬಹುದು ಅನ್ನೋ ಆಶಾವಾದ ಗ್ರಾಮೀಣರಲ್ಲಿದೆ.ಅಂತೂ ಯಾವುದೇ ತೊಂದರೆ ಇಲ್ಲದೆ ಈಗ , ಇದುವರೆಗೆ ಪವರ್ ನೀಡಿದ್ದಾರಲ್ಲಾ ಅಂತ ಕೃಷಿಕರೆಲ್ಲಾ ಈಗ ನೆನಪಿಸಿಕೊಳ್ಳುತ್ತಾರೆ. ಅದರಲ್ಲೂ ಉಚಿತ ವಿದ್ಯುತ್ ಕೂಡಾ ಕೊಟ್ಟಿದ್ದಾರಲ್ಲಾ ಅದು ಇನ್ನಷ್ಡು ಖುಷಿ. ಆವತ್ತು ಮಾತನಾಡಿಕೊಳ್ಳುತ್ತಿದ್ದರು , ಹೇಗೂ ಫ್ರೀ ಕರೆಂಟ್ ಅಲ್ವಾ ಬರುವ ವರ್ಷದಿಂದ ಪವರೇ ಇರಲಿಕ್ಕಿಲ್ಲ ಅಂತ ಮಾತನಾಡಿಕೊಳ್ಳುತ್ತಿದ್ದರು. ಆದರೆ ಈಗ ಆ ನಿಲುವಿನಿಂದ ಬದಲಾಗಿದ್ದಾರೆ ಗ್ರಾಮೀಣ ಜನ. ಹೀಗೇ ಮುಂದುವರಿಯಲಿ ಅನ್ನೋದೇ ಕೃಷಿಕರ ಒತ್ತಾಸೆ.
02 ಫೆಬ್ರವರಿ 2011
ಕಾಡುವ ಜಾತ್ರೆ. . !
ಕನ್ನಡ ಹಬ್ಬ ಈಗ ಆರಂಭವಾಗತೊಡಗಿದೆ.ಪ್ರತೀ ತಾಲೂಕುಗಳಲ್ಲೂ ಕನ್ನಡದ ಜಾತ್ರೆ ನಡೆದಿದೆ , ನಡೆಯುತ್ತಿದೆ. ಈಗ ನಾಡಿನ ದೊಡ್ಡ ಹಬ್ಬಕ್ಕೆ ಸಿದ್ದತೆ ನಡೆಯುತ್ತಲೇ ಇದೆ. ಪ್ರತೀ ಬಾರಿಯಂತೆ ಈ ಬಾರಿಯೂ ಕನ್ನಡದ ಜಾತ್ರೆಯ ವೇಳೆಗೆ ಏನಾದರೊಂದು ಅವಸ್ವರ ಇದ್ದೇ ಇರುತ್ತದೆ ಎಂದು ಮೊನ್ನೆ ನಾವು ಮಾತನಾಡುತ್ತಿದ್ದೆವು. ಇದುವರೆಗಿನ ಒಂದೇ ಒಂದು ಕನ್ನಡ ಜಾತ್ರೆಯಲ್ಲಿ ನೆಗೆಟಿವ್ ಅಂಶಗಳು ಹೆಚ್ಚು ಹೈಲೈಟ್ ಆಗದೇ ಇದ್ದದ್ದು ಇದೆಯಾ?. ಬಹುಶ: ಇಲ್ಲ. ಇದ್ಯಾಕೆ ಹೀಗೆ?. ಯಾಕೆ ಅದೇ ಅಂಶಗಳು ಹೆಚ್ಚು ಫೋಕಸ್ ಆಗುತ್ತೆ?. ಬಹುಶ: ನಮ್ಮ ಮನಸ್ಥಿತಿಯೇ ಇದಕ್ಕೆ ಕಾರಣ ಅನ್ನೋ ದಾರಿಯ ಕಡೆಗೆ ಕೊನೆಗೆ ಹೆಜ್ಜೆ ಹಾಕಿದೆವು.
ತಾಲೂಕು ಮಟ್ಟದ ಕನ್ನಡ ಜಾತ್ರೆಯಲ್ಲೂ ಇದೇ ಕಾಣುತ್ತದೆ. ಇಲ್ಲೂ ವರ್ಗ , ಜಾತಿ , ಅಂತಸ್ತು, ವೈಯಕ್ತಿಕ ವರ್ಚಸ್ಸು ಇದೆಲ್ಲಾ ಪರಿಗಣನೆಯಾಗುವುದರ ಜೊತೆಗೆ ಗ್ರೂಪಿಸಂ ಕೂಡಾ ಇದೆ. ಇಲ್ಲೇ ಇಷ್ಟು ಗುಂಪುಗಾರಿಕೆ ನಡೀತಿರಬೇಕಾದರೆ ರಾಜ್ಯಮಟ್ಟದಲ್ಲಿ ಇದೆಲ್ಲಾ ಇಲ್ಲದೇ ಇರೋದಿಕ್ಕಾಗುತ್ತಾ ಅಂತ ನಮ್ಮಲ್ಲೇ ಇನ್ನೊಂದು ಪ್ರಶ್ನೆ ಎದ್ದಿತು.ಅದೂ ಹೌದು ಬಿಡಿ. ಅದಲ್ಲಾ ಇರಲಿ ಇನ್ನೂ ಇದೆ , ಅಲ್ಲಿ ಊಟ ಸರಿ ಇಲ್ಲ , ಮಲಕ್ಕೊಳ್ಳೋಕೆ ಹಾಸಿಗೆ ಇಲ್ಲ , ಇಂತಹದ್ದೆಲ್ಲಾ ಚಿಕ್ಕ ಚಿಕ್ಕ ವಿಷಯಗಳೂ ಕೆಲವೊಮ್ಮೆ ಫೋಕಸ್ ಆಗುವುದೂ ಇದೆ.ಅದೇ ವೇಳೆ ಅಲ್ಲೇ ಆ ಕಡೆಗಿನ ವೇದಿಕೆಯಲ್ಲಿ ಒಂದೊಳ್ಳೆ ವಿಚಾರ ಇರುತ್ತೆ ಅದಕ್ಕೆ ಬೆಳಕೇ ಬರೋದಿಲ್ಲ. ಒಂದರ್ಥದಲ್ಲಿ ನಮಗೆ ಅದೇ ವಿಚಾರಗಳು ಇಷ್ಟವಾಗುತ್ತೆ.ಅದಕ್ಕಾಗೇ ಅಲ್ಲವೇ ನಮ್ಮಲ್ಲಿ ಬರೋ ಕನ್ನಡ ಧಾರವಾಹಿಗಳ ಪೈಕಿ ಹುಳುಕು , ಹಲ್ಲೆ ,ಮನೆಯೊಳಗಿನ ಕದನ ಇಷ್ಟವಾಗೋದು. ಅಂದರೆ ನಮ್ಮ ಮನಸ್ಥಿತಿ ಅಲ್ಲಿನ ನೆಗೆಟಿವ್ ಅಂಶಗಳತ್ತಲೇ ಸೆಳೆದುಕೊಳ್ಳುತ್ತೆ.ಹಾಗಾಗೇ ಕನ್ನಡ ಜಾತ್ರೆಗಳ ನೆಗೆಟಿವ್ ಅಂಶಗಳೇ ಹೆಚ್ಚು ಪ್ರತಿಫಲನವಾಗುತ್ತೆ.
ಆದರೆ ಇದು ನಮ್ಮಲ್ಲಿ ಮಾತ್ರಾ. ಅದೇ ಪಕ್ಕದ ಕೇರಳದಲ್ಲಿ ಹಾಗಿಲ್ಲ.ಅಲ್ಲಿನ ಜನ ಇಂತಹ ಸಾಂಸ್ಕೃತಿಕ ಉತ್ಸವಗಳು, ಕಲಾಪ್ರಾಕಾರಗಳು, ಸಾಹಿತ್ಯ ವಿವಾರಗಳಲ್ಲಿ ಗುಂಪುಗಾರಿಕೆ ಮಾಡೋಲ್ಲ.ಆತ ಯಾರೇ ಇರಲಿ ರಾಜಕೀಯ ರಹಿತವಾಗಿ ಎಲ್ಲರೂ ದುಡಿಯುತ್ತಾರೆ. ಹೇಗೆ ಬೇಕೋ ಹಾಗೆ ಆ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತಾರೆ. ಅದು ಮಾತ್ರಾ ಅಲ್ಲ, ನೋಡಿ ನಮ್ಮಲ್ಲಿ ಎಷ್ಟು ಗಡಿ ಸಮಸ್ಯೆಗಳು ಅತ್ತ ಬೆಳಗಾವಿ , ಇತ್ತ ಕಾಸರಗೋಡು , ಅಲ್ಲಿ ಕಾವೇರಿ ಇಲ್ಲಿ ಕೃಷ್ಣಾ . . . ಹೀಗೇ ಒಂದೇ ದೇಶ , ಹಲವು ರಾಜ್ಯ ನೂರಾರು ಸಮಸ್ಯೆ. ಅದಕ್ಕಾಗಿ ಹೀಗೇ ಭಾಷಾವಾರು ಪ್ರಾಂತ ಮಾಡುವ ಬದಲು ಇಡೀ ದೇಶ ೪ ಭಾಗಗಳಾಗಿ ಆಡಳಿತ ನಡೆಸಿದ್ದರೆ ಚೆನ್ನಾಗಿತ್ತು.ಯಾವುದೇ ಭಾಷೆ , ರಾಜ್ಯಕ್ಕಾಗಿ ಜಗಳವೇ ಇರುತ್ತಿರಲಿಲ್ಲ. ಹಾಗೊಂದು ಅಂಬೋಣ ಬಿಡಿ.
ಅಷ್ಟಕ್ಕೂ ಈ ಬಾರಿಯ ಸಾಹಿತ್ಯ ಜಾತ್ರೆಯಲ್ಲಿ ಏನೇನೆಲ್ಲಾ ಅಸಮಾಧನಗಳು ಹೊರಬರುತ್ತೋ , ಯಾವ್ಯಾವ ಚಾನೆಲ್ಲಿನವರು , ಯಾವ್ಯಾವ ಪೇಪರಿನವರು ಹೇಗೆ ಕವರೇಜ್ ಮಾಡುತ್ತಾರೋ , ಯಾರ್ಯಾರು ಬಂಡಾಯ ಏಳೂತ್ತಾರೋ , ಯಾರ್ಯಾರ ಅಪಸ್ವರಕ್ಕೆ ಬೆಲೆ ಬರುತ್ತೋ ನೋಡಬೇಕು. ಅಷ್ಟಕ್ಕೂ ಈ ಅಪಸ್ವರ ತೆಗೆಯೋದು ಪ್ರಚಾರಕ್ಕಾಗಿಯೋ ಏನೋ?. ಅದನ್ನು ಪ್ರಚಾರ ಮಾಡೋವವರು ನೋಡಿಕೊಳ್ಳಬೇಕು.
ಯಾಕಂದ್ರೆ ಇತ್ತೀಚೆಗೆ ಮೂಡಬಿದ್ರೆಯ ಸಾಹಿತ್ಯ ಜಾತ್ರೆಯಲ್ಲಿ ಅಂತಹದ್ದೇ ಒಂದು ಇಶ್ಯೂ ಮಾಡಲು ಪ್ರಯತ್ನ ಪಟ್ಟಿದ್ದರು. ಯಾರು ಗೊತ್ತಾ?. ಪ್ರಚಾರ ಮಾಡುವವರೇ..!, ಕಾರಣ ಗೊತ್ತಾ? ಮೂರು ದಿನ ಸುಮ್ಮನೆ ಕುಳಿತುಕೊಳ್ಳಬೇಕಲ್ಲ ಅಂತ, ಮತ್ತೆ ನಾಲ್ಕು ದಿನಕ್ಕೆ ಇದೇ ಇಶ್ಯೂ ಆಗುತ್ತಲ್ಲಾ ಅಂತ . ! ಅನ್ನೋದು ಹಲವರ ಅಭಿಮತ. ಕನ್ನಡಕ್ಕಾಗಿ ಒಂದೇ ಒಂದು ರೀತಿಯಲ್ಲೂ ದುಡಿಯದ ಜನ ಕನ್ನಡಕ್ಕಾಗಿ ದುಡಿಯುವ ಜನರ ಬಗ್ಗೆ ಯಾಕೆ ಹಾಗೆ ಮಾಡುತ್ತಾರೆ ಗೊತ್ತಿಲ್ಲ. ಹುಳುಕುಗಳು ಇರಬಹುದು ಇಲ್ಲಾ ಅಂತಲ್ಲ , ಆದರೆ ಹಾಗೆ ದುಡಿಯುವುದು ಕೂಡಾ ದೊಡ್ಡ ಕೆಲಸವೇ.
ಈ ಬಾರಿ ಒಳ್ಳೆಯದನ್ನೇ ಕೇಳೋಣ , ಒಳ್ಳೆಯದನ್ನೇ ಓದೋಣ. ಸಾಹಿತ್ಯಕ್ಕಾಗಿ , ಕನ್ನಡಕ್ಕಾಗಿ ಈ ಅಕ್ಷರಕ್ಕಾಗಿ.
ತಾಲೂಕು ಮಟ್ಟದ ಕನ್ನಡ ಜಾತ್ರೆಯಲ್ಲೂ ಇದೇ ಕಾಣುತ್ತದೆ. ಇಲ್ಲೂ ವರ್ಗ , ಜಾತಿ , ಅಂತಸ್ತು, ವೈಯಕ್ತಿಕ ವರ್ಚಸ್ಸು ಇದೆಲ್ಲಾ ಪರಿಗಣನೆಯಾಗುವುದರ ಜೊತೆಗೆ ಗ್ರೂಪಿಸಂ ಕೂಡಾ ಇದೆ. ಇಲ್ಲೇ ಇಷ್ಟು ಗುಂಪುಗಾರಿಕೆ ನಡೀತಿರಬೇಕಾದರೆ ರಾಜ್ಯಮಟ್ಟದಲ್ಲಿ ಇದೆಲ್ಲಾ ಇಲ್ಲದೇ ಇರೋದಿಕ್ಕಾಗುತ್ತಾ ಅಂತ ನಮ್ಮಲ್ಲೇ ಇನ್ನೊಂದು ಪ್ರಶ್ನೆ ಎದ್ದಿತು.ಅದೂ ಹೌದು ಬಿಡಿ. ಅದಲ್ಲಾ ಇರಲಿ ಇನ್ನೂ ಇದೆ , ಅಲ್ಲಿ ಊಟ ಸರಿ ಇಲ್ಲ , ಮಲಕ್ಕೊಳ್ಳೋಕೆ ಹಾಸಿಗೆ ಇಲ್ಲ , ಇಂತಹದ್ದೆಲ್ಲಾ ಚಿಕ್ಕ ಚಿಕ್ಕ ವಿಷಯಗಳೂ ಕೆಲವೊಮ್ಮೆ ಫೋಕಸ್ ಆಗುವುದೂ ಇದೆ.ಅದೇ ವೇಳೆ ಅಲ್ಲೇ ಆ ಕಡೆಗಿನ ವೇದಿಕೆಯಲ್ಲಿ ಒಂದೊಳ್ಳೆ ವಿಚಾರ ಇರುತ್ತೆ ಅದಕ್ಕೆ ಬೆಳಕೇ ಬರೋದಿಲ್ಲ. ಒಂದರ್ಥದಲ್ಲಿ ನಮಗೆ ಅದೇ ವಿಚಾರಗಳು ಇಷ್ಟವಾಗುತ್ತೆ.ಅದಕ್ಕಾಗೇ ಅಲ್ಲವೇ ನಮ್ಮಲ್ಲಿ ಬರೋ ಕನ್ನಡ ಧಾರವಾಹಿಗಳ ಪೈಕಿ ಹುಳುಕು , ಹಲ್ಲೆ ,ಮನೆಯೊಳಗಿನ ಕದನ ಇಷ್ಟವಾಗೋದು. ಅಂದರೆ ನಮ್ಮ ಮನಸ್ಥಿತಿ ಅಲ್ಲಿನ ನೆಗೆಟಿವ್ ಅಂಶಗಳತ್ತಲೇ ಸೆಳೆದುಕೊಳ್ಳುತ್ತೆ.ಹಾಗಾಗೇ ಕನ್ನಡ ಜಾತ್ರೆಗಳ ನೆಗೆಟಿವ್ ಅಂಶಗಳೇ ಹೆಚ್ಚು ಪ್ರತಿಫಲನವಾಗುತ್ತೆ.
ಆದರೆ ಇದು ನಮ್ಮಲ್ಲಿ ಮಾತ್ರಾ. ಅದೇ ಪಕ್ಕದ ಕೇರಳದಲ್ಲಿ ಹಾಗಿಲ್ಲ.ಅಲ್ಲಿನ ಜನ ಇಂತಹ ಸಾಂಸ್ಕೃತಿಕ ಉತ್ಸವಗಳು, ಕಲಾಪ್ರಾಕಾರಗಳು, ಸಾಹಿತ್ಯ ವಿವಾರಗಳಲ್ಲಿ ಗುಂಪುಗಾರಿಕೆ ಮಾಡೋಲ್ಲ.ಆತ ಯಾರೇ ಇರಲಿ ರಾಜಕೀಯ ರಹಿತವಾಗಿ ಎಲ್ಲರೂ ದುಡಿಯುತ್ತಾರೆ. ಹೇಗೆ ಬೇಕೋ ಹಾಗೆ ಆ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತಾರೆ. ಅದು ಮಾತ್ರಾ ಅಲ್ಲ, ನೋಡಿ ನಮ್ಮಲ್ಲಿ ಎಷ್ಟು ಗಡಿ ಸಮಸ್ಯೆಗಳು ಅತ್ತ ಬೆಳಗಾವಿ , ಇತ್ತ ಕಾಸರಗೋಡು , ಅಲ್ಲಿ ಕಾವೇರಿ ಇಲ್ಲಿ ಕೃಷ್ಣಾ . . . ಹೀಗೇ ಒಂದೇ ದೇಶ , ಹಲವು ರಾಜ್ಯ ನೂರಾರು ಸಮಸ್ಯೆ. ಅದಕ್ಕಾಗಿ ಹೀಗೇ ಭಾಷಾವಾರು ಪ್ರಾಂತ ಮಾಡುವ ಬದಲು ಇಡೀ ದೇಶ ೪ ಭಾಗಗಳಾಗಿ ಆಡಳಿತ ನಡೆಸಿದ್ದರೆ ಚೆನ್ನಾಗಿತ್ತು.ಯಾವುದೇ ಭಾಷೆ , ರಾಜ್ಯಕ್ಕಾಗಿ ಜಗಳವೇ ಇರುತ್ತಿರಲಿಲ್ಲ. ಹಾಗೊಂದು ಅಂಬೋಣ ಬಿಡಿ.
ಅಷ್ಟಕ್ಕೂ ಈ ಬಾರಿಯ ಸಾಹಿತ್ಯ ಜಾತ್ರೆಯಲ್ಲಿ ಏನೇನೆಲ್ಲಾ ಅಸಮಾಧನಗಳು ಹೊರಬರುತ್ತೋ , ಯಾವ್ಯಾವ ಚಾನೆಲ್ಲಿನವರು , ಯಾವ್ಯಾವ ಪೇಪರಿನವರು ಹೇಗೆ ಕವರೇಜ್ ಮಾಡುತ್ತಾರೋ , ಯಾರ್ಯಾರು ಬಂಡಾಯ ಏಳೂತ್ತಾರೋ , ಯಾರ್ಯಾರ ಅಪಸ್ವರಕ್ಕೆ ಬೆಲೆ ಬರುತ್ತೋ ನೋಡಬೇಕು. ಅಷ್ಟಕ್ಕೂ ಈ ಅಪಸ್ವರ ತೆಗೆಯೋದು ಪ್ರಚಾರಕ್ಕಾಗಿಯೋ ಏನೋ?. ಅದನ್ನು ಪ್ರಚಾರ ಮಾಡೋವವರು ನೋಡಿಕೊಳ್ಳಬೇಕು.
ಯಾಕಂದ್ರೆ ಇತ್ತೀಚೆಗೆ ಮೂಡಬಿದ್ರೆಯ ಸಾಹಿತ್ಯ ಜಾತ್ರೆಯಲ್ಲಿ ಅಂತಹದ್ದೇ ಒಂದು ಇಶ್ಯೂ ಮಾಡಲು ಪ್ರಯತ್ನ ಪಟ್ಟಿದ್ದರು. ಯಾರು ಗೊತ್ತಾ?. ಪ್ರಚಾರ ಮಾಡುವವರೇ..!, ಕಾರಣ ಗೊತ್ತಾ? ಮೂರು ದಿನ ಸುಮ್ಮನೆ ಕುಳಿತುಕೊಳ್ಳಬೇಕಲ್ಲ ಅಂತ, ಮತ್ತೆ ನಾಲ್ಕು ದಿನಕ್ಕೆ ಇದೇ ಇಶ್ಯೂ ಆಗುತ್ತಲ್ಲಾ ಅಂತ . ! ಅನ್ನೋದು ಹಲವರ ಅಭಿಮತ. ಕನ್ನಡಕ್ಕಾಗಿ ಒಂದೇ ಒಂದು ರೀತಿಯಲ್ಲೂ ದುಡಿಯದ ಜನ ಕನ್ನಡಕ್ಕಾಗಿ ದುಡಿಯುವ ಜನರ ಬಗ್ಗೆ ಯಾಕೆ ಹಾಗೆ ಮಾಡುತ್ತಾರೆ ಗೊತ್ತಿಲ್ಲ. ಹುಳುಕುಗಳು ಇರಬಹುದು ಇಲ್ಲಾ ಅಂತಲ್ಲ , ಆದರೆ ಹಾಗೆ ದುಡಿಯುವುದು ಕೂಡಾ ದೊಡ್ಡ ಕೆಲಸವೇ.
ಈ ಬಾರಿ ಒಳ್ಳೆಯದನ್ನೇ ಕೇಳೋಣ , ಒಳ್ಳೆಯದನ್ನೇ ಓದೋಣ. ಸಾಹಿತ್ಯಕ್ಕಾಗಿ , ಕನ್ನಡಕ್ಕಾಗಿ ಈ ಅಕ್ಷರಕ್ಕಾಗಿ.
16 ಜನವರಿ 2011
ಇವನಿಗೆ ಹಳ್ಳಿ ಇಷ್ಟ ಯಾಕಂತೆ ?
ಮೊನ್ನೆ ಪೆಟ್ರೋಲ್ ಬೆಲೆ ಹೆಚ್ಚಾಗುತ್ತೆ ಅಂದಾಗಲೂ ಆತ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಮೊನ್ನೆ ಮೊನ್ನೆ ಹಾಲಿನ ದರ ಸ್ವಲ್ಪ ಏರಿಕೆಯಾಗಿತ್ತು , ಈಗ ಇನ್ನೂ ಏರಿಕೆಯಾಗುತ್ತಂತೆ ಅಂದಾಗಲೂ ಆತ ಆ ಬಗ್ಗೆ ಚಕಾರವನ್ನೇ ಎತ್ತಿಲ್ಲ.ಎಲ್ಲದಕ್ಕೂ ಆತ ಹೇಳುತ್ತಿದ್ದುದು, “ನನ್ನ ಹಳ್ಳಿ ನಂಜೊತೆಗಿದೆ” ಅಂತ.
ಇದು ಏರಿಕೆಯ ಕಾಲಘಟ್ಟ. ಮೊನ್ನೆ ಮೊನ್ನೆ ಹಾಲಿನ ದರ ಏರಿಕೆಯಾಗಿತ್ತು , ಈಗ ಮತ್ತೆ ಪೆಟ್ರೋಲ್ ದರ ಏರಿಕೆಯಾಗಿದೆ , ತರಕಾರಿ ಬೆಲೆ ಬಗ್ಗೆ ಮಾತಾಡೋ ಹಾಗಿಲ್ಲ , ನೀರುಳ್ಳಿ ಕಣ್ಣುರಿ ತರಿಸುತ್ತೆ , ಅಕ್ಕಿ ಬೆಲೆಯೂ ಏರು ಹಾದಿಯಲ್ಲಿದೆ.ಎಲ್ಲವೂ ಕೈಗೆಟಕದ ಹಾಗಿದೆ. ನಗರದಲ್ಲಿ ಸಾಮಾನ್ಯ ಸಂಬಳ ಪಡೆಯೋ ನೌಕರನ ತಲೆಯೂ ಇದೆಲ್ಲದರ ಜೊತೆಗೆ ಬಿಸಿಯಾಗುತ್ತಿದೆ.ತಿಂಗಳ ಅಂತ್ಯಕ್ಕೆ ಲೆಕ್ಕ ಹಾಕಿದಾಗ , ಮನೆ ಬಾಡಿಗೆ ,ಗ್ಯಾಸ್ಗೆ ,ತರಕಾರಿ , ದಿನಸಿ , ಇದರ ಜೊತೆಗೆ ದೈನಂದಿನ ಖರ್ಚು ಎಲ್ಲಾ ಲೆಕ್ಕ ಹಾಕಿದಾಗ ಈ ಚಳಿಯಲ್ಲೂ ಮೈ ಬೆವರುತ್ತದೆ. ಯೋಚನೆ ಇನ್ನೂ 5 ವರ್ಷಗಳ ನಂತರಕ್ಕೆ ಓಡುತ್ತದೆ.ಅಷ್ಟು ದೂರಕ್ಕೆ ನೆನಪಿಸಿಕೊಳ್ಳಲಾಗುವುದಿಲ್ಲ ಎನ್ನುತ್ತಾನೆ.ಈ ನಡುವೆ ಇನ್ನೊಮ್ಮೆ ಪೆಟ್ರೋಲ್ ಬೆಲೆ ಏರಿಕೆಯಾಗಿದೆ.ಕಚೇರಿಗೆ ದಿನವೂ ಮೋಟಾರ್ ಬೈಕಲ್ಲೋ , ಕಾರಲ್ಲೋ ಹೋಗಿಯೇ ರೂಢಿ.ಈಗ ಪೆಟ್ರೋಲ್ ಬೆಲೆ ಏರಿದೆ ಅಂತ ಅದನ್ನು ನಿಲ್ಲಿಸಲಾಗುತ್ತೆಯೇ?. ಅದು ಇನ್ನೊಂದು ತಲೆ ಬಿಸಿ. ಈ ನಡುವೆ ಹಾಲಿಗೂ ಇನ್ನೂ ಬೆಲೆ ಏರುತ್ತಂತೆ. ರೈತರಿಗೆ ಕೊಡಲು, ಅಂತಾರೆ ಅವರು.ಅದಕ್ಕೂ ಮೊನ್ನೆ ಟಿವಿ ಚಾನೆಲ್ಲಿನಲ್ಲಿ ಚರ್ಚೆಯಾಗುತ್ತಿತ್ತು.ರೈತರ ಹೆಸರಲ್ಲಿ ಕಂಪನಿ ಹಣ ಮಾಡುತ್ತಿದೆ , ಸರಕಾರ ಏದಾರೂ ರೈತರಿಗೆ ಮಾಡಬೇಕು , ಗ್ರಾಹಕ ವಲಯ ದೊಡ್ಡದಿದೆ ಅವರಿಗೂ ಹೊರೆಯಲ್ಲವೇ ಅಂತ ಹೇಳುತ್ತಿದ್ದರು.ಆದರೆ ಅವರಿಗೇನು ಗೊತ್ತು ಈ ರೈತರ ಕಷ್ಠ.ಒಂದು ದಿನ ಹಾಲು ತಡವಾದರೆ ಬೊಬ್ಬಿಟ್ಟು ಗೊತ್ತೇ ವಿನ: ,ಬೆಳಗ್ಗೆ ನಾಲ್ಕೋ ಐದೋ ಗಂಟೆಗೆ ಎದ್ದು ಹಸುಗಳಿಗೆ ತಿನ್ನಲು ಕೊಟ್ಟು ಹಾಲು ಕರೆದು ಎರಡೋ ಮೂರೋ ಕಿಲೋ ಮೀಟರ್ ದೂರ ನಡೆದು ಹೋಗಿ ಸಹಕಾರ ಸಂಘಗಳಿಗೆ ಹಾಲು ಹಾಕಿ ಅಲ್ಲಿನ ಸಿಬ್ಬಂದಿಯ ಕಿರಿ ಕಿರಿ ಕೇಳಿ ಮನೆಗೆ ಬರೋ ಆ ಹೈನುಗಾರನ ಪಾಡು ಅವನಿಗೇ ಗೊತ್ತು.
ಈಗ ಅದಲ್ಲ , ಅಲ್ಲಿ ಬೆಲೆ ಏರಿಕೆಯ ಬಗ್ಗೆ ತಲೆಗೊಬ್ಬರಂತೆ ಮಾತಾಡೋವಾಗ ಆತ ಇಲ್ಲಿ ಹೇಳುತ್ತಾನೆ , ನನಗೇನು ಬೆಲೆ ಏರಿಕೆಯಾಗಲಿ. ಯಾವುದು ಪೆಟ್ರೋಲ್ ಬೆಲೆ ಏರಿಕೆಯಾ ?. ನನಗೇನು ಚಿಂತೆ , ದಿನಕ್ಕೊಮ್ಮೆ ಸ್ವಲ್ಪ ರಿಲ್ಯಾಕ್ಸ್ ಇರಲಿ ಅಂತ ಪೇಟೆಗೆ ಹೋಗುತ್ತಿದ್ದೆ , ಇನ್ನು ಹೋಗೋದಿಲ್ಲ. ಹೊಲಕ್ಕೆ ಒಂದು ಸುತ್ತು ಹೆಚ್ಚು ಹೊಡೀತೇನೆ. ಇನ್ನು ಹಾಲಿನ ಬಗ್ಗೆ ತಲೇನೇ ಕೆಡಿಸಿಕೊಳ್ಳೋದಿಲ್ಲ , ನನ್ನದೇ ಹಸು ಇದೆ. ನಾನೇ ಇರಿಸಿಕೊಳ್ಳುತ್ತೇನೆ. ಗ್ಯಾಸ್ ನಮಗೆ ಬೇಡವೇ ಬೇಡ ಗೋಬರ್ ಗ್ಯಾಸ್ ಇದೆ. ಬೆಳಗ್ಗೆ ಬಿಸಿ ನೀರು ಸ್ನಾನ ಮಾಡಲು ಗ್ಯಾಸ್ , ಕರೆಂಟ್ ನೋಡೋದೇ ಇಲ್ಲ. ನಮ್ಮ ತೋಟದಲ್ಲಿ ಸಿಗೋ ಕಸ ಕಡ್ಡಿಯೇ ಸಾಕು , ಇನ್ನು ತರಕಾರಿ ಬಗ್ಗೆ ಹೇಳೋದಾದ್ರೆ , ಶುದ್ದವಾದದ್ದು , ರಾಸಾಯನಿಕ ಸಿಂಪಡಿಸದೇ ಇದ್ದದ್ದು ನಾನೇ ನನ್ನ
ಹೊಲದಲ್ಲಿ ಬೆಳೆಯುತ್ತೇನೆ ,ಇನ್ನು ಅಕ್ಕಿಯೂ ನಾನೇ ಬೆಳೀತೇನೆ. ಹಣಕ್ಕಾಗಿ , ರಬ್ಬರ್ ಇದೆ , ಅಡಿಕೆ ಇದೆ.ರಬ್ಬರ್ ರೇಟಂತೂ ೨೦೦ ರ ಗಡಿ ದಾಟಿದೆ.ಯಾರದ್ದೂ ಕಿರಿಕಿರಿ ಇಲ್ಲ. ಈಗ ಬೇಕಾದ್ರೂ ನಾನು ಮಲಗಿ ನಿದ್ರಿಸುತ್ತೇನೆ.ಕೇಳೋರು ಯಾರೂ ಇಲ್ಲ.ಅದೆಲ್ಲದಕ್ಕೂ ಮುಖ್ಯವಾಗಿ ಶುದ್ದ ಗಾಳಿ , ನೀರು ಸಿಗುತ್ತೆ ಅನ್ನೋದೇ ಇವನಿಗೆ ಖುಷಿ.

ಆದ್ರೆ ಇವನಿಗೂ ಒಂದು ಸಮಸ್ಯೆ ಇದೆಯಂತೆ, ತೋಟದ ಕೆಲಸ ಮಾಡೋಕೆ ಜನ ಸಿಕ್ತಾಇಲ್ಲ , ಆದ್ರೆ ಇದಕ್ಕೆ ಈಗ ಯೋಚನೆ ಮಾಡಿದ್ದಾನೆ , ಎಲ್ಲಕ್ಕೂ ಯಂತ್ರ ಬಳಸಿಕೊಳ್ತಾನೆ. ಇನ್ನೊಂದು ಸಮಸ್ಯೆ ಅಂದ್ರೆ ಕಾಡು ಪ್ರಾಣಿಗಳದ್ದು. ತೋಟಕ್ಕೆ ಬಂದ್ರೆ ಎಲ್ಲವನ್ನೂ ನಾಶ ಮಾಡಿ ಹಾಕುತ್ತದೆ. ಅದಕ್ಕಾಗಿ ಸಾಕಷ್ಟು ಎಚ್ಚರ ವಹಿಸಿಕೊಳ್ತಾನೆ , ಆದ್ರೂ ಮಂಗಗಳು ಮಾತ್ರಾ ಬಂದೇ ಬರ್ತಾವೆ ಅಂತಾನೆ ಆತ.
ಇದೇ ಒಂದೆರಡು ಸಮಸ್ಯೆ ಮಾತ್ರಾ ಇದ್ದು ಅಷ್ಟೂ ಒಳ್ಳೆಯ ವಾತಾವರಣ ಇರುವಾಗ ನಾನ್ಯಾಕೆ ನನ್ನ ಹಳ್ಳಿಯನ್ನು ಹೀಯಾಳಿಸಲಿ , ಅದು ಯಾವತ್ತೂ ನಂಜೊತೆನೇ ಇದೆ.ಅದಕ್ಕಾಗಿ ನಾನೇನಾದರೂ ಮಾಡಬೇಕು.ಇಲ್ಲಿರೋ ಜನರಿಗೆ ಏನಾದರೂ ಮಾಡಬೇಕು. ಅಂತ ಆತ ಯಾವಾಗಲೂ ಹೇಳುತ್ತಾ ಇರುತ್ತಾನೆ. ಈ ಬೆಲೆ ಏರಿಕೆಯ ಮಾತು ಬಂದಾಗಲೆಲ್ಲಾ ಆತ ನಿರುಮ್ಮಲವಾಗಿರುತ್ತಾನೆ.
ಇದು ಏರಿಕೆಯ ಕಾಲಘಟ್ಟ. ಮೊನ್ನೆ ಮೊನ್ನೆ ಹಾಲಿನ ದರ ಏರಿಕೆಯಾಗಿತ್ತು , ಈಗ ಮತ್ತೆ ಪೆಟ್ರೋಲ್ ದರ ಏರಿಕೆಯಾಗಿದೆ , ತರಕಾರಿ ಬೆಲೆ ಬಗ್ಗೆ ಮಾತಾಡೋ ಹಾಗಿಲ್ಲ , ನೀರುಳ್ಳಿ ಕಣ್ಣುರಿ ತರಿಸುತ್ತೆ , ಅಕ್ಕಿ ಬೆಲೆಯೂ ಏರು ಹಾದಿಯಲ್ಲಿದೆ.ಎಲ್ಲವೂ ಕೈಗೆಟಕದ ಹಾಗಿದೆ. ನಗರದಲ್ಲಿ ಸಾಮಾನ್ಯ ಸಂಬಳ ಪಡೆಯೋ ನೌಕರನ ತಲೆಯೂ ಇದೆಲ್ಲದರ ಜೊತೆಗೆ ಬಿಸಿಯಾಗುತ್ತಿದೆ.ತಿಂಗಳ ಅಂತ್ಯಕ್ಕೆ ಲೆಕ್ಕ ಹಾಕಿದಾಗ , ಮನೆ ಬಾಡಿಗೆ ,ಗ್ಯಾಸ್ಗೆ ,ತರಕಾರಿ , ದಿನಸಿ , ಇದರ ಜೊತೆಗೆ ದೈನಂದಿನ ಖರ್ಚು ಎಲ್ಲಾ ಲೆಕ್ಕ ಹಾಕಿದಾಗ ಈ ಚಳಿಯಲ್ಲೂ ಮೈ ಬೆವರುತ್ತದೆ. ಯೋಚನೆ ಇನ್ನೂ 5 ವರ್ಷಗಳ ನಂತರಕ್ಕೆ ಓಡುತ್ತದೆ.ಅಷ್ಟು ದೂರಕ್ಕೆ ನೆನಪಿಸಿಕೊಳ್ಳಲಾಗುವುದಿಲ್ಲ ಎನ್ನುತ್ತಾನೆ.ಈ ನಡುವೆ ಇನ್ನೊಮ್ಮೆ ಪೆಟ್ರೋಲ್ ಬೆಲೆ ಏರಿಕೆಯಾಗಿದೆ.ಕಚೇರಿಗೆ ದಿನವೂ ಮೋಟಾರ್ ಬೈಕಲ್ಲೋ , ಕಾರಲ್ಲೋ ಹೋಗಿಯೇ ರೂಢಿ.ಈಗ ಪೆಟ್ರೋಲ್ ಬೆಲೆ ಏರಿದೆ ಅಂತ ಅದನ್ನು ನಿಲ್ಲಿಸಲಾಗುತ್ತೆಯೇ?. ಅದು ಇನ್ನೊಂದು ತಲೆ ಬಿಸಿ. ಈ ನಡುವೆ ಹಾಲಿಗೂ ಇನ್ನೂ ಬೆಲೆ ಏರುತ್ತಂತೆ. ರೈತರಿಗೆ ಕೊಡಲು, ಅಂತಾರೆ ಅವರು.ಅದಕ್ಕೂ ಮೊನ್ನೆ ಟಿವಿ ಚಾನೆಲ್ಲಿನಲ್ಲಿ ಚರ್ಚೆಯಾಗುತ್ತಿತ್ತು.ರೈತರ ಹೆಸರಲ್ಲಿ ಕಂಪನಿ ಹಣ ಮಾಡುತ್ತಿದೆ , ಸರಕಾರ ಏದಾರೂ ರೈತರಿಗೆ ಮಾಡಬೇಕು , ಗ್ರಾಹಕ ವಲಯ ದೊಡ್ಡದಿದೆ ಅವರಿಗೂ ಹೊರೆಯಲ್ಲವೇ ಅಂತ ಹೇಳುತ್ತಿದ್ದರು.ಆದರೆ ಅವರಿಗೇನು ಗೊತ್ತು ಈ ರೈತರ ಕಷ್ಠ.ಒಂದು ದಿನ ಹಾಲು ತಡವಾದರೆ ಬೊಬ್ಬಿಟ್ಟು ಗೊತ್ತೇ ವಿನ: ,ಬೆಳಗ್ಗೆ ನಾಲ್ಕೋ ಐದೋ ಗಂಟೆಗೆ ಎದ್ದು ಹಸುಗಳಿಗೆ ತಿನ್ನಲು ಕೊಟ್ಟು ಹಾಲು ಕರೆದು ಎರಡೋ ಮೂರೋ ಕಿಲೋ ಮೀಟರ್ ದೂರ ನಡೆದು ಹೋಗಿ ಸಹಕಾರ ಸಂಘಗಳಿಗೆ ಹಾಲು ಹಾಕಿ ಅಲ್ಲಿನ ಸಿಬ್ಬಂದಿಯ ಕಿರಿ ಕಿರಿ ಕೇಳಿ ಮನೆಗೆ ಬರೋ ಆ ಹೈನುಗಾರನ ಪಾಡು ಅವನಿಗೇ ಗೊತ್ತು.
ಈಗ ಅದಲ್ಲ , ಅಲ್ಲಿ ಬೆಲೆ ಏರಿಕೆಯ ಬಗ್ಗೆ ತಲೆಗೊಬ್ಬರಂತೆ ಮಾತಾಡೋವಾಗ ಆತ ಇಲ್ಲಿ ಹೇಳುತ್ತಾನೆ , ನನಗೇನು ಬೆಲೆ ಏರಿಕೆಯಾಗಲಿ. ಯಾವುದು ಪೆಟ್ರೋಲ್ ಬೆಲೆ ಏರಿಕೆಯಾ ?. ನನಗೇನು ಚಿಂತೆ , ದಿನಕ್ಕೊಮ್ಮೆ ಸ್ವಲ್ಪ ರಿಲ್ಯಾಕ್ಸ್ ಇರಲಿ ಅಂತ ಪೇಟೆಗೆ ಹೋಗುತ್ತಿದ್ದೆ , ಇನ್ನು ಹೋಗೋದಿಲ್ಲ. ಹೊಲಕ್ಕೆ ಒಂದು ಸುತ್ತು ಹೆಚ್ಚು ಹೊಡೀತೇನೆ. ಇನ್ನು ಹಾಲಿನ ಬಗ್ಗೆ ತಲೇನೇ ಕೆಡಿಸಿಕೊಳ್ಳೋದಿಲ್ಲ , ನನ್ನದೇ ಹಸು ಇದೆ. ನಾನೇ ಇರಿಸಿಕೊಳ್ಳುತ್ತೇನೆ. ಗ್ಯಾಸ್ ನಮಗೆ ಬೇಡವೇ ಬೇಡ ಗೋಬರ್ ಗ್ಯಾಸ್ ಇದೆ. ಬೆಳಗ್ಗೆ ಬಿಸಿ ನೀರು ಸ್ನಾನ ಮಾಡಲು ಗ್ಯಾಸ್ , ಕರೆಂಟ್ ನೋಡೋದೇ ಇಲ್ಲ. ನಮ್ಮ ತೋಟದಲ್ಲಿ ಸಿಗೋ ಕಸ ಕಡ್ಡಿಯೇ ಸಾಕು , ಇನ್ನು ತರಕಾರಿ ಬಗ್ಗೆ ಹೇಳೋದಾದ್ರೆ , ಶುದ್ದವಾದದ್ದು , ರಾಸಾಯನಿಕ ಸಿಂಪಡಿಸದೇ ಇದ್ದದ್ದು ನಾನೇ ನನ್ನ
ಹೊಲದಲ್ಲಿ ಬೆಳೆಯುತ್ತೇನೆ ,ಇನ್ನು ಅಕ್ಕಿಯೂ ನಾನೇ ಬೆಳೀತೇನೆ. ಹಣಕ್ಕಾಗಿ , ರಬ್ಬರ್ ಇದೆ , ಅಡಿಕೆ ಇದೆ.ರಬ್ಬರ್ ರೇಟಂತೂ ೨೦೦ ರ ಗಡಿ ದಾಟಿದೆ.ಯಾರದ್ದೂ ಕಿರಿಕಿರಿ ಇಲ್ಲ. ಈಗ ಬೇಕಾದ್ರೂ ನಾನು ಮಲಗಿ ನಿದ್ರಿಸುತ್ತೇನೆ.ಕೇಳೋರು ಯಾರೂ ಇಲ್ಲ.ಅದೆಲ್ಲದಕ್ಕೂ ಮುಖ್ಯವಾಗಿ ಶುದ್ದ ಗಾಳಿ , ನೀರು ಸಿಗುತ್ತೆ ಅನ್ನೋದೇ ಇವನಿಗೆ ಖುಷಿ.

ಆದ್ರೆ ಇವನಿಗೂ ಒಂದು ಸಮಸ್ಯೆ ಇದೆಯಂತೆ, ತೋಟದ ಕೆಲಸ ಮಾಡೋಕೆ ಜನ ಸಿಕ್ತಾಇಲ್ಲ , ಆದ್ರೆ ಇದಕ್ಕೆ ಈಗ ಯೋಚನೆ ಮಾಡಿದ್ದಾನೆ , ಎಲ್ಲಕ್ಕೂ ಯಂತ್ರ ಬಳಸಿಕೊಳ್ತಾನೆ. ಇನ್ನೊಂದು ಸಮಸ್ಯೆ ಅಂದ್ರೆ ಕಾಡು ಪ್ರಾಣಿಗಳದ್ದು. ತೋಟಕ್ಕೆ ಬಂದ್ರೆ ಎಲ್ಲವನ್ನೂ ನಾಶ ಮಾಡಿ ಹಾಕುತ್ತದೆ. ಅದಕ್ಕಾಗಿ ಸಾಕಷ್ಟು ಎಚ್ಚರ ವಹಿಸಿಕೊಳ್ತಾನೆ , ಆದ್ರೂ ಮಂಗಗಳು ಮಾತ್ರಾ ಬಂದೇ ಬರ್ತಾವೆ ಅಂತಾನೆ ಆತ.
ಇದೇ ಒಂದೆರಡು ಸಮಸ್ಯೆ ಮಾತ್ರಾ ಇದ್ದು ಅಷ್ಟೂ ಒಳ್ಳೆಯ ವಾತಾವರಣ ಇರುವಾಗ ನಾನ್ಯಾಕೆ ನನ್ನ ಹಳ್ಳಿಯನ್ನು ಹೀಯಾಳಿಸಲಿ , ಅದು ಯಾವತ್ತೂ ನಂಜೊತೆನೇ ಇದೆ.ಅದಕ್ಕಾಗಿ ನಾನೇನಾದರೂ ಮಾಡಬೇಕು.ಇಲ್ಲಿರೋ ಜನರಿಗೆ ಏನಾದರೂ ಮಾಡಬೇಕು. ಅಂತ ಆತ ಯಾವಾಗಲೂ ಹೇಳುತ್ತಾ ಇರುತ್ತಾನೆ. ಈ ಬೆಲೆ ಏರಿಕೆಯ ಮಾತು ಬಂದಾಗಲೆಲ್ಲಾ ಆತ ನಿರುಮ್ಮಲವಾಗಿರುತ್ತಾನೆ.
15 ಜನವರಿ 2011
ಇವನಿಗಾರು ಗತಿ ?
ಏನು ಕತೆ ಸ್ವಾಮಿ?. ಈ ತೆಂಗಿನ ಕಾಯಿಗೆ ರೇಟು?. ನಿನ್ನೆ ಹತ್ತು ರುಪಾಯಿ ಇತ್ತು ಇವತ್ತು ನೋಡಿದ್ರೆ ಹದಿನೈದಾಗಿದೆ. ! ಏನು ಕತೆ ಇದು ? ಅಂತ ಗ್ರಾಹಕ ಬೊಬ್ಬಿಡುತ್ತಾನೆ.
ಇತ್ತ ರೈತ ಹೇಳ್ತಾನೆ ಏನ್ ಸ್ವಾಮಿ ತೆಂಗಿನ ಕಾಯಿಗೆ ರೇಟು ಏರ್ತಾನೆ ಇದೆ.ಆದ್ರೆ ನಮ್ಮಲ್ಲಿ ತೆಂಗಿನ ಕಾಯಿನೇ ಇಲ್ಲ. ಏನು ಅವಸ್ಥೆನೋ ಏನೋ ಮಂಗಗಳೆಲ್ಲಾ ಎಳೆ ಕಾಯನ್ನೇ ತೆಗೆದು ಹಾಳು ಮಾಡ್ತಾವೆ.ಕಾಯಿನೇ ಸಿಗೋದಿಲ್ಲ ಅಂತ ಆತ ತಲೆ ಮೇಲೆ ಕೈ ಹಿಡ್ಕಳ್ತಾನೆ.
ಆಗ ಅಲ್ಲೊಬ್ಬ ಹೇಳ್ತಾನೆ, ನೋಡಣ್ಣ ನೀನ್ ಹಂಗೆ ಕೂತ್ರೆ ಆಗಾಕಿಲ್ಲ , ಮಂಗ ಬರೋ ಹಾದಿಲಿ ಒಂದು ಬಾಳೆ ಗೊನೆ ಇಡು. ಅದ್ಕೆ ಒಂಚೂರು ವಿಷಾನೂ ಹಾಕಿಡು ಅದು ಮತ್ತೆ ಬರೋದೇ ಇಲ್ಲ ಅಂತಾನೆ ಆತ. ವಿಚಾರ ಇರೋದೇ ಇಲ್ಲಿ. ಮಂಗ ಬರುತ್ತೆ ಅಂತ ಆ ರೈತ ವಿಷ ಇಕ್ಕಿ ಆ ಮಂಗಗಳನ್ನು ಕೊಲ್ತಾನೆ. ಆ ನಂತ್ರ ಬೆಳೆನೂ ಸಿಗುತ್ತೆ , ಬೆಲೆನೂ ಇರುತ್ತೆ.
ಮೊನ್ನೆ ಮೊನ್ನೆ ಅಂತಹದ್ದೇ ಇನ್ನೊಂದು ಘಟನೆ ಇತ್ತು ನೋಡಿ ,ಅಲ್ಲೊಂದು ಆನೆ ಕರೆಂಟ್ ಶಾಕ್ನಿಂದ ಸತ್ತೇ ಹೋಯಿತಂತೆ.ಎಂತಾ ದುರಂತ ಮಾರಾಯ್ರೆ. ಹೀಗಾಗಬಾರದಿತ್ತು.
ನಿಜಕ್ಕೂ ಹಾಗಾಗಬಾರದಿತ್ತು.ಅದೊಂದು ಕಾಡುಪ್ರಾಣಿ.ಜೀವಜಾಲದ ಕೊಂಡಿಗಳಲ್ಲಿ ಅದೂ ಒಂದು. ಹೀಗೇ ಒಂದೋಂದೇ ಪ್ರಾಣಿ ಸತ್ತರೆ ಜೀವಜಾಲದ ಕೊಂಡಿ ತಪ್ಪೋದ್ರಲ್ಲಿ ಸಂಶಯವೇ ಇಲ್ಲ. ಹೀಗಾಗಿ ಅಲ್ಲಿ ವಿದ್ಯುತ್ ಹರಿಸಿದವನಿಗೆ ಶಿಕ್ಷೆ ಆಗಲೇ ಬೇಕು ಅಂತ ಮನಸ್ಸಿನೊಳಗೇ ಹೇಳಲೇಬೇಕಾಗುತ್ತದೆ.
ಆದರೆ ಇದೆಲ್ಲಾ ಒಂದು ಮುಖ. ಅದರ ಹಿಂದೆ ಇನ್ನೊಂದು ಮುಖ ಇದೆ.
ಅಲ್ಲಿ ಯಾಕಾಗಿ ವಿದ್ಯುತ್ ಹರಿಸಲಾಗಿತ್ತು?.ಅಲ್ಲೂ ಕೂಡಾ ಸಮಸ್ಯೆ ಇದೇ ಆನೆಯದ್ದು. ಹೊಲಗಳಿಗೆ ನುಗ್ಗಿ ಬೆಳೆ ನಾಶ ಮಾಡೋವಾಗ ಅಷ್ಟೂ ಪ್ರೀತಿಯಿಂದ ಬೆಳೆದ ಬೆಳೆ ನಾಶವಾಗೋವಾಗ ಯಾರು ತಾನೆ ಸುಮ್ಮನಿರ್ತಾನೆ ಹೇಳಿ. ಹಾಗೆ ಆತ ಅಲ್ಲೂ ಒಂದು ರಕ್ಷಣೆಗೆ ಮುಂದಾದ. ಆನೆ ಜೀವ ತೆತ್ತಿತು.
ಎಲ್ಲಾ ಕಡೆ ರೈತನಿಗೆ ಇರೋ ಸಮಸ್ಯೆ ಇದೆ.ಸರಕಾರ ಏನೋ ರೈತರ ಪರ ಅಂತೆಲ್ಲಾ ಹೇಳುತ್ತಿದ್ದರೂ ಅವನ ಗೋಳು ಮಾತ್ರಾ ಮುಗಿಯೋದೇ ಇಲ್ಲ.ಒಂದು ಕಡೆ ಬೆಳೆ ಬೆಳೆಯಲು ಅದೆಷ್ಟೋ ವಿಘ್ನಗಳು.ಬೆಳೆ ಬಂದರೆ ಮಾರಾಟದ ಸಮಸ್ಯೆ. ಅದೆಲ್ಲಾ ಆಗೋ ಹೊತ್ತಿಗೆ ಆತ ಸುಸ್ತೋ ಸುಸ್ತು. ಹೊಲದಲ್ಲಿ ಹುಲುಸಾಗಿ ಪೈರು ಬಂದಿದೆ ಅಂದ ಕೂಡಲೇ ಆನೆಗಳ ಹಿಂಡು ಕಾಲಿಡುತ್ತದೆ.ಒಮ್ಮೆ ಆನೆ ನುಗ್ಗಿದರೆ ಅದಷ್ಟೂ ಬೆಳೆಯನ್ನು ಆಪೋಶನ ತೆಗೆದುಕೊಳ್ಳಯುತ್ತದೆ. ಹಾಗಾಗಿ ಆ ಬೆಳೆಯ ರಕ್ಷಣೆ ಆಗಲೇಬೇಕು. ಅದು ಹೇಗೆ?, ಆನೆಗೆ ಸರಿಯಾದ ವ್ಯವಸ್ಥೆ ಮಾಡಿ ಅಂತ ಸರಕಾರಕ್ಕೆ ಹೇಳಿದರೂ ಕೇಳಿಸೋದೇ ಇಲ್ಲ. ಹಾಗಾದ್ರೆ ಇನ್ನೇನು ದಾರಿ ಅಂತ ಯೋಚಿಸುವಾಗ ,ಆತನಿಗೆ ಕಾಣುವ ಸುಲಭ ದಾರಿಯನ್ನು ಆತ ಆಯ್ಕೆ ಮಾಡುತ್ತಾನೆ. ಹಾಗಾಗಿ ಸರಕಾರವೇ ರೈತರ ಇಂತಹ ಸಮಸ್ಯೆ ನಿವಾರಣೆ ವ್ಯವಸ್ಥೆ ಮಾಡಬೇಕೇ ವಿನ: ಇನ್ಯಾವುದೇ ಅನ್ಯ ದಾರಿ ಇಲ್ಲ. ಮಂಗಗಳದ್ದೂ ಅದೇ ಕಾಟ. ಕಾಡಿನ ಆಹಾರವನ್ನು ಬಿಟ್ಟು ನಾಡಿಗೆ ಬಂದದ್ದೇ ತಡ , ಎಳ ತೆಂಗಿನಕಾಯಿ , ಅಡಿಕೆ ಹೀಗೇ ಎಲ್ಲವನ್ನೂ ನಾಶ ಮಾಡಿ ಓಡಿ ಬಿಡುತ್ತದೆ. ಅದನ್ನು ತಡೆಯೋದಾದರೂ ಹೇಗೆ?. ಹಾಗಾಗಿ ರೈತರು ಬೆಳೆ ರಕ್ಷಣೆಗೆ ಏನಾದರೊಂದು ದಾರಿ ನೋಡಬೇಕಾಗುವುದು ಅನಿವಾರ್ಯ. ಆಗ ಇಂತಹ ದುರಂತಗಳು ನಡೆಯುತ್ತದೆ.
ಇತ್ತ ರೈತ ಹೇಳ್ತಾನೆ ಏನ್ ಸ್ವಾಮಿ ತೆಂಗಿನ ಕಾಯಿಗೆ ರೇಟು ಏರ್ತಾನೆ ಇದೆ.ಆದ್ರೆ ನಮ್ಮಲ್ಲಿ ತೆಂಗಿನ ಕಾಯಿನೇ ಇಲ್ಲ. ಏನು ಅವಸ್ಥೆನೋ ಏನೋ ಮಂಗಗಳೆಲ್ಲಾ ಎಳೆ ಕಾಯನ್ನೇ ತೆಗೆದು ಹಾಳು ಮಾಡ್ತಾವೆ.ಕಾಯಿನೇ ಸಿಗೋದಿಲ್ಲ ಅಂತ ಆತ ತಲೆ ಮೇಲೆ ಕೈ ಹಿಡ್ಕಳ್ತಾನೆ.
ಆಗ ಅಲ್ಲೊಬ್ಬ ಹೇಳ್ತಾನೆ, ನೋಡಣ್ಣ ನೀನ್ ಹಂಗೆ ಕೂತ್ರೆ ಆಗಾಕಿಲ್ಲ , ಮಂಗ ಬರೋ ಹಾದಿಲಿ ಒಂದು ಬಾಳೆ ಗೊನೆ ಇಡು. ಅದ್ಕೆ ಒಂಚೂರು ವಿಷಾನೂ ಹಾಕಿಡು ಅದು ಮತ್ತೆ ಬರೋದೇ ಇಲ್ಲ ಅಂತಾನೆ ಆತ. ವಿಚಾರ ಇರೋದೇ ಇಲ್ಲಿ. ಮಂಗ ಬರುತ್ತೆ ಅಂತ ಆ ರೈತ ವಿಷ ಇಕ್ಕಿ ಆ ಮಂಗಗಳನ್ನು ಕೊಲ್ತಾನೆ. ಆ ನಂತ್ರ ಬೆಳೆನೂ ಸಿಗುತ್ತೆ , ಬೆಲೆನೂ ಇರುತ್ತೆ.
ಮೊನ್ನೆ ಮೊನ್ನೆ ಅಂತಹದ್ದೇ ಇನ್ನೊಂದು ಘಟನೆ ಇತ್ತು ನೋಡಿ ,ಅಲ್ಲೊಂದು ಆನೆ ಕರೆಂಟ್ ಶಾಕ್ನಿಂದ ಸತ್ತೇ ಹೋಯಿತಂತೆ.ಎಂತಾ ದುರಂತ ಮಾರಾಯ್ರೆ. ಹೀಗಾಗಬಾರದಿತ್ತು.
ನಿಜಕ್ಕೂ ಹಾಗಾಗಬಾರದಿತ್ತು.ಅದೊಂದು ಕಾಡುಪ್ರಾಣಿ.ಜೀವಜಾಲದ ಕೊಂಡಿಗಳಲ್ಲಿ ಅದೂ ಒಂದು. ಹೀಗೇ ಒಂದೋಂದೇ ಪ್ರಾಣಿ ಸತ್ತರೆ ಜೀವಜಾಲದ ಕೊಂಡಿ ತಪ್ಪೋದ್ರಲ್ಲಿ ಸಂಶಯವೇ ಇಲ್ಲ. ಹೀಗಾಗಿ ಅಲ್ಲಿ ವಿದ್ಯುತ್ ಹರಿಸಿದವನಿಗೆ ಶಿಕ್ಷೆ ಆಗಲೇ ಬೇಕು ಅಂತ ಮನಸ್ಸಿನೊಳಗೇ ಹೇಳಲೇಬೇಕಾಗುತ್ತದೆ.
ಆದರೆ ಇದೆಲ್ಲಾ ಒಂದು ಮುಖ. ಅದರ ಹಿಂದೆ ಇನ್ನೊಂದು ಮುಖ ಇದೆ.
ಅಲ್ಲಿ ಯಾಕಾಗಿ ವಿದ್ಯುತ್ ಹರಿಸಲಾಗಿತ್ತು?.ಅಲ್ಲೂ ಕೂಡಾ ಸಮಸ್ಯೆ ಇದೇ ಆನೆಯದ್ದು. ಹೊಲಗಳಿಗೆ ನುಗ್ಗಿ ಬೆಳೆ ನಾಶ ಮಾಡೋವಾಗ ಅಷ್ಟೂ ಪ್ರೀತಿಯಿಂದ ಬೆಳೆದ ಬೆಳೆ ನಾಶವಾಗೋವಾಗ ಯಾರು ತಾನೆ ಸುಮ್ಮನಿರ್ತಾನೆ ಹೇಳಿ. ಹಾಗೆ ಆತ ಅಲ್ಲೂ ಒಂದು ರಕ್ಷಣೆಗೆ ಮುಂದಾದ. ಆನೆ ಜೀವ ತೆತ್ತಿತು.
ಎಲ್ಲಾ ಕಡೆ ರೈತನಿಗೆ ಇರೋ ಸಮಸ್ಯೆ ಇದೆ.ಸರಕಾರ ಏನೋ ರೈತರ ಪರ ಅಂತೆಲ್ಲಾ ಹೇಳುತ್ತಿದ್ದರೂ ಅವನ ಗೋಳು ಮಾತ್ರಾ ಮುಗಿಯೋದೇ ಇಲ್ಲ.ಒಂದು ಕಡೆ ಬೆಳೆ ಬೆಳೆಯಲು ಅದೆಷ್ಟೋ ವಿಘ್ನಗಳು.ಬೆಳೆ ಬಂದರೆ ಮಾರಾಟದ ಸಮಸ್ಯೆ. ಅದೆಲ್ಲಾ ಆಗೋ ಹೊತ್ತಿಗೆ ಆತ ಸುಸ್ತೋ ಸುಸ್ತು. ಹೊಲದಲ್ಲಿ ಹುಲುಸಾಗಿ ಪೈರು ಬಂದಿದೆ ಅಂದ ಕೂಡಲೇ ಆನೆಗಳ ಹಿಂಡು ಕಾಲಿಡುತ್ತದೆ.ಒಮ್ಮೆ ಆನೆ ನುಗ್ಗಿದರೆ ಅದಷ್ಟೂ ಬೆಳೆಯನ್ನು ಆಪೋಶನ ತೆಗೆದುಕೊಳ್ಳಯುತ್ತದೆ. ಹಾಗಾಗಿ ಆ ಬೆಳೆಯ ರಕ್ಷಣೆ ಆಗಲೇಬೇಕು. ಅದು ಹೇಗೆ?, ಆನೆಗೆ ಸರಿಯಾದ ವ್ಯವಸ್ಥೆ ಮಾಡಿ ಅಂತ ಸರಕಾರಕ್ಕೆ ಹೇಳಿದರೂ ಕೇಳಿಸೋದೇ ಇಲ್ಲ. ಹಾಗಾದ್ರೆ ಇನ್ನೇನು ದಾರಿ ಅಂತ ಯೋಚಿಸುವಾಗ ,ಆತನಿಗೆ ಕಾಣುವ ಸುಲಭ ದಾರಿಯನ್ನು ಆತ ಆಯ್ಕೆ ಮಾಡುತ್ತಾನೆ. ಹಾಗಾಗಿ ಸರಕಾರವೇ ರೈತರ ಇಂತಹ ಸಮಸ್ಯೆ ನಿವಾರಣೆ ವ್ಯವಸ್ಥೆ ಮಾಡಬೇಕೇ ವಿನ: ಇನ್ಯಾವುದೇ ಅನ್ಯ ದಾರಿ ಇಲ್ಲ. ಮಂಗಗಳದ್ದೂ ಅದೇ ಕಾಟ. ಕಾಡಿನ ಆಹಾರವನ್ನು ಬಿಟ್ಟು ನಾಡಿಗೆ ಬಂದದ್ದೇ ತಡ , ಎಳ ತೆಂಗಿನಕಾಯಿ , ಅಡಿಕೆ ಹೀಗೇ ಎಲ್ಲವನ್ನೂ ನಾಶ ಮಾಡಿ ಓಡಿ ಬಿಡುತ್ತದೆ. ಅದನ್ನು ತಡೆಯೋದಾದರೂ ಹೇಗೆ?. ಹಾಗಾಗಿ ರೈತರು ಬೆಳೆ ರಕ್ಷಣೆಗೆ ಏನಾದರೊಂದು ದಾರಿ ನೋಡಬೇಕಾಗುವುದು ಅನಿವಾರ್ಯ. ಆಗ ಇಂತಹ ದುರಂತಗಳು ನಡೆಯುತ್ತದೆ.
02 ಜನವರಿ 2011
ಬಂದಿದೆ 2011
ಇನ್ನೊಂದು ವರ್ಷ ಇದೆ. 2012 ಬರಲು.
ಪ್ರತೀ ವರ್ಷವೂ ಡಿಸೆಂಬರ್ 31 ರ ನಂತರ ಕಾತರದ ಕ್ಷಣ.ಒಂದು ಮೆಸೇಜ್ ಮಾಡಲು , ಒಂದು ಮೈಲ್ ಮಾಡಲು , ಆ ದಿನ ಫೋನು ಮಾಡಿದ ಗೆಳೆಯರಿಗೆ ಶುಭಾಶಯ ಹೇಳಲು.ಇದಿಷ್ಟೇ. ಮರುದಿನ ಯಥಾಪ್ರಕಾರ.ಅದೇ ಸಮಯ , ಅದೇ ಹಗಲು ಅದೇ ರಾತ್ರಿ. ಅದೇ ಟ್ರಾಫಿಕ್ ಅದೇ ಕೆಲಸ . . . ಎಲ್ಲವೂ ಅದೇ.ಹೊಸತು ಏನೂ ಇಲ್ಲ. ಆದರೂ ಮತ್ತೊಂದು ವರ್ಷ ಅಂದಾಗ ಅಲ್ಲೇನೋ ಒಂದು ಹೊಸದು ಹುಡುಕುವ ಕಾಯಕ.
ವರ್ಷ ಮುಗಿದಂತೆ , ಸಮಯ ಕಳೆದಂತೆ ,ನಿಮಿಷ ಮುಗಿದಂತೆ ನಮ್ಮ ಆಯಸ್ಸೂ ಮುಗಿಯುತ್ತಿದೆ. ಸಾವು ಹತ್ತಿರವಾಗುತ್ತದೆ. ಅಂದರೆ ಉಸಿರು ನಿಲ್ಲುವ ಹೊತ್ತು ಹತ್ತಿರವಾಗುತ್ತಿದೆ ಅಂತಾನೇ ಅರ್ಥ.ಹಾಗೆಂದು ಅದರದ್ದೇ ಧ್ಯಾನ ಮಾಡಿಕೊಂಡಿರುವುದಕ್ಕೆ ಆಗುವುದಿಲ್ಲ. ಆ ದಿನ ಬರುವವರೆಗೂ ಸಾಧನೆಗಳನ್ನು ನಿಲ್ಲಿಸಲಾಗುವುದಿಲ್ಲ, ಜವಾಬ್ದಾರಿಯ ಹೊರೆಯನ್ನು ಇಳಿಸುವುದಕ್ಕಾಗುವುದಿಲ್ಲ.ಮಾಡಲೇಬೇಕು. ಸವಾಲುಗಳನ್ನು ಎದುರಿಸಲೇಬೇಕು. ಅದು ನಿರಂತರ.ಹಾಗಿದ್ದರೂ ಎಲ್ಲಾದರೂ ಒಂದು ಕಡೆ ಒಮ್ಮೆ ನಿಂತು ಬಂದ ದಾರಿಯನ್ನು ಒಮ್ಮೆ ಅವಲೋಕಿಸಬೇಡವೇ.ಅದಕ್ಕೆ ಈ ಡಿಸೆಂಬರ್ 31 ಒಂದು ಪಕ್ಷವಾದ ಕಾಲವಾಗುತ್ತದೆ. ಹಾಗೆ ಹಿಂತಿರುಗಿ ನೋಡಿದಾಗ ಅದೆಷ್ಟೂ ಸಿಹಿ ಕಹಿ ಅನುಭಗಳ ಮೂಟೆ ಕಾಣುತ್ತದೆ. ಅದೆಲ್ಲವೂ ಮುಂದಿನ ಕಾಲಕ್ಕೆ ಒಂದು ಪಾಠವಾಗುತ್ತದೆ. ತಪ್ಪುಗಳನ್ನು ತಿದ್ದಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಒಂದಷ್ಟು ಹೊಸ ಸಂಕಲ್ಪಗಳನ್ನು ಮಾಡಿಕೊಳ್ಳುವುದಕ್ಕೂ ಅಲ್ಲೊಂದು ಅವಕಾಶ ಸಿಗುತ್ತದೆ. ಹಾಗೇ ಕ್ಯಾಲೆಂಡರ್ ಬದಲಾದಂತೆ ಅನುಭವದ ಮೂಟೆಗಳು ದೊಡ್ಡದಾಗುತ್ತಾ ಹೋಗುತ್ತದೆ. ಬುದ್ದಿ ಮಾಗುತ್ತಾ ಹೋಗುತ್ತದೆ , ದೇಹಕ್ಕೆ ಆಯಸ್ಸು ಹೆಚ್ಚಾಗುತ್ತಾ ಸಾಗುತ್ತದೆ. ಕಾಲಚಕ್ರ ತಿರುಗುತ್ತಲೇ ಸಾಗುತ್ತದೆ.
ಹಾಗಾಗಿ ಹೊಸವರ್ಷ ಅಂದರೆ ಅದೊಂದು ಕ್ಯಾಲೆಂಡರ್ ಬದಲಾವಣೆಯ ಸಮಯ. ಹೊಸ ಭರವಸೆಗಳನ್ನು ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಕಾಲ ಅದಲ್ಲ. ಭೂತಕಾಲವನ್ನು , ಅರ್ಥಾತ್ ಇತಿಹಾಸವನ್ನು ಅವಲೋಕಿಸಿ ಭವಿಷ್ಯ ಕಾಲವನ್ನು ನಿರ್ಧರಿಸುವ , ರೂಪಿಸುವ ಕಾಲ ಅದು. ಯಾಕೆಂದರೆ ಪ್ರತೀ ಕ್ಷಣ , ನಿಮಿಷ ನಿಮಿಷವೂ ನಮಗೆ ಹೊಸದೇ. ಮತ್ತೆ ಅದೇ ಸಮಯ ನಮಗೆ ಬೇಕೆಂದರೂ ಸಿಗದು. ಅದು ಯಾವತ್ತೂ ಹೊಸದೇ , ಮತ್ತೆ ಸಿಗದ ವಸ್ತು ಅದು.
ಹಾಗಾಗಿ ಪ್ರತೀ ಕ್ಷಣವೂ ನಮಗೆ ಹ್ಯಾಪೀ ನ್ಯೂ ಇಯರ್.
. . . . . . . . . . . . . . . .. . . . ..
ಪ್ರತೀ ವರ್ಷವೂ ಡಿಸೆಂಬರ್ 31 ರ ನಂತರ ಕಾತರದ ಕ್ಷಣ.ಒಂದು ಮೆಸೇಜ್ ಮಾಡಲು , ಒಂದು ಮೈಲ್ ಮಾಡಲು , ಆ ದಿನ ಫೋನು ಮಾಡಿದ ಗೆಳೆಯರಿಗೆ ಶುಭಾಶಯ ಹೇಳಲು.ಇದಿಷ್ಟೇ. ಮರುದಿನ ಯಥಾಪ್ರಕಾರ.ಅದೇ ಸಮಯ , ಅದೇ ಹಗಲು ಅದೇ ರಾತ್ರಿ. ಅದೇ ಟ್ರಾಫಿಕ್ ಅದೇ ಕೆಲಸ . . . ಎಲ್ಲವೂ ಅದೇ.ಹೊಸತು ಏನೂ ಇಲ್ಲ. ಆದರೂ ಮತ್ತೊಂದು ವರ್ಷ ಅಂದಾಗ ಅಲ್ಲೇನೋ ಒಂದು ಹೊಸದು ಹುಡುಕುವ ಕಾಯಕ.
ವರ್ಷ ಮುಗಿದಂತೆ , ಸಮಯ ಕಳೆದಂತೆ ,ನಿಮಿಷ ಮುಗಿದಂತೆ ನಮ್ಮ ಆಯಸ್ಸೂ ಮುಗಿಯುತ್ತಿದೆ. ಸಾವು ಹತ್ತಿರವಾಗುತ್ತದೆ. ಅಂದರೆ ಉಸಿರು ನಿಲ್ಲುವ ಹೊತ್ತು ಹತ್ತಿರವಾಗುತ್ತಿದೆ ಅಂತಾನೇ ಅರ್ಥ.ಹಾಗೆಂದು ಅದರದ್ದೇ ಧ್ಯಾನ ಮಾಡಿಕೊಂಡಿರುವುದಕ್ಕೆ ಆಗುವುದಿಲ್ಲ. ಆ ದಿನ ಬರುವವರೆಗೂ ಸಾಧನೆಗಳನ್ನು ನಿಲ್ಲಿಸಲಾಗುವುದಿಲ್ಲ, ಜವಾಬ್ದಾರಿಯ ಹೊರೆಯನ್ನು ಇಳಿಸುವುದಕ್ಕಾಗುವುದಿಲ್ಲ.ಮಾಡಲೇಬೇಕು. ಸವಾಲುಗಳನ್ನು ಎದುರಿಸಲೇಬೇಕು. ಅದು ನಿರಂತರ.ಹಾಗಿದ್ದರೂ ಎಲ್ಲಾದರೂ ಒಂದು ಕಡೆ ಒಮ್ಮೆ ನಿಂತು ಬಂದ ದಾರಿಯನ್ನು ಒಮ್ಮೆ ಅವಲೋಕಿಸಬೇಡವೇ.ಅದಕ್ಕೆ ಈ ಡಿಸೆಂಬರ್ 31 ಒಂದು ಪಕ್ಷವಾದ ಕಾಲವಾಗುತ್ತದೆ. ಹಾಗೆ ಹಿಂತಿರುಗಿ ನೋಡಿದಾಗ ಅದೆಷ್ಟೂ ಸಿಹಿ ಕಹಿ ಅನುಭಗಳ ಮೂಟೆ ಕಾಣುತ್ತದೆ. ಅದೆಲ್ಲವೂ ಮುಂದಿನ ಕಾಲಕ್ಕೆ ಒಂದು ಪಾಠವಾಗುತ್ತದೆ. ತಪ್ಪುಗಳನ್ನು ತಿದ್ದಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಒಂದಷ್ಟು ಹೊಸ ಸಂಕಲ್ಪಗಳನ್ನು ಮಾಡಿಕೊಳ್ಳುವುದಕ್ಕೂ ಅಲ್ಲೊಂದು ಅವಕಾಶ ಸಿಗುತ್ತದೆ. ಹಾಗೇ ಕ್ಯಾಲೆಂಡರ್ ಬದಲಾದಂತೆ ಅನುಭವದ ಮೂಟೆಗಳು ದೊಡ್ಡದಾಗುತ್ತಾ ಹೋಗುತ್ತದೆ. ಬುದ್ದಿ ಮಾಗುತ್ತಾ ಹೋಗುತ್ತದೆ , ದೇಹಕ್ಕೆ ಆಯಸ್ಸು ಹೆಚ್ಚಾಗುತ್ತಾ ಸಾಗುತ್ತದೆ. ಕಾಲಚಕ್ರ ತಿರುಗುತ್ತಲೇ ಸಾಗುತ್ತದೆ.
ಹಾಗಾಗಿ ಹೊಸವರ್ಷ ಅಂದರೆ ಅದೊಂದು ಕ್ಯಾಲೆಂಡರ್ ಬದಲಾವಣೆಯ ಸಮಯ. ಹೊಸ ಭರವಸೆಗಳನ್ನು ನಿರೀಕ್ಷೆಗಳನ್ನು ಇಟ್ಟುಕೊಳ್ಳುವ ಕಾಲ ಅದಲ್ಲ. ಭೂತಕಾಲವನ್ನು , ಅರ್ಥಾತ್ ಇತಿಹಾಸವನ್ನು ಅವಲೋಕಿಸಿ ಭವಿಷ್ಯ ಕಾಲವನ್ನು ನಿರ್ಧರಿಸುವ , ರೂಪಿಸುವ ಕಾಲ ಅದು. ಯಾಕೆಂದರೆ ಪ್ರತೀ ಕ್ಷಣ , ನಿಮಿಷ ನಿಮಿಷವೂ ನಮಗೆ ಹೊಸದೇ. ಮತ್ತೆ ಅದೇ ಸಮಯ ನಮಗೆ ಬೇಕೆಂದರೂ ಸಿಗದು. ಅದು ಯಾವತ್ತೂ ಹೊಸದೇ , ಮತ್ತೆ ಸಿಗದ ವಸ್ತು ಅದು.
ಹಾಗಾಗಿ ಪ್ರತೀ ಕ್ಷಣವೂ ನಮಗೆ ಹ್ಯಾಪೀ ನ್ಯೂ ಇಯರ್.
. . . . . . . . . . . . . . . .. . . . ..
29 ಡಿಸೆಂಬರ್ 2010
ಹಳ್ಳಿ ಚುನಾವಣೆ
ಈಗಂತೂ ಹಳ್ಳಿಯಲ್ಲಿ ಸ್ವಲ್ಪ ನೆಮ್ಮದಿ. ಮೈಕಾಸುರುನ ಅಬ್ಬರ ಇಲ್ಲ.ಕಣ್ಣಿಗೆ ಕುಕ್ಕುವ ಬ್ಯಾನರುಗಳು ಇಲ್ಲವೇ ಇಲ್ಲ.ರಸ್ತೆಯಲ್ಲಿ ಚಿತ್ತಾರಗಳು ಕಾಣೋದೇ ಇಲ್ಲ. ಹೀಗಾಗಿ ಈಗ ಚುನಾವಣೆ ನಡೆಯುತ್ತೋ ಇಲ್ಲವೋ ಅಂತಾನೇ ಗೊತ್ತಾಗಲ್ಲ. ಒಳ್ಳೇದೇ ಆಯ್ತು ಬಿಡಿ ಅಂತ ರಸ್ತೆ ಬದಿಯಲ್ಲಿ ಒಂದಷ್ಟು ಜನ ಮಾತಾಡ್ತಾ ಇರಬೇಕಾದ್ರೆ ,ಅಲ್ಲಾರೀ , ಕೇರಳದಷ್ಟು ಇಲೆಕ್ಷನ್ ಅಬ್ಬರ ಇಲ್ಲಿ ಇಲ್ಲಾರೀ , ಇದೆಂತಾ ಇಲೆಕ್ಷನ್ ಬರೀ ಸಪ್ಪೆ ಸಪ್ಪೆ ಅನ್ನೋರೂ ಅದೇ ರಸ್ತೆ ಬದಿಯಲ್ಲಿ ಕಾಣ್ತಾರೆ.
ಅದೇನೇ ಇರ್ಲಿ. ಈಗಂತೂ ನಮ್ಮ ಮಟ್ಟಿಗೆ ಹೇಳೋದಾದ್ರೆ ಆಯೋಗ ಒಳ್ಳೆ ಕೆಲ್ಸನೇ ಮಾಡಿದೆ. ಚುನಾವಣೆ ಸೈಲೆಂಟ್. ಆದ್ರೆ ಈ ರಾಜಕಾರಣಿಗಳು , ರಾಜಕೀಯ ಪಕ್ಷಗಳು ಮಾತಗ್ರ ಬಿಡಬೇಕಲ್ಲ , ಮೀಡಿಯಾಗಳನ್ನು ಬಳಸಿಕೊಂಡು ಆರೋಪ , ಪ್ರತ್ಯಾರೋಪ. ಅಲ್ಲೆಲ್ಲಾದರು ಒಂದೆರಡು ರಾಜಕೀಯ ಚುನಾವಣಾ ಭಾಷಣ , ಅಲ್ಲೂ ಆ ಪಕ್ಷ ಈ ಪಕ್ಷವನ್ನು ದೂರೋದು , ಈ ಪಕ್ಷ ಆ ಪಕ್ಷವನ್ನು ದೂರೋದು. ಆ ನಂತ್ರ ಒಂದೆರಡು ರೋಡ್ ಶೋ. ಜೊತೆ ಜೊತೆಗೆ ಮನೆ ಮನೆ ಭೇಟಿ. ಆಗ ಜನ ಏನಾದ್ರೂ ಹೇಳೀದ್ರೆ ಅದು ಹಾಗಲ್ಲ ಹೀಗೆ. ಆ ಪಕ್ಷದ ಕ್ಯಾಂಡಿಡೇಟ್ ಸರಿ ಇಲ್ಲ. ನಮ್ಮವರೇ ಬೆಸ್ಟ್ ಯಾಕಂದ್ರೆ ಅವರು ಹೀಗೆ ಮಾಡಿದ್ದಾರೆ, ಆ ಪಕ್ಷ ದೊಡ್ಡ ಹೆಗ್ಗಣ, ಅಲ್ಲಿ ಇಷ್ಟು ತಿಂದಿದೆ ಇಲ್ಲಿ ತಿಂದಿದೆ , ಅವರು ಹಾಗೆ ಇವರು ಹೀಗೆ ಅಂತ ಮನೆಗೆ ಬಂದಿರೋ ಐದಾರು ಜನ ಒಬ್ಬರ ಹಿಂದೆ ಒಬ್ಬರಂತೆ ಮಾತಾಡ್ತಾರೆ. ಇಲ್ಲಿ ಮನೆಯಲ್ಲಿ ಮಾತನಾಡೋ ಒಬ್ಬ ವ್ಯಕ್ತಿಗೆ ಗೊಂದಲ. ಯಾಕಂದ್ರೆ ನಿನ್ನೆ ಪೇಪರಲ್ಲೂ ಅದು ಇತ್ತು , ಆ ಲೀಡರ್ ಹೀಗೆ ಹೇಳಿದ್ದಾನೆ. ನಾನು ಮೊನ್ನೆ ಅದೇ ಪೇಪರಲ್ಲಿ ಹಾಗೆ ಓದಿದ್ದು ಹೌದು ಅಂತ ಮನಸ್ಸಲ್ಲೇ ನೆನೆದು . ಓಕೆ ಓಕೆ ಅಂತಾನೆ. ಮರುದಿನ ಇನ್ನೊಂದು ಪಕ್ಷದ ಕಾರ್ಯಕರ್ತರು ಬಂದು ಇವರದ್ದು ಅದೇ ಕ್ಯಾಸೆಟ್. ಆದ್ರೆ ಅದು ಮಾತ್ರಾ ಬಿ ಸೈಡ್. ಆಗಲೂ ಮತ್ತೆ ಮತದಾರನಿಗೆ ಗೊಂದಲ. ಯಾಕಂದ್ರೆ ಪೇಪರು , ಟಿವಿ ನೋಡಿದ್ರೆ ಇದ್ಯಾವುದೂ ಅರ್ಥ ಆಗಲ್ಲ. ಒಂದೊಂದು ದಿನ ಒಂದೊಂದು ಥರಾ ಇರುತ್ತೆ.ಹಾಗಾಗಿ, ಯಾವುದಾದರೇನು ಒಂದಕ್ಕೆ ಒತ್ತಿದರೆ ಆಯ್ತು ಅಂತ ಹೋಗ್ತಾನೆ ಓಟು ಹಾಕಿ ಬರ್ತಾನೆ. ಇದು ಹಳ್ಳಿ ಕತೆ.
ಇಲ್ಲಿ ಅಭಿವೃದ್ದಿ ಬಗ್ಗೆ ಮಾತಾಡೋ ಹಾಗಿಲ್ಲ. ಎಲ್ಲಾನು ಆಗಿದೆ ಅಂತದೆ ಆಡಳಿತ ನಡೆಸಿದ ಪಕ್ಷ. ಇಲ್ಲಾ ಆಗಿಲ್ಲ ಅನ್ನುತ್ತೆ ವಿರೋಧ ಪಕ್ಷ.ಆಗಿದೆ ಬೇಕಿದ್ರೆ ನೋಡಿ ಅಂತಾರೆ ಆಡಳಿತ ಮಾಡಿರೋರು , ಹಾಗಿದ್ರೆ ತೋರ್ಸಿ ಅನ್ನುತ್ತೆ ವಿರೋಧ ಪಕ್ಷ.. . ಹೀಗೆ ಮಾತಿನ ಸಮರ ಮಾಧ್ಯಮದ ಮೂಲಕ ನಡೆಯುತ್ತೆ.ಎಲ್ಲೂ ಮುಖಾಮಿಖಿ ಆಗೋದೇ ಇಲ್ಲ. ಇದೆಲ್ಲಾ ಯಾವಾಗ ಚರ್ಚೆ ನಡೆಯೋದು ಗೊತ್ತಾ ಎಲೆಕ್ಷನ್ ಡಿಕ್ಲೇರ್ ಆಗಿ ಕ್ಯಾಂಡಿಡೇಟ್ ಸೆಲೆಕ್ಟಟ್ ಆದ ಬಳಿಕ ಪ್ರಚಾರ ಶುರು ಆದ ಮೇಲೆ. ಅಷ್ಟು ಸಮಯ ಸುಮ್ಮನಿದ್ದು ಚುನಾವಣೆ ಬಂದಾಗ ಇದೆಲ್ಲಾ ನೆನಪಾಗುತ್ತೆ. ಜನರನ್ನು ಗೊಂದಲ ಗೊಂದಲ ಮಾಡಿ ಹಾಕುತ್ತೆ. ಅದೇ ಹಳ್ಳಿ ಜನ ಬೆಳೆದ ಬೆಳೆಗಳಿಗೆ ಬೆಲೆ ಸಿಗಬೇಕು ಅನ್ನೋ ವಿಚಾರದಲ್ಲಿ ಒಬ್ಬನೇ ಒಬ್ಬ ಮಾತಾಡೋಲ್ಲ. ಮಾತನಾಡಿದರೂ ಎಲೆಕ್ಷನ್ ಮುಗಿದ ಮೇಲೆ ಮರೆತೇ ಹೋಗಿರುತ್ತೆ.
ಇನ್ನು ನೋಡಿ ಈಗೀಗ ಹಳ್ಳಿ ಜನಾನು ಸ್ವಲ್ಪ ಸ್ವಾರ್ಥ ನೋಡ್ತಾರೆ. ನೋಟು ಸಿಕ್ರೆ ಫೀಲ್ಡ್ , ಇಲ್ಲಾಂದ್ರೆ ಇಲ್ಲ.
ಆವತ್ತು ಕಾಲೇಜು ದಿನಗಳಲ್ಲಿ ಒಂದು ಇಂಟೆರೆಸ್ಟ್ ಇತ್ತು. ಫೀಲ್ಡ್ ಹೋಗೋದು ನಮಗೂ ಒಂದು ಖುಷಿ. ತಲೆಗೆ ಪಕ್ಷದ ಟೊಪ್ಪಿ ಹಾಕಿ ಉರಿಬಿಸಿಲಿನಲ್ಲೂ ಪಕ್ಷಕ್ಕಾಗಿ ಕೆಲಸ ಮಾಡುವುದೇ ಖುಷಿ. ಈಗ ಹಾಗಲ್ಲ. ಸ್ವಲ್ಪ ಯೋಚನೆ ಮಾಡಿದಾಗ ಓಟು ಹಾಕೋ ಕಾಲ. ಮೊನ್ನೆ ಹೀಗೇ ಸುಮ್ಮನೆ ಒಂದು ಪಾರ್ಟಿಯವರೊಂದಿಗೆ ಮಾತನಾಡುತ್ತಾ ಇದ್ದೆ. ಆಗ ಅಲ್ಲೊಬ್ಬ ಬಂದ. ಸ್ವಾಮೀ ಓಟು ಬಂತು ಇಂಥವರು ನಮ್ಮ ಕ್ಯಾಂಡಿಡೇಟ್ , ನಮಗೇ ಓಟು ಹಾಕಿ ಅಂದ್ರು. ಆಗ ಅವನಂದ , ನೋಡಿ ನನಗೆ ಆವತ್ತು ನಿಮ್ಮ ಈ ಕ್ಯಾಂಡಿಡೇಟ್ ನನ್ನ ಒಂದು ಕೇಸಲ್ಲಿ ಹೆಲ್ಪ್ ಮಾಡಿಲ್ಲ. ಹಾಗಾಗಿ ನಾನು ಅವರಿಗೆ ಓಟು ಹಾಕೋದಿಲ್ಲ ಅಂದ. ಮಾತು . . ಸಮಾಧಾನ . . ಓಲೈಕೆ ಎಲ್ಲಾ ನಡೀತು . ಕೊನೆಗೆ ಸರಿ ಆತ ಮುಂದೆ ಹೋದ. ಆ ನಂತರ ವಿಚಾರಿಸಿದಾಗ ತಿಳೀತು, ಆತ ಇನ್ನೊಂದು ಜಾಗವನ್ನು ಕಬಳಿಸಿ ಬೇಲಿ ಹಾಕಿದ್ದ. ಅದೊಂದು ಅಕ್ರಮ ಕೆಲಸ.ಇದಕ್ಕೆ ಸಪೋರ್ಟ್ ಮಾಡಿಲ್ಲ ಅಂತ ಈಗ ಓಟು ಹಾಕೋದಿಲ್ಲ ಅಂತ ಆತ ಹೇಳ್ತಿದ್ದಾನೆ ಅಂತ ಗೊತ್ತಾಯ್ತ. ನಾವು ಯಾವುದು ಅನ್ಯಾಯ , ಭ್ರಷ್ಠಾಚಾರ ಅಂತ ನಾವು ಹೇಳ್ತೆವೆಯೋ ಅದೇ ಕೆಲವೊಮ್ಮೆ ಹಳ್ಳಿ ಚುನಾವಣೆಯ ಇಶ್ಯೂ ಆಗುತ್ತೆ. ಅಲ್ಲಿ ಆತನ ಪ್ರಭಾವದಲ್ಲಿ ಐವತ್ತು ಓಟು ಇದೆ ಎಂದಾದರೆ ಯಾವ ರಾಜಕೀಯ ಪಕ್ಷ , ರಾಜಕಾರಣಿ ಅದೇ ಅನ್ಯಾಯಕ್ಕೆ ಸಹಕರಿಸೋದಿಲ್ಲ ಹೇಳೀ. ಅಂದು ಹಾಗೆ ಸಹಕರಿಸದೇ ಇದ್ದದ್ದು ಇಂದು ತೊಂದರೆಯಾಗಿದೆ. ಹಳ್ಳಿ ರಾಜಕೀಯದಲ್ಲಿ ಒಂದು ಓಟು ಕೂಡಾ ಮುಖ್ಯವಾಗುವ ಸಮಯದಲ್ಲಿ ಇಂತಹ ಸಂಗತಿಗಳು ಕೂಡಾ ಮುಖ್ಯವಾಗುತ್ತವೆ.
ಹಾಗಾಗಿ ಈ ಭ್ರಷ್ಠಾಚಾರ , ಅನ್ಯಾಯ , ಮೋಸ , ವಂಚನೆಗಳು ಹೇಗೆ ಆರಂಭವಾಯಿತು? ಹೇಗೆ ಮುಗಿಯುತ್ತೆ?.
ಇದೆಲ್ಲಾ ಹಳ್ಳಿ ರಾಜಕೀಯದ ತಲೆಬಿಸಿ.
ಅದೇನೇ ಇರ್ಲಿ. ಈಗಂತೂ ನಮ್ಮ ಮಟ್ಟಿಗೆ ಹೇಳೋದಾದ್ರೆ ಆಯೋಗ ಒಳ್ಳೆ ಕೆಲ್ಸನೇ ಮಾಡಿದೆ. ಚುನಾವಣೆ ಸೈಲೆಂಟ್. ಆದ್ರೆ ಈ ರಾಜಕಾರಣಿಗಳು , ರಾಜಕೀಯ ಪಕ್ಷಗಳು ಮಾತಗ್ರ ಬಿಡಬೇಕಲ್ಲ , ಮೀಡಿಯಾಗಳನ್ನು ಬಳಸಿಕೊಂಡು ಆರೋಪ , ಪ್ರತ್ಯಾರೋಪ. ಅಲ್ಲೆಲ್ಲಾದರು ಒಂದೆರಡು ರಾಜಕೀಯ ಚುನಾವಣಾ ಭಾಷಣ , ಅಲ್ಲೂ ಆ ಪಕ್ಷ ಈ ಪಕ್ಷವನ್ನು ದೂರೋದು , ಈ ಪಕ್ಷ ಆ ಪಕ್ಷವನ್ನು ದೂರೋದು. ಆ ನಂತ್ರ ಒಂದೆರಡು ರೋಡ್ ಶೋ. ಜೊತೆ ಜೊತೆಗೆ ಮನೆ ಮನೆ ಭೇಟಿ. ಆಗ ಜನ ಏನಾದ್ರೂ ಹೇಳೀದ್ರೆ ಅದು ಹಾಗಲ್ಲ ಹೀಗೆ. ಆ ಪಕ್ಷದ ಕ್ಯಾಂಡಿಡೇಟ್ ಸರಿ ಇಲ್ಲ. ನಮ್ಮವರೇ ಬೆಸ್ಟ್ ಯಾಕಂದ್ರೆ ಅವರು ಹೀಗೆ ಮಾಡಿದ್ದಾರೆ, ಆ ಪಕ್ಷ ದೊಡ್ಡ ಹೆಗ್ಗಣ, ಅಲ್ಲಿ ಇಷ್ಟು ತಿಂದಿದೆ ಇಲ್ಲಿ ತಿಂದಿದೆ , ಅವರು ಹಾಗೆ ಇವರು ಹೀಗೆ ಅಂತ ಮನೆಗೆ ಬಂದಿರೋ ಐದಾರು ಜನ ಒಬ್ಬರ ಹಿಂದೆ ಒಬ್ಬರಂತೆ ಮಾತಾಡ್ತಾರೆ. ಇಲ್ಲಿ ಮನೆಯಲ್ಲಿ ಮಾತನಾಡೋ ಒಬ್ಬ ವ್ಯಕ್ತಿಗೆ ಗೊಂದಲ. ಯಾಕಂದ್ರೆ ನಿನ್ನೆ ಪೇಪರಲ್ಲೂ ಅದು ಇತ್ತು , ಆ ಲೀಡರ್ ಹೀಗೆ ಹೇಳಿದ್ದಾನೆ. ನಾನು ಮೊನ್ನೆ ಅದೇ ಪೇಪರಲ್ಲಿ ಹಾಗೆ ಓದಿದ್ದು ಹೌದು ಅಂತ ಮನಸ್ಸಲ್ಲೇ ನೆನೆದು . ಓಕೆ ಓಕೆ ಅಂತಾನೆ. ಮರುದಿನ ಇನ್ನೊಂದು ಪಕ್ಷದ ಕಾರ್ಯಕರ್ತರು ಬಂದು ಇವರದ್ದು ಅದೇ ಕ್ಯಾಸೆಟ್. ಆದ್ರೆ ಅದು ಮಾತ್ರಾ ಬಿ ಸೈಡ್. ಆಗಲೂ ಮತ್ತೆ ಮತದಾರನಿಗೆ ಗೊಂದಲ. ಯಾಕಂದ್ರೆ ಪೇಪರು , ಟಿವಿ ನೋಡಿದ್ರೆ ಇದ್ಯಾವುದೂ ಅರ್ಥ ಆಗಲ್ಲ. ಒಂದೊಂದು ದಿನ ಒಂದೊಂದು ಥರಾ ಇರುತ್ತೆ.ಹಾಗಾಗಿ, ಯಾವುದಾದರೇನು ಒಂದಕ್ಕೆ ಒತ್ತಿದರೆ ಆಯ್ತು ಅಂತ ಹೋಗ್ತಾನೆ ಓಟು ಹಾಕಿ ಬರ್ತಾನೆ. ಇದು ಹಳ್ಳಿ ಕತೆ.
ಇಲ್ಲಿ ಅಭಿವೃದ್ದಿ ಬಗ್ಗೆ ಮಾತಾಡೋ ಹಾಗಿಲ್ಲ. ಎಲ್ಲಾನು ಆಗಿದೆ ಅಂತದೆ ಆಡಳಿತ ನಡೆಸಿದ ಪಕ್ಷ. ಇಲ್ಲಾ ಆಗಿಲ್ಲ ಅನ್ನುತ್ತೆ ವಿರೋಧ ಪಕ್ಷ.ಆಗಿದೆ ಬೇಕಿದ್ರೆ ನೋಡಿ ಅಂತಾರೆ ಆಡಳಿತ ಮಾಡಿರೋರು , ಹಾಗಿದ್ರೆ ತೋರ್ಸಿ ಅನ್ನುತ್ತೆ ವಿರೋಧ ಪಕ್ಷ.. . ಹೀಗೆ ಮಾತಿನ ಸಮರ ಮಾಧ್ಯಮದ ಮೂಲಕ ನಡೆಯುತ್ತೆ.ಎಲ್ಲೂ ಮುಖಾಮಿಖಿ ಆಗೋದೇ ಇಲ್ಲ. ಇದೆಲ್ಲಾ ಯಾವಾಗ ಚರ್ಚೆ ನಡೆಯೋದು ಗೊತ್ತಾ ಎಲೆಕ್ಷನ್ ಡಿಕ್ಲೇರ್ ಆಗಿ ಕ್ಯಾಂಡಿಡೇಟ್ ಸೆಲೆಕ್ಟಟ್ ಆದ ಬಳಿಕ ಪ್ರಚಾರ ಶುರು ಆದ ಮೇಲೆ. ಅಷ್ಟು ಸಮಯ ಸುಮ್ಮನಿದ್ದು ಚುನಾವಣೆ ಬಂದಾಗ ಇದೆಲ್ಲಾ ನೆನಪಾಗುತ್ತೆ. ಜನರನ್ನು ಗೊಂದಲ ಗೊಂದಲ ಮಾಡಿ ಹಾಕುತ್ತೆ. ಅದೇ ಹಳ್ಳಿ ಜನ ಬೆಳೆದ ಬೆಳೆಗಳಿಗೆ ಬೆಲೆ ಸಿಗಬೇಕು ಅನ್ನೋ ವಿಚಾರದಲ್ಲಿ ಒಬ್ಬನೇ ಒಬ್ಬ ಮಾತಾಡೋಲ್ಲ. ಮಾತನಾಡಿದರೂ ಎಲೆಕ್ಷನ್ ಮುಗಿದ ಮೇಲೆ ಮರೆತೇ ಹೋಗಿರುತ್ತೆ.
ಇನ್ನು ನೋಡಿ ಈಗೀಗ ಹಳ್ಳಿ ಜನಾನು ಸ್ವಲ್ಪ ಸ್ವಾರ್ಥ ನೋಡ್ತಾರೆ. ನೋಟು ಸಿಕ್ರೆ ಫೀಲ್ಡ್ , ಇಲ್ಲಾಂದ್ರೆ ಇಲ್ಲ.
ಆವತ್ತು ಕಾಲೇಜು ದಿನಗಳಲ್ಲಿ ಒಂದು ಇಂಟೆರೆಸ್ಟ್ ಇತ್ತು. ಫೀಲ್ಡ್ ಹೋಗೋದು ನಮಗೂ ಒಂದು ಖುಷಿ. ತಲೆಗೆ ಪಕ್ಷದ ಟೊಪ್ಪಿ ಹಾಕಿ ಉರಿಬಿಸಿಲಿನಲ್ಲೂ ಪಕ್ಷಕ್ಕಾಗಿ ಕೆಲಸ ಮಾಡುವುದೇ ಖುಷಿ. ಈಗ ಹಾಗಲ್ಲ. ಸ್ವಲ್ಪ ಯೋಚನೆ ಮಾಡಿದಾಗ ಓಟು ಹಾಕೋ ಕಾಲ. ಮೊನ್ನೆ ಹೀಗೇ ಸುಮ್ಮನೆ ಒಂದು ಪಾರ್ಟಿಯವರೊಂದಿಗೆ ಮಾತನಾಡುತ್ತಾ ಇದ್ದೆ. ಆಗ ಅಲ್ಲೊಬ್ಬ ಬಂದ. ಸ್ವಾಮೀ ಓಟು ಬಂತು ಇಂಥವರು ನಮ್ಮ ಕ್ಯಾಂಡಿಡೇಟ್ , ನಮಗೇ ಓಟು ಹಾಕಿ ಅಂದ್ರು. ಆಗ ಅವನಂದ , ನೋಡಿ ನನಗೆ ಆವತ್ತು ನಿಮ್ಮ ಈ ಕ್ಯಾಂಡಿಡೇಟ್ ನನ್ನ ಒಂದು ಕೇಸಲ್ಲಿ ಹೆಲ್ಪ್ ಮಾಡಿಲ್ಲ. ಹಾಗಾಗಿ ನಾನು ಅವರಿಗೆ ಓಟು ಹಾಕೋದಿಲ್ಲ ಅಂದ. ಮಾತು . . ಸಮಾಧಾನ . . ಓಲೈಕೆ ಎಲ್ಲಾ ನಡೀತು . ಕೊನೆಗೆ ಸರಿ ಆತ ಮುಂದೆ ಹೋದ. ಆ ನಂತರ ವಿಚಾರಿಸಿದಾಗ ತಿಳೀತು, ಆತ ಇನ್ನೊಂದು ಜಾಗವನ್ನು ಕಬಳಿಸಿ ಬೇಲಿ ಹಾಕಿದ್ದ. ಅದೊಂದು ಅಕ್ರಮ ಕೆಲಸ.ಇದಕ್ಕೆ ಸಪೋರ್ಟ್ ಮಾಡಿಲ್ಲ ಅಂತ ಈಗ ಓಟು ಹಾಕೋದಿಲ್ಲ ಅಂತ ಆತ ಹೇಳ್ತಿದ್ದಾನೆ ಅಂತ ಗೊತ್ತಾಯ್ತ. ನಾವು ಯಾವುದು ಅನ್ಯಾಯ , ಭ್ರಷ್ಠಾಚಾರ ಅಂತ ನಾವು ಹೇಳ್ತೆವೆಯೋ ಅದೇ ಕೆಲವೊಮ್ಮೆ ಹಳ್ಳಿ ಚುನಾವಣೆಯ ಇಶ್ಯೂ ಆಗುತ್ತೆ. ಅಲ್ಲಿ ಆತನ ಪ್ರಭಾವದಲ್ಲಿ ಐವತ್ತು ಓಟು ಇದೆ ಎಂದಾದರೆ ಯಾವ ರಾಜಕೀಯ ಪಕ್ಷ , ರಾಜಕಾರಣಿ ಅದೇ ಅನ್ಯಾಯಕ್ಕೆ ಸಹಕರಿಸೋದಿಲ್ಲ ಹೇಳೀ. ಅಂದು ಹಾಗೆ ಸಹಕರಿಸದೇ ಇದ್ದದ್ದು ಇಂದು ತೊಂದರೆಯಾಗಿದೆ. ಹಳ್ಳಿ ರಾಜಕೀಯದಲ್ಲಿ ಒಂದು ಓಟು ಕೂಡಾ ಮುಖ್ಯವಾಗುವ ಸಮಯದಲ್ಲಿ ಇಂತಹ ಸಂಗತಿಗಳು ಕೂಡಾ ಮುಖ್ಯವಾಗುತ್ತವೆ.
ಹಾಗಾಗಿ ಈ ಭ್ರಷ್ಠಾಚಾರ , ಅನ್ಯಾಯ , ಮೋಸ , ವಂಚನೆಗಳು ಹೇಗೆ ಆರಂಭವಾಯಿತು? ಹೇಗೆ ಮುಗಿಯುತ್ತೆ?.
ಇದೆಲ್ಲಾ ಹಳ್ಳಿ ರಾಜಕೀಯದ ತಲೆಬಿಸಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)